ಆ್ಯಪ್ನಗರ

ಇಂದಿನಿಂದ ಹೊಂಡದ ಶ್ರೀ ವೀರಭದ್ರೇಶ್ವರ ಜಾತ್ರೆ

ಧಾರವಾಡ: ನಗರದ ಜೆಎಸ್‌ಎಸ್‌ ಕಾಲೇಜಿನ ಹಿಂಭಾಗದ ಶ್ರೀ ಹೊಂಡದ ವೀರಭದ್ರೇಶ್ವರ ನಗರದಲ್ಲಿನ ಹೊಂಡದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಡಿ. 10ರಿಂದ 13 ವರೆಗೆ ಸಂಭ್ರಮದಿಂದ ಜರುಗಲಿದೆ ಎಂದು ಹೊಂಡದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಪ್ರಕಾಶ ಘಾಟಗೆ ಹೇಳಿದರು.

Vijaya Karnataka 10 Dec 2019, 5:00 am
ಧಾರವಾಡ: ನಗರದ ಜೆಎಸ್‌ಎಸ್‌ ಕಾಲೇಜಿನ ಹಿಂಭಾಗದ ಶ್ರೀ ಹೊಂಡದ ವೀರಭದ್ರೇಶ್ವರ ನಗರದಲ್ಲಿನ ಹೊಂಡದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಡಿ. 10ರಿಂದ 13 ವರೆಗೆ ಸಂಭ್ರಮದಿಂದ ಜರುಗಲಿದೆ ಎಂದು ಹೊಂಡದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಪ್ರಕಾಶ ಘಾಟಗೆ ಹೇಳಿದರು.
Vijaya Karnataka Web sri veerabhadreshwara fair at honda today
ಇಂದಿನಿಂದ ಹೊಂಡದ ಶ್ರೀ ವೀರಭದ್ರೇಶ್ವರ ಜಾತ್ರೆ


ನಗರದಲ್ಲಿಸೋಮವಾರ ಸುದ್ದಿಗೋಷ್ಟಿಯಲ್ಲಿಮಾತನಾಡಿದ ಅವರು, ಸುಮಾರು 200 ವರ್ಷಗಳಷ್ಟು ಹಳೆಯದಾದ ಹೊಂಡದ ವೀರಭದ್ರೇಶ್ವರ ದೇವಸ್ಥಾನದಲ್ಲಿಪ್ರತಿವರ್ಷದಂತೆ ಜಾತ್ರಾ ಮಹೋತ್ಸವ ನಡೆಯುತ್ತಿದೆ ಎಂದರು.

ಡಿ.10 ರಂದು ಸಂಜೆ 4ಕ್ಕೆ 501 ಸುಮಂಗಲೆಯರಿಂದ ಪೂರ್ಣಕುಂಭದ ಮೆರವಣಿಗೆ ನಡೆಯಲಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರದ ಮೂಕಪ್ಪ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸವರು. ನಗರದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ಹೊಸಯಲ್ಲಾಪೂರ, ಶುಕ್ರವಾರಪೇಟೆÜ,ಕಾಮನಕಟ್ಟಿ ಸರ್ಕಲ್‌, ಮಟ್ಟಿಪರಪ್ಪನಕೂಟ, ಜೋಶಿ ಗಲ್ಲಿಹಾಗೂ ಉಡುಪಿ ಓಣಿಯ ಮೂಲಕ ವೀರಭದ್ರೇಶ್ವರ ದೇವಸ್ಥಾನದವರೆಗೆ ಸುಮಂಗಲೆಯರ ಪೂರ್ಣಕುಂಭದ ಮೆರವಣಿಗೆಯನ್ನು ಸ್ವಾಗತಿಸಲಾಗುವುದು ಎಂದರು.

ಡಿ.11 ರಂದು ಬೆಳಗ್ಗೆ 6ಕ್ಕೆ ವೀರಭದ್ರೇಶ್ವರ ಗುಗ್ಗುಳ ಮೆರವಣಿಗೆ ಜತೆಗೆ ಸಾಮೂಹಿಕವಾಗಿ ಉಚಿತ ಗುಗ್ಗುಳ ಕಾರ್ಯಕ್ರಮ ಜರುಗಲಿದೆ. ಸಂಜೆ 6ಕ್ಕೆ ದೇವರ ಹುಚ್ಚಾಯ ಸ್ವಾಮಿಯ ಮೆರವಣಿಗೆ ನಡೆಯಲಿದೆ ಎಂದರು.

ಡಿ.12 ರಂದು ಬೆಳಗ್ಗೆ 5ಕ್ಕೆ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4.30ಕ್ಕೆ ವೀರಭದ್ರೇಶ್ವರ ರಥೋತ್ಸವವು ಸಕಲ ವಾದ್ಯ ಮೇಳ ಹಾಗೂ ಅಪಾರ ಪ್ರಮಾಣದ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿಸಂಭ್ರಮದಿಂದ ಜರುದಲಿದೆ ಎಂದರು.

ಡಿ. 13 ರಂದು ಮಧ್ಯಾಹ್ನ 12ಕ್ಕೆ ದೇವಸ್ಥಾನದ ಆವರಣದಲ್ಲಿಜರುಗುವ ಕಡುಬಿನ ಕಾಳಗದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ.ಆದ್ದರಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿಫಕ್ಕೀರಪ್ಪ ಪೂಜಾರ,ಆನಂದ ಸಿಂಗನಾಥ್‌, ಸಂಜಯ ಲಕಮನಹಳ್ಳಿ, ಹನಮಂತಪ್ಪ ಬೆಣಚಿ, ಶಿವಾನಂದ ದೇವಗಿರಿ, ಸುರೇಶ ಆನವೇರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ