ಆ್ಯಪ್ನಗರ

ಬರಪರಿಹಾರ ಕಾಮಗಾರಿ ಆರಂಭಿಸಿ

ಕುಂದಗೋಳ : ಬರದಿಂದ ತತ್ತರಿಸಿದ ರೈತರು ಸಂಕಷ್ಟಕ್ಕೀಡಾಗಿದ್ದು, ಬರ ಪರಿಹಾರ ಕಾಮಗಾರಿ ಇಲ್ಲದೆ, ಬೆಳೆವಿಮೆ ಇಲ್ಲದೆ, ಕಂಗಾಲಾದ ರೈತರ ನೆರವಿಗೆ ಸರಕಾರ ಬರಬೇಕೆಂದು ಎಂದು ರೈತಮುಖಂಡ ಮಲ್ಲಿಕಾರ್ಜುನ ಕಿತ್ತೂರ ಆಗ್ರಹಿಸಿದರು.

Vijaya Karnataka 15 Jun 2019, 5:00 am
ಕುಂದಗೋಳ : ಬರದಿಂದ ತತ್ತರಿಸಿದ ರೈತರು ಸಂಕಷ್ಟಕ್ಕೀಡಾಗಿದ್ದು, ಬರ ಪರಿಹಾರ ಕಾಮಗಾರಿ ಇಲ್ಲದೆ, ಬೆಳೆವಿಮೆ ಇಲ್ಲದೆ, ಕಂಗಾಲಾದ ರೈತರ ನೆರವಿಗೆ ಸರಕಾರ ಬರಬೇಕೆಂದು ಎಂದು ರೈತಮುಖಂಡ ಮಲ್ಲಿಕಾರ್ಜುನ ಕಿತ್ತೂರ ಆಗ್ರಹಿಸಿದರು.
Vijaya Karnataka Web DRW-14KND1
ಕುಂದಗೋಳ ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಮಹಾತ್ಮಾ ಗಾಂಧೀಜಿ ಭಾವಚಿತ್ರವಿಟ್ಟು ರೈತಪರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಹಾಗೂ ಕೂಲಿಕಾರ್ಮಿಕರು ಪ್ರತಿಭಟಿಸಿ ತಹಸೀಲ್ದಾರ ಅವರಿಗೆ ಮನವಿ ನೀಡಿದರು.


ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಶುಕ್ರವಾರ ರೈತಪರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಹಾಗೂ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿ ತಹಸೀಲ್ದಾರ ಅವರಿಗೆ ಮನವಿ ನೀಡಿ ಮಾತನಾಡಿದರು.

ಎನ್‌ಆರ್‌ಜಿ ಯೋಜನೆಯಡಿ ತಾಲೂಕಿನ ಪ್ರತಿ ಗ್ರಾಮದಲ್ಲೂ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು. ರೈತರಿಗೆ ಕೂಡಲೇ ಬೆಳೆಪರಿಹಾರ ಒದಗಿಸಬೇಕು, ಬೆಳೆವಿಮೆ ಬೇಗ ಬಿಡುಗಡೆ ಮಾಡಬೇಕು, ಜಿ.ಪಂ ವ್ಯಾಪ್ತಿಯಡಿ ಮೇವು ಬ್ಯಾಂಕ್‌ ತೆರೆಯಬೇಕು, ಸರಿಯಾಗಿ ಕುಡಿಯುವ ನೀರು ಸಿಗುವಂತೆ ನೋಡಿಕೊಳ್ಳಬೇಕು, ಸಾಲಮನ್ನಾ ದೃಢೀಕರಣ ಪತ್ರ ನೀಡಿ-ಮರುಸಾಲ ನೀಡುವಂತಾಗಬೇಕು, ಬೆಳೆವಿಮೆ ತಾರತಮ್ಯ ಹೋಗಲಾಡಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ವೈ.ಎನ್‌.ಪಾಟೀಲ, ಚಂದ್ರಶೇಖರ ಸೌದತ್ತಿ, ದೇವಪ್ಪ ಇಚ್ಚಂಗಿ, ವಾದಿರಾಜ ಕುಲಕರ್ಣಿ, ಶೇಖಪ್ಪ ಕಂಬಳಿ, ರವಿ ಯರಗುಪ್ಪಿ, ಗಂಗಪ್ಪ ಸಂಶಿ, ಶಂಕ್ರಪ್ಪ ನರಗುಂದ, ಚನಬಸಪ್ಪ ತಟ್ಟಿತೆಲಿ, ಈರಯ್ಯ ಹಿರೇಮಠ, ನಿಂಗಪ್ಪ ಪೂಜಾರ, ತೋಟಪ್ಪಗೌಡ ಪಾಟೀಲ, ನಾಗಪ್ಪ ಕಮ್ಮಾರ, ಶಿವರಾಜ ಖನೋಜ, ರಾಮಣ್ಣ ಅರ್ಣಣಿಗೇರಿ, ವೀರಪ್ಪ ಮಾರಡಗಿ, ವೆಂಕರಡ್ಡಿ ಇಟಗಿ, ರಮೇಶ ಸಂಶಿ ಸೇರಿದಂತೆ ನೂರಾರು ರೈತರು ಹಾಗೂ ರೈತಕಾರ್ಮಿಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ