ಆ್ಯಪ್ನಗರ

ಹತ್ತಿ ಖರೀದಿ ಶುರು

ಹುಬ್ಬಳ್ಳಿ : ಅಣ್ಣಿಗೇರಿ ಮತ್ತು ನವಲಗುಂದ ತಾಲೂಕು ವ್ಯಾಪ್ತಿಯ ಭಾರತೀಯ ಹತ್ತಿ ನಿಗಮದ ಅಣ್ಣಿಗೇರಿ ಶಾಖೆಯು 2019 -2020ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಅಣ್ಣಿಗೇರಿಯಲ್ಲಿಹತ್ತಿ ಖರೀದಿ ಆರಂಭಿಸಿದೆ.

Vijaya Karnataka 29 Apr 2020, 5:00 am
ಹುಬ್ಬಳ್ಳಿ : ಅಣ್ಣಿಗೇರಿ ಮತ್ತು ನವಲಗುಂದ ತಾಲೂಕು ವ್ಯಾಪ್ತಿಯ ಭಾರತೀಯ ಹತ್ತಿ ನಿಗಮದ ಅಣ್ಣಿಗೇರಿ ಶಾಖೆಯು 2019 -2020ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಅಣ್ಣಿಗೇರಿಯಲ್ಲಿಹತ್ತಿ ಖರೀದಿ ಆರಂಭಿಸಿದೆ.
Vijaya Karnataka Web 28 VIJU 2_21
ಹತ್ತಿ ಖರೀದಿ ಕೇಂದ್ರ ಆರಂಭಿಸಿದ ಹಿನ್ನೆಲೆಯಲ್ಲಿಎಪಿಎಂಸಿ ಅಧ್ಯಕ್ಷರಾದ ಗುರುನಾಥ್‌ ಸಿ. ಉಳ್ಳಾಗಡ್ಡಿ ನೇತೃತ್ವದಲ್ಲಿಅಣ್ಣೀಗೇರಿ ಎಪಿಎಂಸಿಯಲ್ಲಿರೈತರ ಸಭೆ ನಡೆಯಿತು.


ಹತ್ತಿ ಮಾರಾಟ ಮಾಡುವ ರೈತರು, ಮೇ 5ರೊಳಗೆ ಎಪಿಎಂಸಿ ಕಚೇರಿಯಲ್ಲಿಹೆಸರು ನೋಂದಾಯಿಸಬೇಕು. ಅಲ್ಲದೇ ರೈತರು ತಾವು ಬೆಳೆದ ಹತ್ತಿ ಹುಟ್ಟುವಳಿ ಮಾರಾಟ ಮಾಡಲು ವಿಧಿಸಿದ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಭಾರತೀಯ ಹತ್ತಿ ನಿಗಮ ಅಣ್ಣಿಗೇರಿ ಸಂಸ್ಥೆಗೆ ಹತ್ತಿ ಮಾರಾಟ ಮಾಡಲು ಬರವ ರೈತರು ಒಂದು ಪ್ರತಿ ಉತಾರ ತರಬೇಕು, ಜಿಪಿಎಸ್‌ದಲ್ಲಿಹತ್ತಿ ನಮೂದಾಗಿರಬೇಕು. ಗ್ರಾಮ ಲೆಕ್ಕಾಧಿಕಾರಿ ಧೃಢೀಕರಣ ಪತ್ರ ತರಬೇಕು. ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಕಾರ್ಡ್‌ನ್ನು ಎಪಿಎಂಸಿ ಕಚೇರಿಯಲ್ಲಿನೋಂದಣಿ ಮಾಡಿಸಿಕೊಳ್ಳಬೇಕು. ನಂತರ ಹತ್ತಿ ಮಾರಾಟಕ್ಕೆ ತರಲು ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು.

ನೋಂದಣಿ ಮತ್ತು ಮಾರಾಟಕ್ಕೆ ಖುದ್ದಾಗಿ ರೈತರೇ ಬರಬೇಕು. ಹತ್ತಿ ತೂಕಕ್ಕೆ ತರುವ ದಿನದಂದು ಮೂರು ಪ್ರತಿಗಳಲ್ಲಿಉತಾರ (ಪಹಣಿ), ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಕಾರ್ಡ್‌ ತರಬೇಕು. ನಿಗದಿತ ದಿನಾಂಕದಂದು ರೈತರು ಹತ್ತಿ ತರಬೇಕು. ಭಾರತೀಯ ಹತ್ತಿ ನಿಗಮವು ಖುಲ್ಲಾ ಹತ್ತಿಯನ್ನು ಖರೀದಿಸಲಿದೆ. ಚೀಲ, ಬಾರದಾನ ಅಥವಾ ಅಂಡಗಿಯಲ್ಲಿತಂದ ಹತ್ತಿಯನ್ನು ಖರೀದಿಸುವುದಿಲ್ಲ, ಎಫ್‌ಎಕ್ಯೂ ಗುಣಮಟ್ಟದ ಹತ್ತಿಯನ್ನು ಮಾತ್ರ ಖರೀದಿಸಲಾಗುತ್ತದೆ.

ಕೊರೊನಾ ಮಾರ್ಗಸೂಚಿ ಅನುಸರಿಸಿ
ಕೊರೊನಾ ಹಿನ್ನೆಲೆಯಲ್ಲಿರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಹೊರಡಿಸಿದ ಮಾರ್ಗಸೂಚಿಗಳನ್ನು ರೈತರು ಅನುಸರಿಸಬೇಕು. ಕೆಮ್ಮು , ಜ್ವರ ಉಸಿರಾಟದ ತೊಂದರೆ ಇರುವ ರೈತರು ಎಪಿಎಂಸಿ ಮತ್ತು ಸಿಸಿಐ ಖರೀದಿಯ ಸ್ಥಳಕ್ಕೆ ಬರಬಾರದು. ರೈತರು ಮಾಸ್ಕ್‌ ಧರಿಸಿರಬೇಕು.

ಸಭೆ: ಉಪವಿಭಾಗಾಧಿಕಾರಿ ಮಹಮದ್‌ ಜುಬೇರ್‌ ಅವರು ಅಣ್ಣಿಗೇರಿಯಲ್ಲಿಭಾರತೀಯ ಹತ್ತಿ ನಿಗಮದ ಅಧಿಕಾರಿಗಳ ಜತೆ ಸಭೆ ನಡೆಸಿ, ಜಿಲ್ಲೆಯಲ್ಲಿನಿಯಮಾನುಸಾರ ಹತ್ತಿ ಖರೀದಿ ತ್ವರಿತವಾಗಿ ಪ್ರಾರಂಭಿಸುವ ಕುರಿತು ಹಾಗೂ ಹತ್ತಿ ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌ ಮಿಲ್‌ಗಳ ಕಾರ್ಯಾರಂಭಕ್ಕೆ ಅನುಮತಿ ನೀಡುವ ಕುರಿತು ಚರ್ಚಿಸಿದರು.

ಹತ್ತಿ ಕೇಂದ್ರ ಸದ್ಬಳಕೆ ಮಾಡಿಕೊಳ್ಳಿ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌, ಶಾಸಕ ಶಂಕರ್‌ ಪಾಟೀಲ… ಮುನೇನಕೊಪ್ಪ ಅವರ ಪ್ರಯತ್ನದಿಂದ ಅಣ್ಣಿಗೇರಿ ಎಪಿಎಂಸಿಯಲ್ಲಿಭಾರತ ಹತ್ತಿ ನಿಗಮದಿಂದ ಹತ್ತಿ ಖರೀದಿ ಕೇಂದ್ರವನ್ನು ಪುನಾರಂಭ ಮಾಡಲಾಗಿದೆ.

ಆ ಮೂಲಕ ಆರ್ಥಿಕ ಸಂಕಷ್ಟಕ್ಕೀಡಾದ ರೈತರಿಗೆ ಸಂತಸ ಮೂಡಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ರೈತ ಮುಖಂಡರ ಸಭೆಯಲ್ಲಿಎಪಿಎಂಸಿ ಅಧ್ಯಕ್ಷ ಗುರುನಾಥ್‌ ಸಿ. ಉಳ್ಳಾಗಡ್ಡಿ ಹೇಳಿದ್ದಾರೆ.

ಸಭೆಯಲ್ಲಿಎಪಿಎಂಸಿ ಕಾರ್ಯದರ್ಶಿ ಎಂ.ಎಸ್‌.ನಡುವಿನಹಳ್ಳಿ, ಸದಸ್ಯರಾದ ಎಲ್ಲಪ್ಪ ಅಕ್ಕಿ ರೈತ, ಮುಖಂಡರಾದ ಸುಭಾಷ್‌ ಚಂದ್ರಗೌಡ ಪಾಟೀಲ…, ಷಣ್ಮುಖ ಗುರಿಕಾರ, ದೇವರಾಜ್‌ ದಾಡಿಬಾವಿ, ಭಗವಂತ ಪುಟ್ಟಣ್ಣವರ, ಶೇಖರ ಸೋಟಕನಾಳ, ಎ.ಪಿ.ಗುರಿಕಾರ, ನಿಂಗಶೆಟ್ಟಿ ರೋಣದ, ಮಂಜುನಾಥ ಶಾನವಾಡ, ಬಸನಗೌಡ ದೊಡಗೌಡರ, ವೆಂಕನಗೌಡ ದೊಡ್ಡಗೌಡರ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ