ಆ್ಯಪ್ನಗರ

ರಾಜ್ಯಮಟ್ಟದ ವಿಚಾರ ಸಂಕಿರಣ

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿಡೆವಲಪ್‌ಮೆಂಟ ಎಜುಕೇಶನ್‌ ಸರ್ವಿಸ್‌ (ಡೀಡ್ಸ), ಪೂರಕ ಕಾನೂನು ಸುಗಮಕಾರರ ನೆಟ್‌ವರ್ಕ ಹಾಗೂ ವಿಶ್ವವಿದ್ಯಾಲಯದ ವತಿಯಿಂದ ಮಹಿಳೆಯರ ಜತೆ ಕಾನೂನಿನ ನಡೆ ವಿಷಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಿತು.

Vijaya Karnataka 26 Jan 2020, 5:00 am
ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿಡೆವಲಪ್‌ಮೆಂಟ ಎಜುಕೇಶನ್‌ ಸರ್ವಿಸ್‌ (ಡೀಡ್ಸ), ಪೂರಕ ಕಾನೂನು ಸುಗಮಕಾರರ ನೆಟ್‌ವರ್ಕ ಹಾಗೂ ವಿಶ್ವವಿದ್ಯಾಲಯದ ವತಿಯಿಂದ ಮಹಿಳೆಯರ ಜತೆ ಕಾನೂನಿನ ನಡೆ ವಿಷಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಿತು.
Vijaya Karnataka Web state level symposium
ರಾಜ್ಯಮಟ್ಟದ ವಿಚಾರ ಸಂಕಿರಣ


ಪ್ರೊ.ಪಿ.ಈಶ್ವರ ಭಟ್‌ ಮಾತನಾಡಿ, ಕಾನೂನು ಜನರ ಬಳಿಗೆ ಹೋಗುವ ಅವಶ್ಯಕತೆ ಇದ್ದು, ಈ ದಿಸೆಯಲ್ಲಿಡೀಡ್ಸ ಸಂಸ್ಥೆಯು ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ನ್ಯಾಯಾಧೀಶ ಆರ್‌.ಎಸ್‌.ಚಿನ್ನಣ್ಣವರ ಮಾತನಾಡಿ, ಪೂರಕ ಕಾನೂನು ಸುಗಮಕಾರರಿಗೆ ಡಿಎಲ್‌ಎಸ್‌ಎನಿಂದ ಗುರುತಿನ ಪತ್ರ ನೀಡುವುದರ ಮುಖಾಂತರ ಪೂರಕ ಕಾನೂನು ಸ್ವಯಂ ಸೇವಕರನ್ನು ಸಕ್ರಿಯವಾಗಿ ಕಾನೂನು ನೆರವು ಕಾರ್ಯಕ್ರಮದಲ್ಲಿತೊಡಗಿಸಿಕೊಳ್ಳಲು ಸಹಾಯವಾಗುತ್ತದೆಂದು ತಿಳಿಸಿದರು.

ಡಾ.ಜಿ.ಬಿ.ಪಾಟೀಲ ಮಾತನಾಡಿದರು. ಮಂಗಳೂರು ಡೀಡ್ಸ್‌ ನಿರ್ದೇಶಕಿ ಮರ್ಲಿನ್‌ ಮಾರ್ಟಿಸ್‌ ಅಧ್ಯಕ್ಷತೆ ವಹಿಸಿದ್ದರು. ತುಕಾರಾಮ ಯಕ್ಕಾರ, ಮೋಹನಚಂದ್ರ, ಗಿರಿಜಾ ಪಾಟೀಲ, ನರಸಿಂಹರಾಜು ಕಮ್ಮಾರ, ಡಾ.ರಾಜೇಂದ್ರಕುಮಾರ ಹಿಟ್ಟಣಗಿ ಇದ್ದರು. ಡಾ.ಸುನಿಲ್‌ ಬಗಾಡೆ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ