ಆ್ಯಪ್ನಗರ

ಪರಿಸರ ಸ್ವಚ್ಛತೆಗೆ ಶ್ರಮಿಸಿ

ಹುಬ್ಬಳ್ಳಿ : ಟಿಪ್ಪು ಷಹೀದ್‌ ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಚ್ಛ ಪಖವಾಡ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷ ತೆ ವಹಿಸಿದ್ದ ಪ್ರಾ.ಎಂ.ಎಸ್‌.ಮುಲ್ಲಾ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ನಾವು ಆರೋಗ್ಯವಾಗಿರಬೇಕಾದರೆ ಸಮಾಜದ ಸುತ್ತ ಮುತ್ತಲಿನ

Vijaya Karnataka 12 Aug 2019, 5:00 am
ಹುಬ್ಬಳ್ಳಿ : ಟಿಪ್ಪು ಷಹೀದ್‌ ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಚ್ಛ ಪಖವಾಡ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web strive for environmental cleanliness
ಪರಿಸರ ಸ್ವಚ್ಛತೆಗೆ ಶ್ರಮಿಸಿ

ಅಧ್ಯಕ್ಷ ತೆ ವಹಿಸಿದ್ದ ಪ್ರಾ.ಎಂ.ಎಸ್‌.ಮುಲ್ಲಾ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ನಾವು ಆರೋಗ್ಯವಾಗಿರಬೇಕಾದರೆ ಸಮಾಜದ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಸ್ವಚ್ಛತೆ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸ್ವಚ್ಛತೆ ಬಗ್ಗೆ ಆದ್ಯತೆ ನೀಡಬೇಕು ಎಂದರು.

ಸಿವಿಲ್‌ ವಿಭಾಗದ ಮುಖ್ಯಸ್ಥ ರವೀಂದ್ರ ಸಿಂಗ್‌ ಅತ್ತರ ಮಾತನಾಡಿ, ಸ್ವಚ್ಛತೆ ಎನ್ನುವುದು ಒಂದು ದಿನದ ಕೆಲಸವಲ್ಲ.ನಿತ್ಯ ನಿರಂತರ ನಡೆಯುವಂತಹದು. ಸ್ವಚ್ಛ ಭಾರತವಾಗಲು ನಾವು ನಮ್ಮ ಮನೆಯಿಂದ ಗ್ರಾಮ ನಗರದಿಂದ ಜಿಲ್ಲೆ ರಾಜ್ಯದಿಂದ ರಾಷ್ಟ್ರ ಹಂತ ಹಂತವಾಗಿ ಸ್ವಚ್ಛತೆ ಮಾಡಬೇಕು ಎಂದರು.

ಆಟೋಮೊಬೈಲ್‌ ವಿಭಾಗದ ಮುಖ್ಯಸ್ಥ ಚಂದ್ರಶೇಖರ ತುಪ್ಪದ, ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು.

ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಎಂ.ಬಿ. ರವಿ ಸ್ವಚ್ಛ ಪಕವಾಡ ಅಭಿಯಾನದಲ್ಲಿ ನಡೆಸುವ ಸ್ವಚ್ಛತಾ ಕಾರ್ಯಕ್ರಮ ವಿವರಣೆ ನೀಡಿದರು. ವಿಜ್ಞಾನ ವಿಭಾಗಾಧಿಕಾರಿ ಬಾಳೇಶ ಹೆಗ್ಗಣ್ಣವರ ಕಾರ್ಯಕ್ರಮ ನಡೆಸಿಕೊಟ್ಟರು. ಎಫ್‌.ಎಚ್‌. ಕಿತ್ತೂರ, ಎಂ.ಎಚ್‌. ಧಾರವಾಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ