ಆ್ಯಪ್ನಗರ

ವಿದ್ಯಾರ್ಥಿ ಒಕ್ಕೂಟ, ಸಾಂಸ್ಕೃತಿಕ ಚಟುವಟಿಕೆ

ಧಾರವಾಡ : ಗುರಿ ಸಾಧನೆಗೆ ಬಾಹ್ಯ ಸೌಲಭ್ಯಗಳ ಜತೆಗೆ ಆಂತರಿಕ ಪ್ರೇರಣೆ ಮುಖ್ಯ ಎಂದು ಐಆರ್‌ಎಸ್‌ನ ಉಪ ಆಯುಕ್ತರಾದ ವನಶ್ರೀ ಹುಲ್ಲಣ್ಣನವರ ಹೇಳಿದರು. ನಗರದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿ ಒಕ್ಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Vijaya Karnataka Web 7 Aug 2019, 5:00 am
ಧಾರವಾಡ : ಗುರಿ ಸಾಧನೆಗೆ ಬಾಹ್ಯ ಸೌಲಭ್ಯಗಳ ಜತೆಗೆ ಆಂತರಿಕ ಪ್ರೇರಣೆ ಮುಖ್ಯ ಎಂದು ಐಆರ್‌ಎಸ್‌ನ ಉಪ ಆಯುಕ್ತರಾದ ವನಶ್ರೀ ಹುಲ್ಲಣ್ಣನವರ ಹೇಳಿದರು.
Vijaya Karnataka Web student union cultural activity
ವಿದ್ಯಾರ್ಥಿ ಒಕ್ಕೂಟ, ಸಾಂಸ್ಕೃತಿಕ ಚಟುವಟಿಕೆ

ನಗರದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿ ಒಕ್ಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿ ತನ್ನದೇ ಆದ ವ್ಯಕ್ತಿತ್ವ ಹೊಂದಿರುತ್ತಾನೆ. ಆ ವ್ಯಕ್ತಿತ್ವದ ಸರ್ವತೋಮುಖ ವಿಕಸನಕ್ಕೆ ವಿದ್ಯಾರ್ಥಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದು ಹೇಳಿದರು.

ಶ್ರೀ ಕೃಷ್ಣ ಎಂ.ಛಬ್ಬಿ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಮೌಲ್ಯಗಳು ಮುಖ್ಯ. ವಿದ್ಯಾರ್ಥಿಗಳು ವಿಷಯ ಜ್ಞಾನದ ಜತೆಗೆ ಶಿಕ್ಷ ಣದಿಂದ ನೈತಿಕತೆ ಅಳವಡಿಸಿಕೊಳ್ಳಬೇಕು ಎಂದರು.

ಎಚ್‌.ಸತೀಶ್‌, ಆರ್‌.ಜಿ.ಮಾಂಗ, ಆರ್‌.ಕೆ.ಇಸ್ಲಾಂಪುರೆ, ಶ್ವೇತಾ ನಾಯಕ, ಎಲ್‌.ಜಿ.ಮುಳಗುಂದ, ಉಪನ್ಯಾಸಕ ನಾಗರಾಜ ಸೇರಿದಂತೆ ಎಲ್ಲ ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಡಾ.ಎಸ್‌.ಎ.ಗೊರೇಬಾಳ ಪರಿಚಯಿಸಿದರು. ಡಾ.ಭರತ ನಾಯಕ ಪ್ರತಿಜ್ಞಾವಿಧಿ ಬೋಧಿಸಿದರು. ಎಂ.ಎಂ.ಕುರುಬರ ಸ್ವಾಗತಿಸಿದರು. ಎಸ್‌.ಎಂ.ಶಿಂತ್ರೆ ವಂದಿಸಿದರು. ಸೌಮ್ಯ ಕೋಳೂರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ