ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಗುರಿ ಅಗತ್ಯ: ಹೊರಟ್ಟಿ

ಧಾರವಾಡ : ವಿದ್ಯಾರ್ಥಿಗಳು ವಿದ್ಯಾರ್ಜನೆ ಹಂತದಲ್ಲಿ ಉದಾತ್ತ ಗುರಿಗಳನ್ನು ಹೊಂದಿ ಅವುಗಳನ್ನು ಈಡೇರಿಸಿಕೊಳ್ಳಲು ಶ್ರಮಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Vijaya Karnataka 4 Jul 2019, 5:00 am
ಧಾರವಾಡ : ವಿದ್ಯಾರ್ಥಿಗಳು ವಿದ್ಯಾರ್ಜನೆ ಹಂತದಲ್ಲಿ ಉದಾತ್ತ ಗುರಿಗಳನ್ನು ಹೊಂದಿ ಅವುಗಳನ್ನು ಈಡೇರಿಸಿಕೊಳ್ಳಲು ಶ್ರಮಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
Vijaya Karnataka Web students need goals
ವಿದ್ಯಾರ್ಥಿಗಳಿಗೆ ಗುರಿ ಅಗತ್ಯ: ಹೊರಟ್ಟಿ


ನಗರದ ಬಾಸೆಲ್‌ ಮಿಶನ್‌ ಬಾಲಕರ ಪ್ರೌಢಶಾಲೆಯಲ್ಲಿ ಶಾರದಾ ವಿ. ಪಾಟೀಲರ ಸ್ಮರಣಾರ್ಥ 120 ಬಡ ಮಕ್ಕಳಿಗೆ ಉಚಿತ ನೋಟಬುಕ್‌, ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಳ್ಗೊಂಡು ಮಾತನಾಡಿದರು.

ಮಕ್ಕಳು ದೇಶದ ಆಸ್ತಿ. ಅವರ ಶಿಕ್ಷ ಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸರಕಾರ ನೀಡುತ್ತಿದೆ. ಅಲ್ಲದೇ ಸಮಾಜ ಮುಖಿಯಾಗಿ ಶ್ಯಾಮ ಮತ್ತು ಜಗದೀಶ ಮಲ್ಲನಗೌಡರ ಸಹೋದರರು ಬಡಮಕ್ಕಳ ಶಿಕ್ಷ ಣಕ್ಕಾಗಿ ಉಚಿತ ನೋಟುಬುಕ್‌, ಪುಸ್ತಕಗಳನ್ನು ಪ್ರತಿವರ್ಷ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಎ.ಖಾಜಿ, ಚಾಕಲಬ್ಬಿ, ಗೋಪಾಲ ಭಟ್‌, ಶ್ಯಾಮ ಮಲ್ಲನಗೌಡರ, ಉಪಪ್ರಾಚಾರ್ಯರಾದ ರೀನಾ ದೇವದರ, ಶಿಕ್ಷ ಕ ಜಗದೀಶ ಮಲ್ಲನಗೌಡರ, ಆನಂದ ಕೋರಿ, ಸಿ.ಎ.ಸ್ವಿಪನ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ