ಆ್ಯಪ್ನಗರ

ಸಾಲದ ಬಾಕಿ ಮಾಹಿತಿ ಸಲ್ಲಿಸಿ

ಧಾರವಾಡ : ಕರ್ನಾಟಕ ಋುಣ ಪರಿಹಾರ ವಿಧೇಯಕ 2018 ಜು.23, 2019 ರಿಂದ ಜಾರಿಗೆ ಬಂದಿದೆ. ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗಗಳ ಜನರಿಗೆ ಋುಣದ ಪರಿಹಾರ ಒದಗಿಸಲು ಇದು ಪ್ರಮುಖ ಸಾಧನವಾಗಿದೆ.

Vijaya Karnataka 17 Aug 2019, 5:00 am
ಧಾರವಾಡ : ಕರ್ನಾಟಕ ಋುಣ ಪರಿಹಾರ ವಿಧೇಯಕ 2018 ಜು.23, 2019 ರಿಂದ ಜಾರಿಗೆ ಬಂದಿದೆ. ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗಗಳ ಜನರಿಗೆ ಋುಣದ ಪರಿಹಾರ ಒದಗಿಸಲು ಇದು ಪ್ರಮುಖ ಸಾಧನವಾಗಿದೆ.
Vijaya Karnataka Web submit loan balance information
ಸಾಲದ ಬಾಕಿ ಮಾಹಿತಿ ಸಲ್ಲಿಸಿ


ಈ ಕಾಯಿದೆಯು ಜಾರಿಗೆ ಬಂದ ದಿನಾಂಕದಿಂದ 90 ದಿನಗಳೊಳಗೆ ಆಯಾ ಪ್ರದೇಶದ ಅಧಿಕಾರ ವ್ಯಾಪ್ತಿ ಹೊಂದಿರುವ ಋುಣ ಪರಿಹಾರ ಅಧಿಕಾರಿಗೆ ನಿಗದಿತ ನಮೂನೆಯಲ್ಲಿ ಲೇಣಿದಾರನು ಸಾಲದ ಬಾಕಿ ಇರುವ ವಿವರಗಳುಳ್ಳ ಮಾಹಿತಿ ಸಲ್ಲಿಸಬೇಕಾಗುತ್ತದೆ.

ಸಾಲ ಪಡೆದಿರುವವರ ಪರವಾಗಿ ಜಾಮೀನುದಾರರು ಸಹ ಅಡಮಾನ ಮಾಡಿದ ಚರ, ಸ್ಥಿರ, ಚಿನ್ನಾಭರಣ ವಾಪಸ್ಸಾತಿ ಕೋರಿ ಋುಣ ಪರಿಹಾರ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಋುಣ ಪರಿಹಾರ ಅಧಿಕಾರಿಯು ಖಾಸಗಿ ಲೇವಾದೇವಿಗಾರರು ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಈ ಕಾಯಿದೆಯಡಿ ಪರಿಹಾರ ನೀಡಲು ಅವನು ಅರ್ಹನಾಗಿರುವ ಬಗ್ಗೆ ನಿರ್ಣಯಿಸಿ ಆದೇಶ ಮಾಡಬೇಕಾಗಿರುತ್ತದೆ.

ಋುಣ ಪರಿಹಾರ ಅಧಿಕಾರಿಯು ಋುಣ ಪರಿಹಾರ ಕೋರಿ ಬರುವ ಜನರ ಪರವಾಗಿ ಮಾಡಿದ ಆದೇಶ, ನಿರ್ದೇಶನವನ್ನು ಸಾಲ ನೀಡಿದಂತಹ ವ್ಯಕ್ತಿಯು ಪಾಲಿಸಲು ವಿಫಲನಾದರೆ, ಅಂತಹವರಿಗೆ ಒಂದು ವರ್ಷದವರೆಗೆ ಜೈಲು ಹಾಗೂ 1ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿರುತ್ತದೆ.

ಕರ್ನಾಟಕ ಋುಣ ಪರಿಹಾರ ಅಧಿಕಾರಿಯು ಮಾಡಿದ ಆದೇಶದಿಂದ ಬಾಧಿತನಾದ ವ್ಯಕ್ತಿಯು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪುನರ್‌ಪರಿಶೀಲನಾ ಅರ್ಜಿಯನ್ನು ಆದೇಶ ಹೊರಡಿಸಿದ 30 ದಿನಗಳೊಳಗಾಗಿ ಸಲ್ಲಿಸಲು ಅವಕಾಶವಿರುತ್ತದೆ. ಹೆಚ್ಚಿನ ವಿವರಗಳಿಗೆ 0836-2743526 ಸಂಪರ್ಕಿಸಬಹುದು ಎಂದು ಧಾರವಾಡ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಬಿ. ಪೂಜಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ