ಆ್ಯಪ್ನಗರ

ಸತತ ಅಧ್ಯಯನದಿಂದ ಯಶಸ್ಸು

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯಶಸ್ಸು ಸಾಧಿಸಲು ಸತತ ಅಧ್ಯಯನ ಅಗತ್ಯ ಎಂದು ಎಸಿಪಿ ಎಂ.ಎನ್‌. ರುದ್ರಪ್ಪ ಹೇಳಿದರು. ಕ್ಲಾಸಿಕ್‌ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಕ್ಲಾಸಿಕ್‌ ಪದವಿ ಮಹಾವಿದ್ಯಾಲಯದಲ್ಲಿಬಿಎ, ಬಿಕಾಂ ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ

Vijaya Karnataka 14 Dec 2019, 5:00 am
ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯಶಸ್ಸು ಸಾಧಿಸಲು ಸತತ ಅಧ್ಯಯನ ಅಗತ್ಯ ಎಂದು ಎಸಿಪಿ ಎಂ.ಎನ್‌. ರುದ್ರಪ್ಪ ಹೇಳಿದರು.
Vijaya Karnataka Web success by continuous study
ಸತತ ಅಧ್ಯಯನದಿಂದ ಯಶಸ್ಸು

ಕ್ಲಾಸಿಕ್‌ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಕ್ಲಾಸಿಕ್‌ ಪದವಿ ಮಹಾವಿದ್ಯಾಲಯದಲ್ಲಿಬಿಎ, ಬಿಕಾಂ ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಎಲ್ಲಮೂಲಗಳಿಂದ ಜ್ಞಾನವನ್ನು ಸಂಗ್ರಹಿಸಿಕೊಳ್ಳಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಸಮಾನವಾಗಿ ಪಾಲ್ಗೊÙಳ್ಳಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್‌ ಸಂಸ್ಥೆಯ ಮುಖ್ಯ ಆಡಳಿತಾತ್ಮಕ ಸಂಯೋಜಕ ಐ. ಜಿ. ಚೌಗಲಾ ಮಾತನಾಡಿ, ಮಾನವ ಸಂಪನ್ಮೂಲ ದೇಶಕ್ಕೆ ಬಹುಮೌಲ್ಯಯುತವಾಗಿರುವುದರಿಂದ ಗುಣಮಟ್ಟದ ಸೇವಾ ವರ್ಗ ಆಡಳಿತಕ್ಕೆ ಅಗತ್ಯವಿದೆ ಎಂದರು.

ಡಾ. ಆರ್‌.ವಿ. ಚಿಟಗುಪ್ಪಿ, ದೀಪಕ ಜೋಡಂಗಿ, ಕುಸುಮಾ ವೈ. ಎಸ್‌.ಪ್ರೊ. ಹೇಮಂತ ಕರ್ಜಗಿ

ಉಪಸ್ಥಿತರಿದ್ದರು. ಡಾ.ಎಂ.ವೈ.ಸಾವಂತ ಸ್ವಾಗತಿಸಿದರು. ಐಶ್ವರ್ಯ ದೊಡಮನಿ ಪ್ರಾರ್ಥಿಸಿದರು. ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು. ಪ್ರೊ.ವಿ.ಎಂ. ಕಾಲಾಳದ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ