ಆ್ಯಪ್ನಗರ

ಜ. 8ಕ್ಕೆ ಮುಷ್ಕರಕ್ಕೆ ಬೆಂಬಲ

ಧಾರವಾಡ: ಭಾರತದ ಸಂಘಟಿತ, ಅಸಂಘಟಿತ ಹಾಗೂ ಸೇವಾ ಕ್ಷೇತ್ರದ 40 ಕೋಟಿ ಕಾರ್ಮಿಕರು ಜ.8ರಂದು ಸಂಪೂರ್ಣ ಉತ್ಪಾದನೆ ಮತ್ತು ಸೇವೆ ಸ್ಥಗಿತಗೊಳಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಅಖಿಲ ಭಾರತ ಮುಷ್ಕರದಲ್ಲಿಪಾಲ್ಗೊಳ್ಳಲಿದ್ದು, ಈ ಮುಷ್ಕರಕ್ಕೆ ಟಾಟಾ ಮಾರ್ಕೋಪೋಲೊ ಕ್ರಾಂತಿಕಾರಿ ಕಾರ್ಮಿಕ ಸಂಘ ಬೆಂಬಲ ನೀಡಿದೆ.

Vijaya Karnataka 6 Jan 2020, 5:00 am
ಧಾರವಾಡ: ಭಾರತದ ಸಂಘಟಿತ, ಅಸಂಘಟಿತ ಹಾಗೂ ಸೇವಾ ಕ್ಷೇತ್ರದ 40 ಕೋಟಿ ಕಾರ್ಮಿಕರು ಜ.8ರಂದು ಸಂಪೂರ್ಣ ಉತ್ಪಾದನೆ ಮತ್ತು ಸೇವೆ ಸ್ಥಗಿತಗೊಳಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಅಖಿಲ ಭಾರತ ಮುಷ್ಕರದಲ್ಲಿಪಾಲ್ಗೊಳ್ಳಲಿದ್ದು, ಈ ಮುಷ್ಕರಕ್ಕೆ ಟಾಟಾ ಮಾರ್ಕೋಪೋಲೊ ಕ್ರಾಂತಿಕಾರಿ ಕಾರ್ಮಿಕ ಸಂಘ ಬೆಂಬಲ ನೀಡಿದೆ.
Vijaya Karnataka Web support for the strike at 8th
ಜ. 8ಕ್ಕೆ ಮುಷ್ಕರಕ್ಕೆ ಬೆಂಬಲ


ಈ ಕುರಿತು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮರತಮ್ಮನವರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ 1947ರ ನಂತರ ದೇಶದ ಕಾರ್ಮಿಕರು ಹೋರಾಡಿ ಪಡೆದ 44 ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ಮುಂದಾಗಿ ಜಾರಿಯಲ್ಲಿರುವ ಕಾನೂನಿನಲ್ಲಿಕಾರ್ಮಿಕ ಪರ ಹಕ್ಕು ಮೊಟಕುಗೊಳಿಸಿ ಏಕೈಕ ಬಂಡವಾಳಿಗ ಕಂಪನಿ, ಕಾಪೋರ್‍ರೇಟರ್‌ಗಳ ಹಿತ ಕಾಪಾಡಲಿಕ್ಕಾಗಿ 44ರ ಬದಲು ಕೇವಲ ನಾಲ್ಕು ಕಾರ್ಮಿಕ ಸಂಹಿತೆ(ಲೇಬರ್‌ ಕೋಡ್‌) ತಂದು ಜಾರಿಯಲ್ಲಿರುವ ಕಾರ್ಮಿಕ ಕಾನೂನುಗಳ ಕತ್ತು ಹಿಸುಕುತಿದ್ದಾರೆ. ಹೀಗಾಗಿ ಪ್ರತಿಭಟನೆ ಹಮ್ಮಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ (ಟಿಯುಸಿಐ) ಹಾಗೂ ಮಜ್ದೂರ ಅಧಿಕಾರ ಸಂಘರ್ಷ ಅಭಿಯಾನ (ಮಾಸಾ) ಒಳಗೊಂಡ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶದ ಕಾರ್ಮಿಕರಿಗೆ ಜ.8ರಂದು ಮುಷ್ಕರ ಹೂಡಲು ಕರೆ ಕೊಟ್ಟಂತೆ ಕನಿಷ್ಟ ವೇತನ 25,000ರೂ ಜಾರಿ, ಗುತ್ತಿಗೆ ಕಾರ್ಮಿಕ ಪದ್ದತಿ ರದ್ದತಿಗಾಗಿ ಹಾಗೂ ತಕ್ಷಣದಿಂದಲೇ 4 ಲೇಬರ್‌ ಕೋಡ್‌ ತರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬೇಲೂರು ಕೈಗಾರಿಕಾ ಪ್ರದೇಶದ ಟಾಟಾ-ಮಾರ್ಕೊಪೋಲೊ ಮೋಟರ್ಸ್‌ ಲಿಮಿಟೆಡ್‌ ಕಂಪನಿಯ ಕ್ರಾಂತಿಕಾರಿ ಕಾರ್ಮಿಕ ಯೂನಿಯನ್‌ ನ ಸಾವಿರಾರು ಕಾರ್ಮಿಕರು ಅಂದು ಸಂಪೂರ್ಣ ಉತ್ಪಾದನೆಯಿಂದ ಹೊರಗುಳಿದು ನಗರದ ಬೀದಿಗಳಲ್ಲಿರಾರ‍ಯಲಿ ಪ್ರದರ್ಶನ ನಡೆಸಲಿದ್ದಾರೆ. ಈ ಹಿನ್ನೆಲೆ ಕಾರ್ಮಿಕ ಶ್ರಮಜೀವಿಗಳು ಮುಷ್ಕರವನ್ನು ಬೆಂಬಲಿಸಿಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ