ಆ್ಯಪ್ನಗರ

ಬೇಡಿಕೆ ಈಡೇರಿಸಲು ಸಾಂಕೇತಿಕ ಧರಣಿ

ಧಾರವಾಡ: ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಹಾಯಕ ಕೃಷಿ ಅಧಿಕಾರಿಗಳ ಸಂಘದ ಸದಸ್ಯರು ಜಂಟಿ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿಸಾಂಕೇತಿಕ ಧರಣಿ ನಡೆಸಿದರು.

Vijaya Karnataka 21 Sep 2019, 5:00 am
ಧಾರವಾಡ: ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಹಾಯಕ ಕೃಷಿ ಅಧಿಕಾರಿಗಳ ಸಂಘದ ಸದಸ್ಯರು ಜಂಟಿ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿಸಾಂಕೇತಿಕ ಧರಣಿ ನಡೆಸಿದರು.
Vijaya Karnataka Web symbolic demand to meet demand
ಬೇಡಿಕೆ ಈಡೇರಿಸಲು ಸಾಂಕೇತಿಕ ಧರಣಿ


ಈ ವೇಳೆ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಮಾಡಿಕೊಂಡ ಸದಸ್ಯರು, 30 ರಿಂದ 35 ವರ್ಷಗಳ ಕೃಷಿ ಇಲಾಖೆಯಲ್ಲಿಸಿಬ್ಬಂದಿ ಕೊರತೆ ಇದೆ. ಹೀಗಿದ್ದರೂ ಯೋಜನೆಗಳ ಅನುಷ್ಠಾನದಲ್ಲಿಪ್ರಗತಿ ಸಾಧಿಸಲಾಗಿದೆ.ಆದರೆ, ಜಿಲ್ಲೆಯಲ್ಲಿಶೇ.80ರಷ್ಟು ಸಿಬ್ಬಂದಿ ಕೊರತೆ ಇದೆ. ಆದರೆ, ಕೆಲವು ಯೋಜನೆಗಳ ಜತæಗೆ ಬೇರೆ ಇಲಾಖೆಗಳ ಕಾರ್ಯನಿರ್ವಹಿಸುವುದರಿಂದ ದಿನದಿಂದ ದಿನಕ್ಕೆ ಕೆಲಸಗಳ ಒತ್ತಡÜ ಹೆಚ್ಚಾಗುತ್ತಿದೆ. ನೌಕರರು ಶೇ.90ರಷ್ಟು ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳಾಗಿದ್ದಾರೆ. ಕಚೇರಿಯಲ್ಲಿದೋಷಪೂರಿತ ತಂತ್ರಾಂಶಗಳಿವೆ. ಇವುಗಳಲ್ಲಿಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲಾಖೆಯಲ್ಲಿಸಿಬ್ಬಂದಿ ಕೊರತೆ ನೀಗಿಸಬೇಕು. ಅನ್ಯ ಇಲಾಖೆಗಳ ಕೆಲಸ ವಹಿಸಬಾರದು. 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕೃಷಿ ಅಧಿಕಾರಿಗಳಿಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಜಿಲ್ಲೆಯ ಸಂಘದ ಅಧ್ಯಕ್ಷ ಮೊಹನ್‌ ಲಕ್ಕಮ್ಮನವರ, ಸಹಾಯಕ ಕೃಷಿ ಅಧಿಕಾರಿ ಎಚ್‌. ಎಂ. ಬಾದಾಮಿ, ರಾಜ್ಯ ಉಪಾಧ್ಯಕ್ಷ ರಮೇಶ ಅರಕೇರಿ, ಎಚ್‌. ಕೆ. ಜಮಾದಾರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ