ಆ್ಯಪ್ನಗರ

ಅಧಿಕ ಅಂಕ ಗಳಿಸಿದವರಿಗೆ ಟ್ಯಾಬ್‌ ವಿತರಣೆ

ಧಾರವಾಡ : ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಪ್ರಕಲ್ಪ ವಿವೇಕಾ ಸ್ಕಾಲರ್‌ ಪ್ರೋಗ್ರಾಂ ಅಡಿಯಲ್ಲಿಧಾರವಾಡದ ವಿದ್ಯಾ ಪಿ. ಹಂಚಿನಮನಿ ಪಿಯು ಕಾಲೇಜಿನಲ್ಲಿದ್ವಿತೀಯ ಪಿಯುಸಿ ಓದುತ್ತಿರುವ 10 ವಿದ್ಯಾರ್ಥಿಗಳಿಗೆ ಶ್ರೀ ಶಾಂತೇಶ ಎಜ್ಯುಕೇಶನ್‌ ಸೊಸೈಟಿ ಕಾರ್ಯದರ್ಶಿ ಮನೋಜ ಹಂಚಿನಮನಿ ಉಚಿತವಾಗಿ ಟ್ಯಾಬ್‌ ವಿತರಿಸಿದರು.

Vijaya Karnataka 8 Jul 2020, 5:00 am
ಧಾರವಾಡ : ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಪ್ರಕಲ್ಪ ವಿವೇಕಾ ಸ್ಕಾಲರ್‌ ಪ್ರೋಗ್ರಾಂ ಅಡಿಯಲ್ಲಿಧಾರವಾಡದ ವಿದ್ಯಾ ಪಿ. ಹಂಚಿನಮನಿ ಪಿಯು ಕಾಲೇಜಿನಲ್ಲಿದ್ವಿತೀಯ ಪಿಯುಸಿ ಓದುತ್ತಿರುವ 10 ವಿದ್ಯಾರ್ಥಿಗಳಿಗೆ ಶ್ರೀ ಶಾಂತೇಶ ಎಜ್ಯುಕೇಶನ್‌ ಸೊಸೈಟಿ ಕಾರ್ಯದರ್ಶಿ ಮನೋಜ ಹಂಚಿನಮನಿ ಉಚಿತವಾಗಿ ಟ್ಯಾಬ್‌ ವಿತರಿಸಿದರು.
Vijaya Karnataka Web 7NIJAGUNI2_21
ಧಾರವಾಡದ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಕಚೇರಿಯಲ್ಲಿನಡೆದ ಕಾರ್ಯಕ್ರಮದಲ್ಲಿದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಿಸಲಾಯಿತು.


ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಕಚೇರಿಯಲ್ಲಿಕಾರ್ಯಕ್ರಮ ನಡೆಯಿತು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ 69 ಮಕ್ಕಳಿಗೆ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ವಿವೇಕಾ ಸ್ಕಾಲರ್‌ ಪ್ರೋಗ್ರಾಂ ಅಡಿ ಹಂಚಿನಮನಿ ಕಾಲೇಜಿನಲ್ಲಿಉಚಿತವಾಗಿ ಪ್ರವೇಶ ನೀಡಲಾಗಿದೆ. ಈ ಬಾರಿಯ ಪ್ರಥಮ ಪಿಯುನಲ್ಲಿಅತಿ ಹೆಚ್ಚು ಅಂಕ ಗಳಿಸಿದವರಿಗೆ ಟ್ಯಾಬ್‌ ವಿತರಿಸಲಾಯಿತು.

ಮನೋಜ ಹಂಚಿನಮನಿ ಮಾತನಾಡಿ, ಬೆಂಗಳೂರಿನ ದಾನಿಯೊಬ್ಬರು ನೀಡಿರುವ ಟ್ಯಾಬ್‌ಗಳನ್ನು ಮಕ್ಕಳಿಗೆ ನೀಡಲಾಗಿದೆ ಎಂದರು.

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಉತ್ತರ ಕರ್ನಾಟಕ ಕಾರ್ಯಕ್ರಮ ಸಂಯೋಜಕ ಜಯಂತ ಕೆ.ಎಸ್‌. ಮಾತನಾಡಿ, ಕೊರೊನಾದಂತಹ ಸವಾಲಿನ ಮಧ್ಯೆಯೂ ಹಂಚಿನಮನಿ ಕಾಲೇಜಿನ ಆಡಳಿತ ಮಂಡಳಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದೆ. ಮತ್ತು ಮಕ್ಕಳಿಗೆ ಟ್ಯಾಬ್‌ ನೀಡಿ ಆನ್‌ಲೈನ್‌ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಡುತ್ತಿದೆ ಎಂದರು.

ಹಂಚಿನಮನಿ ಕಾಲೇಜಿನ ನಿಖಿಲ ಕುಲಕರ್ಣಿ, ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಪ್ರೋಗ್ರಾಂ ಮ್ಯಾನೇಜರ್‌ ಗುರು ಮದ್ನಳ್ಳಿ, ಬಸವರಾಜ ಕೊಟಬಾಗಿ, ವಿನಯ ಕುಮಾರ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ