ಆ್ಯಪ್ನಗರ

ಮಳೆಗೆ ಕೊಂಚ ಬಿಡುವು

ಧಾರವಾಡ : ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರ ನಗರ ಸೇರಿದಂತೆ ಜಿಲ್ಲಾದ್ಯಂತ ಎರಡು ದಿನ ಅಬ್ಬರಿಸಿದ್ದ ಮಳೆ ಸೋಮವಾರ ಬಿಡುವು ನೀಡಿತ್ತು. ಆಗಾಗ ಜಿಟಿ ಜಿಟಿ ಮಳೆ ಹೊರತಾಗಿ ಬಿಸಿಲಿನ ವಾತಾವರಣ ಕಂಡುಬಂತು.

Vijaya Karnataka 2 Jul 2019, 5:00 am
ಧಾರವಾಡ : ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರ ನಗರ ಸೇರಿದಂತೆ ಜಿಲ್ಲಾದ್ಯಂತ ಎರಡು ದಿನ ಅಬ್ಬರಿಸಿದ್ದ ಮಳೆ ಸೋಮವಾರ ಬಿಡುವು ನೀಡಿತ್ತು. ಆಗಾಗ ಜಿಟಿ ಜಿಟಿ ಮಳೆ ಹೊರತಾಗಿ ಬಿಸಿಲಿನ ವಾತಾವರಣ ಕಂಡುಬಂತು.
Vijaya Karnataka Web take a moment to shower
ಮಳೆಗೆ ಕೊಂಚ ಬಿಡುವು


ಜೂನ್‌ ತಿಂಗಳ ಅಂತ್ಯದಲ್ಲಿ ಜಿಲ್ಲೆಯ ಬಹುತೇಕ ಕಡೆ ಮುಂಗಾರು ಮಳೆ ಚುರುಕಾಗಿದ್ದು ಕೃಷಿ ಚಟುವಟಿಕೆ ಕೊಂಚ ಬಿರುಸು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಕೆಲ ದಿನಗಿಳಿಂದ ಉತ್ತಮ ಮಳೆ ಆಗುತ್ತಿದ್ದರೂ ವಾಡಿಕೆ ಮಳೆಗಿಂತ ಕಡಿಮೆ ಮಳೆ ಆಗುವ ಮೂಲಕ ಕೃಷಿ ಚಟುವಟಿಕೆಗೆ ಹಿನ್ನೆಡೆ ಆಗಿದೆ.

ಸೋಮವಾರ ಜಿಲ್ಲೆಯಲ್ಲಿ 27.3 ಮಿ.ಮಿ. ಮಳೆ ದಾಖಲಾಗಿದ್ದು, ಅಮ್ಮಿನಬಾವಿ 40.0ಮಿ.ಮೀ. ರೈಲೈ ಸ್ಟೇಶನ್‌ 33.0ಮಿ.ಮೀ, ಮುಗದ ಫಾರ್ಮ57.4ಮಿ.ಮೀ,ಹೆಬ್ಬಳ್ಳಿ ಫಾರ್ಮ 39.0ಮಿ.ಮೀ, ಜಿಲ್ಲಾ ಆಸ್ಪತ್ರೆ 38.4ಮಿ.ಮೀ,ಕೃಷಿ ವಿಶ್ವವಿದ್ಯಾಲಯ 45.6ಮಿ.ಮೀ ,ತೇಗೂರ ಫಾರ್ಮ 56.2 ಮಿ.ಮೀ ಮಳೆ ಆಗಿದೆ.

ಜೂನ ತಿಂಗಳ ವಾಡಿಕೆ ಮಳೆ ಪ್ರಮಾಣ 116.ಮಿ.ಮಿ ಸದ್ಯ 56ಮಿ.ಮೀ ಮಳೆ ಆಗಿದ್ದು ಶೇ.35 ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ, ನವಲಗುಂದದಲ್ಲಿ ತಕ್ಕ ಮಟ್ಟಿಗೆ ಉತ್ತಮ ಬಿತ್ತನೆ ಆಗಿದೆ. ಉಳಿದಂತೆ ಬಹುಪಾಲು ಭಾಗ ಉತ್ತಮ ಮಳೆ ಆಗದ ಕಾರಣ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ