ಆ್ಯಪ್ನಗರ

ಭಯೋತ್ಪಾದಕರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಿ

ಕುಂದಗೋಳ : ಪುಲ್ವಮಾದ ಹತ್ತಿರದಲ್ಲಿ ನಡೆದ ಪಾಕಿಸ್ತಾನ ಉಗ್ರರ ಕೃತ್ಯ ಖಂಡಿಸಿ ಕೂಡಲೇ ಅವರ ವಿರುದ್ಧ ಉಗ್ರಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ತಹಸೀಲ್ದಾರ ಬಿ.ಎಂ.ಮೆಳವಂಕಿ ಮೂಲಕ ತಾಲೂಕು ವಕೀಲರ ಸಂಘವು ಮನವಿ ಸಲ್ಲಿಸಿತು.

Vijaya Karnataka 19 Feb 2019, 5:00 am
ಕುಂದಗೋಳ : ಪುಲ್ವಮಾದ ಹತ್ತಿರದಲ್ಲಿ ನಡೆದ ಪಾಕಿಸ್ತಾನ ಉಗ್ರರ ಕೃತ್ಯ ಖಂಡಿಸಿ ಕೂಡಲೇ ಅವರ ವಿರುದ್ಧ ಉಗ್ರಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ತಹಸೀಲ್ದಾರ ಬಿ.ಎಂ.ಮೆಳವಂಕಿ ಮೂಲಕ ತಾಲೂಕು ವಕೀಲರ ಸಂಘವು ಮನವಿ ಸಲ್ಲಿಸಿತು.
Vijaya Karnataka Web take action against the terrorists
ಭಯೋತ್ಪಾದಕರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಿ


ಕೋರ್ಟ್‌ ಕಲಾಪಗಳಿಂದ ದೂರುಳಿದ ನ್ಯಾಯವಾದಿಗಳು ಉಗ್ರರ ಕುಕೃತ್ಯದಲ್ಲಿ ಹುತಾತ್ಮರಾದ 44 ಯೋಧರ ಆತ್ಮಕ್ಕೆ ಶಾಂತಿ ಕೋರಿ ನಂತರ ತಹಸೀಲ್ದಾರ ಕಚೇರಿಗೆ ಆಗಮಿಸಿ ಕೂಡಲೇ ಭಯೋತ್ಪಾದಕರ ದಮನಕ್ಕೆ ಕೇಂದ್ರ ಸರಕಾರ ಮುಂದಾಗಿ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ಪಾಟೀಲ, ಕಾರ್ಯದರ್ಶಿ ವೈ.ಎಂ.ತಹಸೀಲ್ದಾರ, ಹಿರಿಯ ನ್ಯಾಯವಾದಿಗಳಾದ ಅಶೋಕ ಕ್ಯಾರಕಟ್ಟಿ, ಅಶೋಕ ಕಟಗಿ, ಜಿ.ಬಿ.ಸೊರಟೂರ, ಆರ್‌.ಎನ್‌.ಕಮತದ, ಪ್ರಕಾಶ ಸೊರಟಿ, ಮಂಜುನಾಥ ಬೂದಿಹಾಳ, ಐ.ಎಂ.ಕೋಣನವರ, ಯು.ಎಂ.ಪಾಟೀಲ, ಆರ್‌.ಬಿ.ತೊಂಡೂರ, ಪಿ.ಎಸ್‌.ಪಾಟೀಲ, ನಾರಾಯಣ ಹಂಚಾಟೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ