ಹುಬ್ಬಳ್ಳಿ : ಸಂಸದರಾಗಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಈ ಹಿಂದೆ ಶ್ರಮಿಸಿದಂತೆ ಸಚಿವರಾಗಿಯೂ ಅದನ್ನು ಮುಂದುವರಿಸಬೇಕು. ಯಾವುದೇ ಕಾರಣಕ್ಕೆ ಮಂತ್ರಿ ಎಂಬ ಗಾಂಭೀರ್ಯ ಹೆಚ್ಚಿಸಿಕೊಳ್ಳದೇ ಶ್ರೀಸಾಮಾನ್ಯರೊಂದಿಗೆ ಬೆರೆಯಬೇಕು ಎಂದು ಆರ್ಎಸ್ಎಸ್ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ತಾಕೀತು ಮಾಡಿದರು.
ಇಲ್ಲಿಯ ಆರ್ಎಸ್ಎಸ್ ಪ್ರಾಂತ ಕಚೇರಿ ಕೇಶವ ಕುಂಜಕ್ಕೆ ಆಗಮಿಸಿದ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭಾನುವಾರ ಸ್ವಾಗತಿಸಿದ ಕಾಗವಾಡ ಅವರು, ಸಚಿವರಿಗೆ ಕೆಲ ಹಿತವಚನಗಳನ್ನು ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಜನತೆ ಜವಾಬ್ದಾರಿ ಹೆಚ್ಚಿಸಿದಂತೆ, ನಿಮ್ಮ ಮೇಲೆಯೂ ನೂರರಷ್ಟು ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಸಮಯವನ್ನು ಸಮಾಜ ಮತ್ತು ರಾಜ್ಯದ ಒಟ್ಟು ಬೆಳವಣಿಗೆಗೆ ಮೀಸಲಿಡಬೇಕೆಂದು ಸಲಹೆ ನೀಡಿದರು.
ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಸಚಿವರು ಕೈಗೊಳ್ಳುವ ಎಲ್ಲ ಒಳ್ಳೆಯ ಕಾರ್ಯಗಳಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ಸಾಮಾನ್ಯ ಸ್ವಯಂ ಸೇವಕರಾಗಿ ಶಾಖೆಗೆ ಬರಲು ಪ್ರಾರಂಭಿಸಿದ ಪ್ರಹ್ಲಾದ ಜೋಶಿ ಅವರು ಸಂಘ ನೀಡಿದ ಸಂಸ್ಕಾರ, ಶಿಕ್ಷಣದ ಪರಿಣಾಮದ ಜತೆಗೆ ಸ್ವ ಪರಿಶ್ರಮದೊಂದಿಗೆ ಕೇಂದ್ರದ ಮಂತ್ರಿಯಾಗಿದ್ದಾರೆ. ಇದು ಹು-ಧಾ ಸ್ವಯಂ ಸೇವಕರು ಮತ್ತು ಉತ್ತರ ಕರ್ನಾಟಕ ಸ್ವಯಂ ಸೇವಕರು ಅಭಿಮಾನ ಪಡುವ ಸಂಗತಿ. ಇದನ್ನು ಅನೇಕ ಸ್ವಯಂ ಸೇವಕರು ಸಂಭ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಾಂತ ಪ್ರಚಾರಕ ಸುಧಾಕರ, ಸಹ ಪ್ರಾಂತ ಕಾರ್ಯವಾಹ ಶ್ರೀಧರ ನಾಡಿಗೇರ, ಹು-ಧಾ ಸಂಘ ಚಾಲಕರು ಶಿವಾನಂದ ಅವಟಿ, ಸಹ ಸಂಘ ಚಾಲಕರು ಗೋವಿಂದಪ್ಪ ಗೌಡಪ್ಪಗೋಳ, ಜಯತೀರ್ಥ ಕಟ್ಟಿ, ಸುಧೀರ ಸರಾಫ್, ಮಹೇಶ ಟೆಂಗಿನಕಾಯಿ, ಶಿವು ಮೆಣಸಿನಕಾಯಿ ಸೇರಿದಂತೆ ಇತರರು ಇದ್ದರು.
ಇಲ್ಲಿಯ ಆರ್ಎಸ್ಎಸ್ ಪ್ರಾಂತ ಕಚೇರಿ ಕೇಶವ ಕುಂಜಕ್ಕೆ ಆಗಮಿಸಿದ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭಾನುವಾರ ಸ್ವಾಗತಿಸಿದ ಕಾಗವಾಡ ಅವರು, ಸಚಿವರಿಗೆ ಕೆಲ ಹಿತವಚನಗಳನ್ನು ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಜನತೆ ಜವಾಬ್ದಾರಿ ಹೆಚ್ಚಿಸಿದಂತೆ, ನಿಮ್ಮ ಮೇಲೆಯೂ ನೂರರಷ್ಟು ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಸಮಯವನ್ನು ಸಮಾಜ ಮತ್ತು ರಾಜ್ಯದ ಒಟ್ಟು ಬೆಳವಣಿಗೆಗೆ ಮೀಸಲಿಡಬೇಕೆಂದು ಸಲಹೆ ನೀಡಿದರು.
ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಸಚಿವರು ಕೈಗೊಳ್ಳುವ ಎಲ್ಲ ಒಳ್ಳೆಯ ಕಾರ್ಯಗಳಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ಸಾಮಾನ್ಯ ಸ್ವಯಂ ಸೇವಕರಾಗಿ ಶಾಖೆಗೆ ಬರಲು ಪ್ರಾರಂಭಿಸಿದ ಪ್ರಹ್ಲಾದ ಜೋಶಿ ಅವರು ಸಂಘ ನೀಡಿದ ಸಂಸ್ಕಾರ, ಶಿಕ್ಷಣದ ಪರಿಣಾಮದ ಜತೆಗೆ ಸ್ವ ಪರಿಶ್ರಮದೊಂದಿಗೆ ಕೇಂದ್ರದ ಮಂತ್ರಿಯಾಗಿದ್ದಾರೆ. ಇದು ಹು-ಧಾ ಸ್ವಯಂ ಸೇವಕರು ಮತ್ತು ಉತ್ತರ ಕರ್ನಾಟಕ ಸ್ವಯಂ ಸೇವಕರು ಅಭಿಮಾನ ಪಡುವ ಸಂಗತಿ. ಇದನ್ನು ಅನೇಕ ಸ್ವಯಂ ಸೇವಕರು ಸಂಭ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಾಂತ ಪ್ರಚಾರಕ ಸುಧಾಕರ, ಸಹ ಪ್ರಾಂತ ಕಾರ್ಯವಾಹ ಶ್ರೀಧರ ನಾಡಿಗೇರ, ಹು-ಧಾ ಸಂಘ ಚಾಲಕರು ಶಿವಾನಂದ ಅವಟಿ, ಸಹ ಸಂಘ ಚಾಲಕರು ಗೋವಿಂದಪ್ಪ ಗೌಡಪ್ಪಗೋಳ, ಜಯತೀರ್ಥ ಕಟ್ಟಿ, ಸುಧೀರ ಸರಾಫ್, ಮಹೇಶ ಟೆಂಗಿನಕಾಯಿ, ಶಿವು ಮೆಣಸಿನಕಾಯಿ ಸೇರಿದಂತೆ ಇತರರು ಇದ್ದರು.