ಆ್ಯಪ್ನಗರ

ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಹೊರಟ ಶಿಕ್ಷಕರಿಗೆ ಬಸ್‌ಗಳಿಲ್ಲದೆ ಪರದಾಟ..!

ಧಾರವಾಡದ‌ ವಿವಿಧ ಶಾಲೆಗಳಲ್ಲಿ ಮೌಲ್ಯಮಾಪನ ಕೇಂದ್ರಗಳಿದ್ದು, ಹುಬ್ಬಳ್ಳಿ ಸೇರಿದಂತೆ ನಾನಾ ತಾಲೂಕು ಗ್ರಾಮೀಣ ಪ್ರದೇಶಗಳಿಂದ ಬರುವ ಶಿಕ್ಷಕರಿಗೆ ಹುಬ್ಬಳ್ಳಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಹೀಗಾಗಿ 250ಕ್ಕೂ ಹೆಚ್ಚು ಶಿಕ್ಷಕರು ನಗರದ ಹಳೆ ಬಸ್ ನಿಲ್ದಾಣದಲ್ಲಿ ಸೇರಿದ್ದರು. ಆದರೆ ಕೇವಲ‌ 2 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು.

Vijaya Karnataka Web 15 Jul 2020, 1:12 pm
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ‌ ನಿಯೋಜನೆಗೊಂಡ ಧಾರವಾಡ ಜಿಲ್ಲೆಯ ಮಾಧ್ಯಮಿಕ ಶಾಲಾ ಶಿಕ್ಷಕರು ಬುಧವಾರ ಅಕ್ಷರಶಃ ಪರದಾಡಿ ಸರಕಾರದ ವ್ಯವಸ್ಥೆಗೆ ಹಿಡಿಶಾಪ ಹಾಕಿದ ಘಟನೆ ನಡೆಯಿತು.
Vijaya Karnataka Web SSLC Assessment


ಧಾರವಾಡದ‌ ವಿವಿಧ ಶಾಲೆಗಳಲ್ಲಿ ಮೌಲ್ಯಮಾಪನ ಕೇಂದ್ರಗಳಿದ್ದು, ಹುಬ್ಬಳ್ಳಿ ಸೇರಿದಂತೆ ನಾನಾ ತಾಲೂಕು ಗ್ರಾಮೀಣ ಪ್ರದೇಶಗಳಿಂದ ಬರುವ ಶಿಕ್ಷಕರಿಗೆ ಹುಬ್ಬಳ್ಳಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಹೀಗಾಗಿ 250ಕ್ಕೂ ಹೆಚ್ಚು ಶಿಕ್ಷಕರು ನಗರದ ಹಳೆ ಬಸ್ ನಿಲ್ದಾಣದಲ್ಲಿ ಸೇರಿದ್ದರು. ಆದರೆ ಕೇವಲ‌ 2 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ಹುಬ್ಬಳ್ಳಿಯಲ್ಲಿ ಕೋವಿಡ್‌ ಸೋಂಕಿಗೆ ಎಎಸ್ಐ ಮೃತ: ರಾಜ್ಯದಲ್ಲಿ 7 ಪೊಲೀಸರು ಬಲಿ!

ಎರಡು ಬಸ್‌ಗಳಲ್ಲಿ ಸುಮಾರು 35-40 ಶಿಕ್ಷಕರು ತೆರಳಿದ್ದಾರೆ. ಆದ್ರೆ ಉಳಿದ ಶಿಕ್ಷಕರು ಬಸ್‌ಸ್ಟ್ಯಾಂಡ್‌ನಲ್ಲೇ ಉಳಿದು ಪರದಾಟ ಅನುಭವಿಸಬೇಕಾಯಿತು. ಕೆಲವು ಶಿಕ್ಷಕರು ಕಾರುಗಳಲ್ಲಿ ತೆರಳಿದರೆ,‌ ಮತ್ತೊಂದಿಷ್ಟು ಶಿಕ್ಷಕರು ಮೂರ್ನಾಲ್ಕು ಜನ ಸೇರಿಕೊಂಡು ಆಟೋ ಬಾಡಿಗೆ ಪಡೆದು ತೆರಳಿದರು. ಅದಾಗ್ಯೂ ಕೆಲ ಶಿಕ್ಷಕರು ಬಸ್ ಬರುತ್ತೆ ಅಂತ ಹೇಳುತ್ತಲೇ ಇದ್ದರು. ಇದನ್ನು ನಂಬಿಕೊಂಡು ನೂರಾರು ಜನ ಶಿಕ್ಷಕರು ನಿಲ್ದಾಣದಲ್ಲೇ ಬಸ್‌ಗಾಗಿ‌ ಕಾಯುತ್ತಾ ಸುಸ್ತಾಗಿ ನಿಂತಿದ್ದರು.

10 ದಿನ ಸ್ಟ್ರಿಕ್ಟ್ ಲಾಕ್‌ಡೌನ್

ಈ ಮಧ್ಯೆ ಖಾಸಗಿ ಶಾಲೆಯ ವಾಹನವೊಂದು ಬಂದಿದ್ದು, ಈ ವಾಹನ ಹತ್ತಲು ಶಿಕ್ಷಕರು ನಾ ಮುಂದೆ ತಾ ಮುಂದು ಅಂತ ಮುಗಿ ಬಿದ್ದರು. ವಾಹನ ಭರ್ತಿಯಾದರೂ ಕೂಡ ಕೆಲವು ಶಿಕ್ಷಕರು ನಿಂತುಕೊಂಡೇ ಪ್ರಯಾಣಿಸಿದರು. ಇಷ್ಟದರೂ ಇನ್ನೂ ಹಲವಾರು ಮೌಲ್ಯ ಮಾಪಕರು ನಿಲ್ದಾಣದಲ್ಲೇ ಬಾಕಿಯಾಗಿದ್ದಾರೆ.

ಕೊರೊನಾ ತಡೆಗೆ ಟಾಸ್ಕ್‌ ಫೋರ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ