ಆ್ಯಪ್ನಗರ

ತಂತ್ರಜ್ಞಾನ ಬಳಕೆ ತರಬೇತಿ ಕಾರಾರ‍ಯಗಾರ

ಧಾರವಾಡ : ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಸರಕಾರದ ಎ ವೃಂದದ ಅಧಿಕಾರಿಗಳಿಗೆ ಇ ಪಿಆರ್‌ಎಸ್‌ ಅಪ್ಲಿಕೇಷನ್‌ ಹಾಗೂ ಕನ್ನಡ ನುಡಿ 6.0 ತಂತ್ರಾಂಶ ಬಳಕೆ ಕುರಿತು ತರಬೇತಿ ಕಾರ್ಯಾಗಾರ ಬುಧವಾರ ಜರುಗಿತು.

Vijaya Karnataka 4 Jul 2019, 5:00 am
ಧಾರವಾಡ : ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಸರಕಾರದ ಎ ವೃಂದದ ಅಧಿಕಾರಿಗಳಿಗೆ ಇ ಪಿಆರ್‌ಎಸ್‌ ಅಪ್ಲಿಕೇಷನ್‌ ಹಾಗೂ ಕನ್ನಡ ನುಡಿ 6.0 ತಂತ್ರಾಂಶ ಬಳಕೆ ಕುರಿತು ತರಬೇತಿ ಕಾರ್ಯಾಗಾರ ಬುಧವಾರ ಜರುಗಿತು.
Vijaya Karnataka Web technology use training contractor
ತಂತ್ರಜ್ಞಾನ ಬಳಕೆ ತರಬೇತಿ ಕಾರಾರ‍ಯಗಾರ


ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ದೀಪಾ, ಆಡಳಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಅಳವಡಿಕೆಗೆ ರಾಜ್ಯ ಸರಕಾರದ ಇ ಆಡಳಿತ ಇಲಾಖೆ ಹೊಸ ಹೆಜ್ಜೆ ಇಡುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಕೇಂದ್ರ ನಾಗರಿಕ ಸೇವೆಗಳ ಐಎಎಸ್‌, ಐಪಿಎಸ್‌ ಅಧಿಕಾರಿಗಳು ವಾರ್ಷಿಕ ಕಾರ್ಯನಿರ್ವಹಣಾ ವರದಿ ಇಪಿಆರ್‌ಎಸ್‌ ಮೂಲಕ ಸಲ್ಲಿಸುತ್ತಿದ್ದಾರೆ. ರಾಜ್ಯ ಸರಕಾರ ಎ ವೃಂದದ ಅಧಿಕಾರಿಗಳಿಗೂ 2018-19ನೇ ಸಾಲಿನಿಂದ ಈ ಪದ್ಧತಿ ಜಾರಿಯಾಗುತ್ತಿದೆ. ಅಧಿಕಾರಿಗಳು ಇದನ್ನು ಸರಿಯಾಗಿ ಅರಿತುಕೊಂಡರೆ ಅಳವಡಿಕೆ ಕಾರ್ಯ ಮತ್ತು ವಾರ್ಷಿಕ ಕಾರ್ಯನಿರ್ವಹಣೆ ವರದಿ ದಾಖಲೆ ಕಾರ್ಯ ಸುಲಭವಾಗಲಿದೆ ಎಂದರು.

ಪ್ರಾಚಾರ್ಯ ಎ.ಎಸ್‌. ಕವಿತಾ, ಇ ಆಡಳಿತ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾದ ಎಂ.ರುದ್ರೇಶ, ವಿರೇಂದ್ರ ರೆಡ್ಡಿ, ಡಿಟಿಐ ಬೋಧಕರಾದ ಎ.ಎ.ಮಾಳಾಪೂರ, ಎಲ್‌.ಪಿ.ಪೂಜಾರ ತರಬೇತಿ ನೀಡಿದರು. ನೂರಕ್ಕೂ ಹೆಚ್ಚು ಪತ್ರಾಂಕಿತ ಎ ವೃಂದದ ಅಧಿಕಾರಿಗಳು ತರಬೇತಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ