ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಸಂವಿಧಾನ ರಚನೆ, ಇತಿಹಾಸ ತಿಳಿಸಿ

ಹುಬ್ಬಳ್ಳಿ : ಇಲ್ಲಿನ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯ ಹಾಗೂ ಜೆಎಸ್‌ಎಸ್‌ ಶ್ರೀ ಧರ್ಮಸ್ಥಳ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿಸಂವಿಧಾನ ದಿನ ಆಚರಿಸಲಾಯಿತು.

Vijaya Karnataka 28 Nov 2019, 5:00 am
ಹುಬ್ಬಳ್ಳಿ : ಇಲ್ಲಿನ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯ ಹಾಗೂ ಜೆಎಸ್‌ಎಸ್‌ ಶ್ರೀ ಧರ್ಮಸ್ಥಳ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿಸಂವಿಧಾನ ದಿನ ಆಚರಿಸಲಾಯಿತು.
Vijaya Karnataka Web tell students the constitution history
ವಿದ್ಯಾರ್ಥಿಗಳಿಗೆ ಸಂವಿಧಾನ ರಚನೆ, ಇತಿಹಾಸ ತಿಳಿಸಿ


ಪ್ರೊ. ದೀಪಾ ಪಾಟೀಲ ಮಾತನಾಡಿ, ಸಂವಿಧಾನಕ್ಕೆ ಪ್ರತಿಯೊಬ್ಬರು ತಲೆಬಾಗಲೇಬೇಕು. ವಿದ್ಯಾರ್ಥಿಗಳು ಸಂವಿಧಾನ ರಚನೆ, ಇತಿಹಾಸ, ಹಕ್ಕು, ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ರೂಪಾ ಇಂಗಳಹಳ್ಳಿ ಮಾತನಾಡಿ, ಅಖಂಡ ಭಾರತ ಪ್ರಪಂಚದ ಅತೀದೊಡ್ಡ ಲಿಖಿತ ಸಂವಿಧಾನ ಹೊಂದಿದೆ. ಒಂದು ರಾಷ್ಟ್ರ ಒಂದು ಸಂವಿಧಾನದ ಬಗ್ಗೆ ದೇಶದಲ್ಲಿಚರ್ಚೆ ನಡೆಯುತ್ತಿದ್ದು, ಪ್ರತಿಯೊಬ್ಬರು ಸಂವಿಧಾನದ ಮಹತ್ವ ತಿಳಿದುಕೊಳ್ಳಬೇಕು ಎಂದರು.

ಒಂದು ರಾಷ್ಟ್ರ ಒಂದು ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಲ್ಲಿಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಜಿಲ್ಲಾಹಾಗೂ ರಾಜ್ಯ ಮಟ್ಟಗಳಲ್ಲಿದೇಶ ಭಕ್ತಿ ಗೀತೆ, ವಿಡಿಯೋ ಪ್ರದರ್ಶನ, ಭಾಷಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತು ಎಂದರು.

ಪಾಂಡುರಂಗ ಹನುಮಸಾಗರ, ರಮೇಶ ಚೆನ್ನದಾಸರ ಮಾತನಾಡಿದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ‍್ಯಕ್ರಮ ಆಯೋಜಿಸಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಆದಿತ್ಯ ನಿಲವಣಿ, ಪ್ರೊ.ಬಾಬುಲಾಲ ದರಗದ, ಪ್ರೊ.ದೀಪಾ ಪಾಟೀಲ, ಪ್ರೊ.ಶ್ರೀಶೈಲ ಮುಧೋಳ, ಪ್ರೊ. ವಿಜಯಲಕ್ಷ್ಮೀ ಪಾಟೀಲ, ಸುರೇಶ ಲಿಂಬಿಕಾಯಿ, ಪ್ರೊ. ಶಶಿಕಲಾ ಜೈನ, ಪ್ರೊ.ಶಿಲ್ಪಾ ಜೈನ, ಪ್ರೊ.ಮಧುಶ್ರೀ ಬೋರಗಲ, ಪ್ರೊ.ಶೃತಿ ಹುಬ್ಳಿಮಠ ಇದ್ದರು. ಪ್ರೊ. ವಿಜಯಲಕ್ಷ್ಮೇ ಪಾಟೀಲ ಸ್ವಾಗತಿಸಿದರು. ಶರಣ್ಯ ನಿರೂಪಿಸಿದರು. ಗಿರಿಜಾ ಗೌಡರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ