ಆ್ಯಪ್ನಗರ

ತಾಪಮಾನ ಹೆಚ್ಚಳ ನಿಯಂತ್ರಣ ಅಗತ್ಯ

ಹುಬ್ಬಳ್ಳಿ: ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಅದರಿಂದ ಜೀವವೈವಿಧ್ಯಕ್ಕೆ ಉಳಿಗಾಲವಿಲ್ಲ. ಹೀಗಾಗಿ ಅದನ್ನು ನಿಯಂತ್ರಿಸುವ ಹೊಣೆಗಾರಿಕೆ ಯುವಜನತೆ ಸೇರಿದಂತೆ ಎಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿಜನಜಾಗೃತಿ ಅಗತ್ಯ ಎಂದು ಪ್ರೊ.ಶರದ್‌ ಜೋಶಿ ಹೇಳಿದರು.

Vijaya Karnataka 23 Feb 2020, 5:00 am
ಹುಬ್ಬಳ್ಳಿ: ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಅದರಿಂದ ಜೀವವೈವಿಧ್ಯಕ್ಕೆ ಉಳಿಗಾಲವಿಲ್ಲ. ಹೀಗಾಗಿ ಅದನ್ನು ನಿಯಂತ್ರಿಸುವ ಹೊಣೆಗಾರಿಕೆ ಯುವಜನತೆ ಸೇರಿದಂತೆ ಎಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿಜನಜಾಗೃತಿ ಅಗತ್ಯ ಎಂದು ಪ್ರೊ.ಶರದ್‌ ಜೋಶಿ ಹೇಳಿದರು.
Vijaya Karnataka Web temperature control is essential
ತಾಪಮಾನ ಹೆಚ್ಚಳ ನಿಯಂತ್ರಣ ಅಗತ್ಯ


ಕೆಎಲ್‌ಇ ಸಂಸ್ಥೆಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ಜಂಟಿ ಆಶ್ರಯದಲ್ಲಿಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸ್ಥಿತಿ ಹೀಗೆ ಮುಂದುವರಿದರೆ 2100ನೇ ಇಸ್ವಿಯ ಹೊತ್ತಿಗೆ ಜಾಗತಿಕ ತಾಪಮಾನ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ. ಇದನ್ನು ಕೇವಲ 1.50ಕ್ಕೆ ಮಿತಿಗೊಳಿಸಬೇಕಾಗಿದೆ. ಈಗಾಗಲೇ 0.74ರಷ್ಟು ತಲುಪಿದ್ದು, ಇನ್ನು ಕೇವಲ 0.76 ಮಾತ್ರ ಹೆಚ್ಚಾಗುವಂತೆ ನೋಡಿಕೊಳ್ಳಬೇಕಾಗಿದ್ದು, ಇದನ್ನು ನಿಯಂತ್ರಿಸಿ ಭೂ ಮಾತೆಯನ್ನು ರಕ್ಷಿಸುವುದು ಅತ್ಯವಶ್ಯಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿವಿಧ ಇಂಧನಗಳ ಬಳಕೆ, ಏರ್‌ಕಂಡೀಶನ್‌ ಮತ್ತು ರೆಫ್ರಿಜರೇಶನ್‌, ವಾಹನ ಮತ್ತು ಕಾರ್ಖಾನೆಗಳು ಹೊರಸೂಸುವ ಇಂಗಾಲ, ಅರಣ್ಯ ನಾಶ ಮುಂತಾದವುಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದಲ್ಲದೇ ಹೆದ್ದಾರಿ, ಆಣೆಕಟ್ಟುಗಳು, ಬೃಹತ್‌ ಯೋಜನೆಗಳು, ಬೃಹತ್‌ ಕಟ್ಟಡ ಸಂಕೀರ್ಣ (ಸಿವಿಲ್‌ ಕಾಮಗಾರಿ) ಮುಂತಾದವುಗಳಿಂದ ಅರಣ್ಯ ಸೇರಿದಂತೆ ಪರಿಸರ ನಾಶವಾಗುತ್ತಿದ್ದು, ಜಗತ್ತು ವಿನಾಶದ ಅಂಚಿಗೆ ತಲುಪುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಲ್‌.ಡಿ. ಹೊರಕೇರಿ ಮಾತನಾಡಿದರು. ಚೈತ್ರಾ , ಕಾವೇರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಪ್ರೇಮಾ ಎಸ್‌.ಹೊಳೆಯಣ್ಣವರ ಸ್ವಾಗತಿಸಿದರು. ಪ್ರೊ.ಎಸ್‌.ಎನ್‌.ಎಮ್ಮಿ ಪ್ರಾಸ್ತಾವಿಕ ಮಾತನಾಡಿ, ಪರಿಚಯಿಸಿದರು. ರುಮಾನಾ ನಿರೂಪಿಸಿದರು. ರಕ್ಷಿತಾ ವಂದಿಸಿದರು.

ಸನ್ಮಾನ:
ರಾಜ್ಯದ ವಿವಿಧೆಡೆಗಳಿಂದ ಬಂದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿಪಾಲ್ಗೊಂಡಿದ್ದರು. ನಿರ್ಣಾಯಕರುಗಳಾದ ಡಾ.ಜಿ.ಜಿ. ಕಾಡದೇವರು, ಡಾ.ಎಂ.ಐ.ಸಾಂಬ್ರಾಣಿ ಮತ್ತು ಡಾ.ಬಿ.ಡಿ. ಹುದ್ದಾರ ಮತ್ತು ಆರ್ಥಿಕ ನೆರವು ನೀಡಿದ ಪ್ರಾಯೋಜಕರಾದ ಮಲ್ಲಯ್ಯ ಜಿ. ಶಂಬಾಳಿಮಠ ಮತ್ತು ಅರುಣ ಸಾಲಿಮಠ ಅವರನ್ನು ಇದೇ ಸಂದರ್ಭದಲ್ಲಿಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ