ಆ್ಯಪ್ನಗರ

ಆಧುನಿಕ ಕನ್ನಡದ ಯುಗಕ್ಕೆ ಸಾಕ್ಷಿ ಕುವೆಂಪು

ಹುಬ್ಬಳ್ಳಿ : ವಾಲ್ಮೀಕಿ ರಾಮಾಯಣದ ಹಲವಾರು ಸನ್ನಿವೇಶಗಳನ್ನು ಕುವೆಂಪು ಹೊಸ ಕಲ್ಪನೆಯಲ್ಲಿ ಮರು ಜೋಡಿಸಿದ್ದಾರೆ. ಪರಿಷ್ಕರಿಸುವ ಮಾರ್ಗ ಅನುಸರಿಸಿದ್ದಾರೆ. ರಾಮಾಯಣದ ಹೊಸ ದರ್ಶನ ಈ ಕೃತಿಯಲ್ಲಿದೆ ಎಂದು ಪ್ರೊ.ಮಲ್ಲಪ್ಪ ಬಂಡಿ ಹೇಳಿದರು.

Vijaya Karnataka 31 Dec 2018, 5:00 am
ಹುಬ್ಬಳ್ಳಿ : ವಾಲ್ಮೀಕಿ ರಾಮಾಯಣದ ಹಲವಾರು ಸನ್ನಿವೇಶಗಳನ್ನು ಕುವೆಂಪು ಹೊಸ ಕಲ್ಪನೆಯಲ್ಲಿ ಮರು ಜೋಡಿಸಿದ್ದಾರೆ. ಪರಿಷ್ಕರಿಸುವ ಮಾರ್ಗ ಅನುಸರಿಸಿದ್ದಾರೆ. ರಾಮಾಯಣದ ಹೊಸ ದರ್ಶನ ಈ ಕೃತಿಯಲ್ಲಿದೆ ಎಂದು ಪ್ರೊ.ಮಲ್ಲಪ್ಪ ಬಂಡಿ ಹೇಳಿದರು.
Vijaya Karnataka Web DRW-30 NADAF 6
ಹುಬ್ಬಳ್ಳಿಯ ಮಹಿಳಾ ಮಹಾವಿದ್ಯಾಲಯದ ಆಶ್ರಯದಲ್ಲಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.


ನಗರದ ಮಹಿಳಾ ಮಹಾವಿದ್ಯಾಲಯದ ಆಶ್ರಯದಲ್ಲಿ ಕುವೆಂಪು ಜನ್ಮ ದಿನಾಚರಣೆ ಮತ್ತು ಶ್ರೀ ರಾಮಾಯಣ ದರ್ಶನ ಕೃತಿಯ 50 ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. 20ನೇ ಶತಮಾನದ ಮೌಲ್ಯಗಳಿಗೆ ಹೊಂದಿಕೆಯಾಗುವಂತೆ ಬರೆದ ಮೇರು ಕೃತಿ ಶ್ರೀ ರಾಮಾಯಣ ದರ್ಶನಂ. ರಾಮ ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಳ್ಳುವದು ಈ ಕಾರಣಕ್ಕಾಗಿ. ರಾವಣ, ಮಂಥರೆ, ಕೈಕೇಯಿ ಇವರೆಲ್ಲರಿಂದಲೇ ರಾಮ ಮತ್ತು ಸೀತಾ, ಲಕ್ಷ ್ಮಣ ಒಳ್ಳೆಯವರೆಂದು ತೋರಿಸಿಕೊಳ್ಳಲು ಸಾಧ್ಯವಾಯಿತು. ವಿಶ್ವ ಪಥ, ಪೂರ್ಣದೃಷ್ಟಿ, ಸರ್ವೋದಯ ಈ ಮಹಾಕಾವ್ಯಗಳಲ್ಲಿ ಅಡಗಿದೆ. ಆತ್ಮ ವಿಕಾಸದ ಪಥವೇ ಈ ಜಗತ್ತು. ಅಲ್ಪರೂ ಆತ್ಮಶೋಧನೆ ಮಾಡಿಕೊಳ್ಳುವದು ಈ ಕಾವ್ಯದಲ್ಲಿದೆ. ರಾಮಾಯಣಂ ಜಗತ್‌ ರಾಮಾಯಣಂ 40 ವರ್ಷದವರಿದ್ದಾಗ ಕುವೆಂಪು ಈ ಕೃತಿ ರಚಿಸಿದರು. ಯುದ್ಧದಲ್ಲಿಯೇ ಶಾಂತಿಯ ಬೀಜ ಅಡಗಿದೆ ಎಂಬುದನ್ನು ಈ ಕಾವ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಆಧುನಿಕ ಕನ್ನಡದ ಯುಗಕ್ಕೆ ಸಾಕ್ಷಿ ಕುವೆಂಪು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಟಿ.ಪಾಟೀಲ ಮಾತನಾಡಿ, ಕುವೆಂಪು ಜೀವನವೇ ಒಂದು ಸಂದೇಶ. ಕನ್ನಡಕ್ಕೆ ಪ್ರಥಮ. ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾಕವಿ. ನಡೆ-ನುಡಿಯನ್ನು ವಿದ್ಯಾರ್ಥಿನಿಯರು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕ ಎಂದರು.

ಡಾ.ಡಿ.ಪಿ. ಮಣಕಟ್ಟಿ, ನೀಲಮ್ಮ ಸಾಲಿಮಠ, ಉಪನ್ಯಾಸಕಿ ಚನ್ನಮ್ಮಾ ಕೋರಿಶೆಟ್ಟರ, ಮಂಜುಳಾ ಪೋಲಿಸಪಾಟೀಲ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ