ಆ್ಯಪ್ನಗರ

ಆರೋಪಿಗಳು ಆರು ದಿನ ಸಿಬಿಐ ವಶಕ್ಕೆ

ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿಶನಿವಾರ ಬಂಧಿತರಾದ ಆರು ಜನ ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಸೋಮವಾರ ನಗರದ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಕೋರ್ಟ್‌ ಇವರನ್ನು ಮಾ. 7ರವರೆಗೆ ಸಿಬಿಐ ವಶಕ್ಕೆ ನೀಡಿದೆ.

Vijaya Karnataka 3 Mar 2020, 7:21 pm
ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿಶನಿವಾರ ಬಂಧಿತರಾದ ಆರು ಜನ ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಸೋಮವಾರ ನಗರದ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಕೋರ್ಟ್‌ ಇವರನ್ನು ಮಾ. 7ರವರೆಗೆ ಸಿಬಿಐ ವಶಕ್ಕೆ ನೀಡಿದೆ.
Vijaya Karnataka Web the accused were detained by the cbi for six days
ಆರೋಪಿಗಳು ಆರು ದಿನ ಸಿಬಿಐ ವಶಕ್ಕೆ


ಯೋಗೀಶಗೌಡ ಹತ್ಯೆ ಆರೋಪದಡಿ ಸಿಬಿಐ ಫೆ. 29ರಂದು ದಿನೇಶ ಕೆ.ಎಸ್‌., ಅಶ್ವಥ್‌, ಸುನೀಲಕುಮಾರ ಎಸ್‌., ನಜೀರ್‌ ಅಹ್ಮದ್‌, ಶಾ ನವಾಜ್‌ ಹಾಗೂ ನೂತನ್‌ ಎಂಬ ಆರು ಆರೋಪಿಗಳನ್ನು ಬಂಧಿಸಿತ್ತು. ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿದಾಗ ಮಾ.2 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅದರಂತೆ ಸೋಮವಾರ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಲಕ್ಷ್ಮೇ ಗಾಣಾಪೂರ ಅವರ ಎದುರು ಹಾಜರುಪಡಿಸಲಾಗಿತ್ತು.

ಈ ವೇಳೆ ಆರೋಪಿಗಳ ಪರ ವಕಾಲತ್ತು ವಹಿಸಿರುವ ನ್ಯಾಯವಾದಿಗಳು, ಸ್ಥಳೀಯ ಪೊಲೀಸರು ಈ ಮೊದಲು ಬಂಧಿಸಿದ್ದ ಮತ್ತು ಸಿಬಿಐ ಅಧಿಕಾರಿಗಳು ಸದ್ಯ ಬಂಧಿಸಿರುವ ಆರೋಪಿಗಳಿಗೆ ಸರಿಯಾದ ಅನುಕ್ರಮ ಸಂಖ್ಯೆ ನೀಡಿಲ್ಲಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ನ್ಯಾಯಾಧೀಶರು, ಮುಂದಿನ ವಿಚಾರಣೆಯಲ್ಲಿಈ ಬಗ್ಗೆ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಸಿಬಿಐ ಅಧಿಕಾರಿಗಳು, ಆರು ಜನ ಆರೋಪಿಗಳ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಹೀಗಾಗಿ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು, ಮಾ. 7ರ ವರೆಗೆ ಆರೋಪಿಗಳನ್ನು ಸಿಬಿಐಗೆ ಒಪ್ಪಿಸಿ, ವಿಚಾರಣೆ ಮುಂದೂಡಿದರು.

ಪೊಲೀಸ್‌ ಭದ್ರತೆ
ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿಶನಿವಾರ ಬಂಧಿಸಿದ್ದ ಆರು ಆರೋಪಿಗಳನ್ನು ಭಾನುವಾರ ರಾತ್ರಿ ನ್ಯಾಯಾಧೀಶರ ಗೃಹ ಕಚೇರಿಯಲ್ಲಿಹಾಜರುಪಡಿಸಿದ ನಂತರ ಮತ್ತೆ ಸೋಮವಾರ ಎಲ್ಲಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು. ಈ ವೇಳೆ ಜಿಲ್ಲಾಕೋರ್ಟ್‌ ಆವರಣದಲ್ಲಿಸಾಕಷ್ಟು ಪೊಲೀಸ್‌ ಬಂದೋಬಸ್‌್ತ ಕಲ್ಪಿಸಲಾಗಿತ್ತು. ಕೋರ್ಟ್‌ ಒಳಗೆ ಹೋಗುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಬಿಡಲಾಗುತ್ತಿತ್ತು. ಅಲ್ಲದೇ ಆರೋಪಿಗಳನ್ನು ವಾಹನದಲ್ಲಿಕರೆದುಕೊಂಡು ಬಂದಾಗ ಪೊಲೀಸರು ಸರ್ಪಗಾವಲು ಹಾಕಿ ಒಳಗೆ ಕರೆದುಕೊಂಡು ಹೋದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ