ಹುಬ್ಬಳ್ಳಿ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಜೂ.15 ರಂದು ಬೆಳಗ್ಗೆ 11ಕ್ಕೆ ನಗರದ ವಿದ್ಯಾನಗರದ ಬಿವಿಬಿ ಎಂಜಿನಿಯರಿಂಗ್ ಆಡಿಟೋರಿಯಂ ಹಾಲ್ನಲ್ಲಿ ಡಾ.ರಾಜಕುಮಾರ ಅಭಿಮಾನಿ ಬಳಗದಿಂದ ಸನ್ಮಾನ ನಡೆಯಲಿದೆ.
ಅಮರ ಚಿತ್ರ ತಂಡ ಜೂ.15 ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ನಂತರ ಮಧ್ಯಾಹ್ನ 12ಕ್ಕೆ ಸಂಸದೆ ಸುಮಲತಾ ಅಂಬರೀಷ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 2ಕ್ಕೆ ಸುಧಾ ಚಿತ್ರ ಮಂದಿರದಲ್ಲಿ ನಟ ಅಭಿಷೇಕ ಅಭಿನಯದ ಅಮರ ಚಿತ್ರ ವೀಕ್ಷಿಸುವರು. ಬಳಿಕ ಸುಧಾ ಚಿತ್ರಮಂದಿರದಿಂದ ಚನ್ನಮ್ಮ ವೃತ್ತದವರೆಗೆ ಬೈಕ್ರಾರಯಲಿ ನಡೆಯಲಿದೆ.
ವಿಜಯ ಯಾತ್ರೆಯಲ್ಲಿ ಅಭೀಷೇಕ, ಸುಮಲತಾ, ದೊಡ್ಡಣ್ಣ, ಯೋಗರಾಜ್ ಭಟ್, ತಾನಿಯಾ ಹೋಪ್, ಚಿಕ್ಕಣ್ಣ, ಸಾಧು ಕೋಕಿಲ, ಸಂದೇಶ ಮತ್ತು ಚಿತ್ರದ ನಿರ್ದೇಶಕ ನಾಗಶೇಖರ ಭಾಗವಹಿಸುವರು. ಆದ್ದರಿಂದ ಅಭಿಮಾನಿಗಳು ಮಧ್ಯಾಹ್ನ 1.30ಕ್ಕೆ ಸುಧಾ ಚಿತ್ರಮಂದಿರಕ್ಕೆ ಆಗಮಿಸಬೇಕು ಎಂದು ಡಾ.ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮರ ಚಿತ್ರ ತಂಡ ಜೂ.15 ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ನಂತರ ಮಧ್ಯಾಹ್ನ 12ಕ್ಕೆ ಸಂಸದೆ ಸುಮಲತಾ ಅಂಬರೀಷ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 2ಕ್ಕೆ ಸುಧಾ ಚಿತ್ರ ಮಂದಿರದಲ್ಲಿ ನಟ ಅಭಿಷೇಕ ಅಭಿನಯದ ಅಮರ ಚಿತ್ರ ವೀಕ್ಷಿಸುವರು. ಬಳಿಕ ಸುಧಾ ಚಿತ್ರಮಂದಿರದಿಂದ ಚನ್ನಮ್ಮ ವೃತ್ತದವರೆಗೆ ಬೈಕ್ರಾರಯಲಿ ನಡೆಯಲಿದೆ.
ವಿಜಯ ಯಾತ್ರೆಯಲ್ಲಿ ಅಭೀಷೇಕ, ಸುಮಲತಾ, ದೊಡ್ಡಣ್ಣ, ಯೋಗರಾಜ್ ಭಟ್, ತಾನಿಯಾ ಹೋಪ್, ಚಿಕ್ಕಣ್ಣ, ಸಾಧು ಕೋಕಿಲ, ಸಂದೇಶ ಮತ್ತು ಚಿತ್ರದ ನಿರ್ದೇಶಕ ನಾಗಶೇಖರ ಭಾಗವಹಿಸುವರು. ಆದ್ದರಿಂದ ಅಭಿಮಾನಿಗಳು ಮಧ್ಯಾಹ್ನ 1.30ಕ್ಕೆ ಸುಧಾ ಚಿತ್ರಮಂದಿರಕ್ಕೆ ಆಗಮಿಸಬೇಕು ಎಂದು ಡಾ.ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.