ಆ್ಯಪ್ನಗರ

ಅಮರ ಚಿತ್ರ ತಂಡ ಹುಬ್ಬಳ್ಳಿಗೆ

ಹುಬ್ಬಳ್ಳಿ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರಿಗೆ ಜೂ.15 ರಂದು ಬೆಳಗ್ಗೆ 11ಕ್ಕೆ ನಗರದ ವಿದ್ಯಾನಗರದ ಬಿವಿಬಿ ಎಂಜಿನಿಯರಿಂಗ್‌ ಆಡಿಟೋರಿಯಂ ಹಾಲ್‌ನಲ್ಲಿ ಡಾ.ರಾಜಕುಮಾರ ಅಭಿಮಾನಿ ಬಳಗದಿಂದ ಸನ್ಮಾನ ನಡೆಯಲಿದೆ.

Vijaya Karnataka 15 Jun 2019, 5:00 am
ಹುಬ್ಬಳ್ಳಿ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರಿಗೆ ಜೂ.15 ರಂದು ಬೆಳಗ್ಗೆ 11ಕ್ಕೆ ನಗರದ ವಿದ್ಯಾನಗರದ ಬಿವಿಬಿ ಎಂಜಿನಿಯರಿಂಗ್‌ ಆಡಿಟೋರಿಯಂ ಹಾಲ್‌ನಲ್ಲಿ ಡಾ.ರಾಜಕುಮಾರ ಅಭಿಮಾನಿ ಬಳಗದಿಂದ ಸನ್ಮಾನ ನಡೆಯಲಿದೆ.
Vijaya Karnataka Web the amar film team hubli
ಅಮರ ಚಿತ್ರ ತಂಡ ಹುಬ್ಬಳ್ಳಿಗೆ


ಅಮರ ಚಿತ್ರ ತಂಡ ಜೂ.15 ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ನಂತರ ಮಧ್ಯಾಹ್ನ 12ಕ್ಕೆ ಸಂಸದೆ ಸುಮಲತಾ ಅಂಬರೀಷ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 2ಕ್ಕೆ ಸುಧಾ ಚಿತ್ರ ಮಂದಿರದಲ್ಲಿ ನಟ ಅಭಿಷೇಕ ಅಭಿನಯದ ಅಮರ ಚಿತ್ರ ವೀಕ್ಷಿಸುವರು. ಬಳಿಕ ಸುಧಾ ಚಿತ್ರಮಂದಿರದಿಂದ ಚನ್ನಮ್ಮ ವೃತ್ತದವರೆಗೆ ಬೈಕ್‌ರಾರ‍ಯಲಿ ನಡೆಯಲಿದೆ.

ವಿಜಯ ಯಾತ್ರೆಯಲ್ಲಿ ಅಭೀಷೇಕ, ಸುಮಲತಾ, ದೊಡ್ಡಣ್ಣ, ಯೋಗರಾಜ್‌ ಭಟ್‌, ತಾನಿಯಾ ಹೋಪ್‌, ಚಿಕ್ಕಣ್ಣ, ಸಾಧು ಕೋಕಿಲ, ಸಂದೇಶ ಮತ್ತು ಚಿತ್ರದ ನಿರ್ದೇಶಕ ನಾಗಶೇಖರ ಭಾಗವಹಿಸುವರು. ಆದ್ದರಿಂದ ಅಭಿಮಾನಿಗಳು ಮಧ್ಯಾಹ್ನ 1.30ಕ್ಕೆ ಸುಧಾ ಚಿತ್ರಮಂದಿರಕ್ಕೆ ಆಗಮಿಸಬೇಕು ಎಂದು ಡಾ.ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ