ಆ್ಯಪ್ನಗರ

ಮೂವರು ಆರೋಪಿಗಳ ಬಂಧನ

ಹುಬ್ಬಳ್ಳಿ : ರೈಲ್ವೆ ಗ್ರೌಂಡ್‌ ಪಾರ್ಕಿಂಗ್‌ ಜಾಗದಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Vijaya Karnataka 16 Jan 2019, 5:00 am
ಹುಬ್ಬಳ್ಳಿ : ರೈಲ್ವೆ ಗ್ರೌಂಡ್‌ ಪಾರ್ಕಿಂಗ್‌ ಜಾಗದಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Vijaya Karnataka Web the arrest of three accused
ಮೂವರು ಆರೋಪಿಗಳ ಬಂಧನ


ನಗರದ ಮಂಟೂರು ರಸ್ತೆ ಮೌಲಾಲಿ ಜೋಪಡಿಯ ಸುನೀಲ ಚನ್ನಯ್ಯ ಸಂದಂ, ಗಾಂಧಿವಾಡದ ಸನ್ನಿ ವೆಂಕಟರಂಗಯ್ಯ ಮೋತಕುರಿ ಹಾಗೂ ಚೇತನಾ ಕಾಲೊನಿಯ ಮೈಕಲ್‌ ಸ್ಯಾಮುವೆಲ್‌ ಕುಪ್ಪಲಾ ಎಂಬುವರೇ ಬಂಧಿತ ಆರೋಪಿಗಳು. ಈ ಮೂವರು ಜ.13 ರಂದು ಹುಬ್ಬಳ್ಳಿ ಕ್ಲಬ್‌ ರೋಡ್‌ ರೈಲ್ವೆ ಮೈದಾನದಲ್ಲಿ ನಡೆದ ಡಾನ್ಸ್‌ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿದ್ದ ಉತ್ತಮ ಗೋಪಾಲ ಬೊಂಗಾಳೆ (24) ಎಂಬಾತನನ್ನು ರೈಲ್ವೆಮೈದಾನದ ಪಾರ್ಕಿಂಗ್‌ ಸ್ಥಳದಲ್ಲಿ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದರು. ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದನು.

ಗಾಡಿ ತಾಗಿದ್ದಕ್ಕೆ ಕೊಲೆ: ಕೇಶ್ವಾಪುರದ ಉತ್ತಮ ಬೊಂಗಾಳೆ ರೈಲ್ವೆ ಮೈದಾನದಲ್ಲಿ ಡಾನ್ಸ್‌ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದನು. ಕಾರ್ಯಕ್ರಮ ಮುಗಿದ ನಂತರ ಪಾರ್ಕಿಂಗ್‌ನಲ್ಲಿ ಹಚ್ಚಿದ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಆರೋಪಿತರ ವಾಹನಕ್ಕೆ ಟಚ್‌ ಆಗಿದೆ. ಇದೇ ಕಾರಣಕ್ಕೆ ಉತ್ತಮ ಜತೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಆಗ ಸುನೀಲ, ಸನ್ನಿ ಹಾಗೂ ಮೈಕಲ್‌ ತಮ್ಮ ಬಳಿ ಇದ್ದ ಚಾಕುವಿನಿಂದ ಉತ್ತಮ ದೇಹಕ್ಕೆ ಇರಿದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡು ಪಾರ್ಕಿಂಗ್‌ನಲ್ಲಿ ಒದ್ದಾಡುತ್ತಿದ್ದಾಗ ಆತನನ್ನು ಅಲ್ಲಿಯೇ ಬಿಟ್ಟು ಮೂವರು ಪರಾರಿಯಾಗಿದ್ದಾರೆ ಎಂದು ಪೊಲೀಸ್‌ರು ತಿಳಿಸಿದ್ದಾರೆ.

ಬಂಧಿತರಿಂದ ಕೊಲೆಗೆ ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ನಮ್ಮ ವಾಹನಕ್ಕೆ ಆತನ ಗಾಡಿ ಟಚ್‌ ಆಗಿದ್ದಕ್ಕೆ ಆತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿರುವ ಬಂಧಿತರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

ಕೊಲೆಯಾದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಕೇಶ್ವಾಪುರ ಸಿಪಿಐ ಪ್ರಭು ಸೂರಿನ ನೇತೃತ್ವದ ತಂಡಕ್ಕೆ ಹು-ಧಾ ಪೊಲೀಸ್‌ ಕಮೀಷ್ನರ್‌ ಎಂ.ಎನ್‌.ನಾಗರಾಜ, ಡಿಸಿಪಿಗಳಾದ ರವೀಂದ್ರ ಗಡಾದಿ, ಬಿ.ಎಸ್‌.ನೇಮಗೌಡ, ಎಸಿಪಿ ಪಠಾಣ ಅವರು ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ