ಆ್ಯಪ್ನಗರ

ಅತ್ಯುತ್ತಮ ಸೇವೆ ನವೋದ್ಯಮಿಯ ಗುರಿಯಾಗಲಿ

ಧಾರವಾಡ : ಒಬ್ಬ ಯಶಸ್ವಿ ನವೋದ್ಯಮಿಯಾಗಲು ಲಾಭದ ಗೃಹಿಕೆಯೇ ಮುಖ್ಯವಲ್ಲ, ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವುದು ಎಂದು ನೇಚರ್‌ ಫಸ್ಟ ಇಕೋವಿಲೇಜಿನ ಪ್ರಧಾನ ಸೇವಕ ಪ್ರಕಾಶ ಗೌಡರ ಅಭಿಪ್ರಯಪಟ್ಟರು.

Vijaya Karnataka 14 Apr 2018, 5:00 am
ಧಾರವಾಡ : ಒಬ್ಬ ಯಶಸ್ವಿ ನವೋದ್ಯಮಿಯಾಗಲು ಲಾಭದ ಗೃಹಿಕೆಯೇ ಮುಖ್ಯವಲ್ಲ, ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವುದು ಎಂದು ನೇಚರ್‌ ಫಸ್ಟ ಇಕೋವಿಲೇಜಿನ ಪ್ರಧಾನ ಸೇವಕ ಪ್ರಕಾಶ ಗೌಡರ ಅಭಿಪ್ರಯಪಟ್ಟರು.
Vijaya Karnataka Web the best service is the goal of the novelist
ಅತ್ಯುತ್ತಮ ಸೇವೆ ನವೋದ್ಯಮಿಯ ಗುರಿಯಾಗಲಿ


ನಗರದ ಕೃಷಿ ವಿಶ್ವ ವಿದ್ಯಾಲಯದ ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಇಕೋ ವಿಲೇಜಿನಲ್ಲಿ ಹಮ್ಮಿಕೊಂಡಿದ್ದ ಯಶಸ್ವಿ ನವೋದ್ಯಮಿ ಕಾರ್ಯಗಾರ ಮತ್ತು ಹೊಸ ವಿಚಾರಗಳು ಎಂಬ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಶುಕ್ರವಾರ ಮಾತನಾಡಿದರು.

ಉತ್ತಮ ಸೇವೆಯನ್ನು ನೀಡಿದಲ್ಲಿ ಲಾಭ ಅದರ ಪರ್ಯಾಯವಾಗಿ ಪ್ರಾಪ್ತಿಯಾಗುವದು ನಿಶ್ಚಿತ ಎಂದ ಅವರು,ಇಂದಿನ ಯುವ ಜನಾಂಗ ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಯಾವುದಾದರೊಂದು ಆರ್ಥಿಕವಾಗಿ ಸುರಕ್ಷ ತೆ ಇರುವ ನೌಕರಿಯನ್ನು ಪಡೆಯಲು ಹಂಬಲಿಸುತ್ತಾರೆ. ಈ ಆರ್ಥಿಕ ಸುರಕ್ಷ ತೆಯ ಹುಡುಕಾಟದಲ್ಲಿ, ತಮ್ಮ ಸ್ವಶಕ್ತಿಯನ್ನೇ ಮರೆತುಬಿಡುತ್ತಾರೆ ಎಂದರು.

ಯುವಕರು ಸಮಯ ಹೋದನಂತರ ಸ್ವಂತ ಉದ್ಯೋಗದ ಯೋಚನೆ ಬರುತ್ತದೆ, ಆದರೆ ಆಗ ಸಮಯ ಮೀರಿ ಹೋಗಿರುತ್ತದೆ. ಹೀಗಾಗಿ, ಸ್ವಂತ ಉದ್ಯೋಗ ಮಾಡಬೇಕೆನ್ನುವ ಯುವಜನತೆ ಅತಿ ಮುಖ್ಯವಾಗಿ ಧೃಢ ನಿರ್ಧಾರ ಮಾಡಬೇಕು. ಅದರೊಂದಿಗೆ ಸಮುದಾಯ ವಿಜ್ಞಾನದಲ್ಲಿ ಅಭ್ಯಾಸಿಸುವ ಗೃಹ ವಿಜ್ಞಾನ, ಕರಕುಶಲ ಕಲೆ ಹಾಗೂ ಕುಟುಂಬ ಸಂಪನ್ಮೂಲ ನಿರ್ವಹಣೆಯ ವಿಷಯಗಳು ಹೇಗೆ ನವೋದ್ಯಮಿಗಳಾಗಲು ಸಹಾಯ ಮಾಡಬಲ್ಲವು ಎಂದು ತಮ್ಮ ಇಕೋವಿಲೇಜಿನ ಉದಾಹರಣೆಯಂದಿಗೆ ಸವಿಸ್ತಾರವಾಗಿ ವಿವಿರಿಸಿದರು.

ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕುಟುಂಬ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥರಾದ ಡಾ. ಸುಮಾ ಹಾಸಲಕರ ಮಾತನಾಡಿ, ಹೊಸ ವಿಚಾರ, ಗ್ರಾಮೀಣ ಸೊಗಡು, ಪರಿಸರ, ಆಹಾರ ಮತ್ತು ಮನರಂಜನೆಯ ಯಶಸ್ವಿ ಸಮ್ಮಿಲನವಾದ ನೇಚರ್‌ ಪಸ್ಟ್‌ ಇಕೋವಿಲೇಜ ಎಲ್ಲ ಯುವಜನತೆಗೆ ಒಂದು ಮಾದರಿಯಾಗಿದೆ. ಇಕೋವಿಲೇಜ ಇನ್ನೂ ಹೆಚ್ಚು ಯಶಸ್ವಿಯಾಗಲಿ ಎಂದು ಹಾರೈಸಿದರು.

ನಂತರ ಸಮುದಾಯ ವಿಜ್ಞಾನ ವಿದ್ಯಾರ್ಥಿಗಳು ಯಶಸ್ವಿ ನವೋದ್ಯಮಿಯಾಗುವುದರ ಕುರಿತು ಕೇಳಿದ ಹಲವಾರು ಪ್ರಶ್ನೆಗಳಿಗೆ ಪ್ರಕಾಶ ಗೌಡರ ಹಾಗೂ ಇಕೋವಿಲೇಜಿನ ಸಹ ಸಂಸ್ಥಾಪಕರಾದ ಚಂದ್ರಶೇಖರ ಭೈರಪ್ಪನವರ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಉತ್ತರಿಸಿದರು.

ಹಾಲಪ್ಪ ಹಾಗೂ ಪ್ರೇಕ್ಷಿತಾ ತಮ್ಮ ಅನಿಸಿಕೆಗಳನ್ನು ಹೇಳಿದರು.ರಮ್ಯಾ ಬಡಿಗನ್ನವರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ