ಆ್ಯಪ್ನಗರ

ಬೈಕ್‌ನಲ್ಲಿ ಬಂದು ಸರಗಳ್ಳತನ

ಹುಬ್ಬಳ್ಳಿ: ಬೈಕ್‌ ಮೇಲೆ ಬಂದ ಅಪರಿಚಿತರಿಬ್ಬರು ಮಹಿಳೆ ಕೊರಳಲ್ಲಿನ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವಿಶ್ವೇಶ್ವರನಗರದಲ್ಲಿ ನಡೆದಿದೆ.

Vijaya Karnataka 26 Apr 2019, 5:00 am
ಹುಬ್ಬಳ್ಳಿ: ಬೈಕ್‌ ಮೇಲೆ ಬಂದ ಅಪರಿಚಿತರಿಬ್ಬರು ಮಹಿಳೆ ಕೊರಳಲ್ಲಿನ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವಿಶ್ವೇಶ್ವರನಗರದಲ್ಲಿ ನಡೆದಿದೆ.
Vijaya Karnataka Web the bike ride on the bike
ಬೈಕ್‌ನಲ್ಲಿ ಬಂದು ಸರಗಳ್ಳತನ


ರಾಜನಗರ ನಿವಾಸಿ ಕಾಂತಾಬಾಯಿ ಕೃಷ್ಣಾರಾವ್‌ ಬುರಲಿ ಎಂಬುವರೇ ಸರ ಕಳೆದುಕೊಂಡ ಮಹಿಳೆ. ಏ.21ರಂದು ಬೆಳಗಿನ ಜಾವ ವಾಯುವಿಹಾರಕ್ಕಾಗಿ ನಡೆದುಕೊಂಡು ಹೊರಟಾಗ ಈ ಘಟನೆ ನಡೆದಿದೆ. ಬೈಕ್‌ ಮೇಲೆ ಹಿಂದಿನಿಂದ ಬಂದ ಇಬ್ಬರು ಅಪರಿಚಿತರು ಏಕಾಏಕಿ ಕೊರಳಲ್ಲಿನ 20 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ಕಾಣೆ : ಹುಬ್ಬಳ್ಳಿ: ಮನೆಯಿಂದ ಆಚೆ ಹೋದ ಯುವಕನೊಬ್ಬ ಮನೆಗೆ ಮರಳಿ ಬಾರದೇ ಕಾಣೆಯಾಗಿರುವ ಘಟನೆ ವಿದ್ಯಾನಗರದಲ್ಲಿ ನಡದಿದೆ.

ವಿದ್ಯಾನಗರದ ಪ್ರಸಾದ ಕೃಷ್ಣಾ ಹುಬ್ಬಳ್ಳಿ(21) ಕಾಣೆಯಾದ ಯುವಕ. ಏ. 18ರಂದು ಸಂಜೆ 6 ಗಂಟೆ ಸುಮಾರಿಗೆ ವಿದ್ಯಾನಗರದಲ್ಲಿ ಇದ್ದ ಮನೆಯಿಂದ ಆಚೆ ಹೋದ ಪ್ರಸಾದ ಹುಬ್ಬಳ್ಳಿ ಮನೆಗೆ ಮರಳಿ ಬಾರದೇ ಕಾಣೆಯಾಗಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಡ ವಸೂಲಿ: ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಏ.24ರಂದು 648 ಪ್ರಕರಣಗಳನ್ನು ದಾಖಲಿಸಿದ್ದು ಒಟ್ಟು 1,72,450 ರೂ. ದಂಡ ವಸೂಲಿ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ