ಆ್ಯಪ್ನಗರ

ಬಿಆರ್‌ಟಿಎಸ್‌ ಬಸ್‌ ಕಾರು ಡಿಕ್ಕಿ

ಹುಬ್ಬಳ್ಳಿ : ಭೈರಿದೇವರಕೊಪ್ಪ ಕ್ರಾಸ್‌ದಲ್ಲಿ ಸೋಮವಾರ ಕಾರು ಹಾಗೂ ಬಿಆರ್‌ಟಿಎಸ್‌ ಬಸ್‌ ಮಧ್ಯೆ ಅಪಘಾತ ಸಂಭವಿಸಿದೆ. ಇದು ಬಿಆರ್‌ಟಿಎಸ್‌ ಕಾರಿಡಾರ್‌ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಬಿಆರ್‌ಟಿಎಸ್‌ ಕಾರಿಡಾರ್‌ ಮಧ್ಯೆ ಕ್ರಾಸಿಂಗ್‌ ಸಮಸ್ಯೆಗೆ ಇದೊಂದು ದೊಡ್ಡ ಉದಾಹರಣೆಯಾಗಿದೆ.

Vijaya Karnataka 11 Dec 2018, 5:00 am
ಹುಬ್ಬಳ್ಳಿ : ಭೈರಿದೇವರಕೊಪ್ಪ ಕ್ರಾಸ್‌ದಲ್ಲಿ ಸೋಮವಾರ ಕಾರು ಹಾಗೂ ಬಿಆರ್‌ಟಿಎಸ್‌ ಬಸ್‌ ಮಧ್ಯೆ ಅಪಘಾತ ಸಂಭವಿಸಿದೆ. ಇದು ಬಿಆರ್‌ಟಿಎಸ್‌ ಕಾರಿಡಾರ್‌ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಬಿಆರ್‌ಟಿಎಸ್‌ ಕಾರಿಡಾರ್‌ ಮಧ್ಯೆ ಕ್ರಾಸಿಂಗ್‌ ಸಮಸ್ಯೆಗೆ ಇದೊಂದು ದೊಡ್ಡ ಉದಾಹರಣೆಯಾಗಿದೆ.
Vijaya Karnataka Web HBL-1012-2-3-BRTS ACCIDENT-1
ಭೈರಿದೇವರಕೊಪ್ಪ ಬಳಿ ಬಿಆರ್‌ಟಿಎಸ್‌ ಬಸ್‌ ಕಾರ್‌ಗೆ ಡಿಕ್ಕಿ ಪಡಿಸಿರುವ ದೃಶ್ಯ..


ಭೈರಿದೇವರಕೊಪ್ಪ ಬಸ್‌ ನಿಲ್ದಾಣದ ಬಳಿ ಕಾರ್‌ ಚಾಲಕ ರೋಡ್‌ ಕ್ರಾಸ್‌ ಮಾಡುವ ವೇಳೆ, ಬಿಆರ್‌ಟಿಎಸ್‌ ಕಾರಿಡಾರ್‌ದಲ್ಲಿ ರಭಸವಾಗಿ ಬರುತ್ತಿದ್ದ ಬಸ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ, ಕಾರ್‌ ಜಖಂಗೊಂಡಿದೆ. ಈ ಸಂಬಂಧ ಬಿಆರ್‌ಟಿಎಸ್‌ ಬಸ್‌ ಚಾಲಕ ಮತ್ತು ಕಾರ್‌ ಮಾಲೀಕರ ಮಧ್ಯೆ ವಾಗ್ವಾದ ನಡೆದಿದೆ. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬಿಆರ್‌ಟಿಎಸ್‌ ಬಸ್‌ ಚಾಲಕ ಮತ್ತು ಕಾರ್‌ ಮಾಲೀಕರನ್ನು ಠಾಣೆಗೆ ಕರೆದ್ಯೊಯ್ದಿದ್ದರು.

ಕಾರ್‌ ದುರಸ್ತಿಯ ವೆಚ್ಚ ಭರಿಸುವಂತೆ ಮಾಲೀಕರು ಪಟ್ಟು ಹಿಡಿದಿದ್ದು ರಾತ್ರಿಯಾದರೂ ಈ ಬಗ್ಗೆ ಪ್ರಕರಣ ದಾಖಲಾಗಿರಲಿಲ್ಲ. ಕಾರಿಡಾರ್‌ ನಿಷೇಧಿತ ವಲಯ ಎಂದು ಪರಿಗಣಿಸಿದರೂ ಕ್ರಾಸಿಂಗ್‌ದಲ್ಲಿ ಈ ಘಟನೆ ನಡೆದಿರುವುದರಿಂದ ಬಿಆರ್‌ಟಿಎಸ್‌ ಮತ್ತು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ