ಅಧಿಕಾರ ಸ್ವೀಕರಿಸಿದ ಆಯುಕ್ತ ಇಟ್ನಾಳ ಇಂಗಿತ
ಹುಬ್ಬಳ್ಳಿ : ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಎಎಸ್ ಶ್ರೇಣಿಯ ಸುರೇಶ ಹಿಟ್ನಾಳ್ ಅವರು, ವರ್ಗಾವಣೆಗೊಂಡ ಐಎಎಸ್ ಅಧಿಕಾರಿ ಪ್ರಶಾಂತ ಮಿಶ್ರಾ ಅವರಿಂದ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದರು.
Vijaya Karnataka 12 Jul 2019, 5:00 am
ಹುಬ್ಬಳ್ಳಿ : ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಎಎಸ್ ಶ್ರೇಣಿಯ ಸುರೇಶ ಹಿಟ್ನಾಳ್ ಅವರು, ವರ್ಗಾವಣೆಗೊಂಡ ಐಎಎಸ್ ಅಧಿಕಾರಿ ಪ್ರಶಾಂತ ಮಿಶ್ರಾ ಅವರಿಂದ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಪಾಲಿಕೆ ಆಯುಕ್ತರ ಕಚೇರಿಗೆ ಸಂಜೆ 5 ಗಂಟೆಗೆ ಆಗಮಿಸಿದ ಸುರೇಶ ಇಟ್ನಾಳ್ ಕೆಲ ಹೊತ್ತು ಕಾದು ಕುಳಿತಿದ್ದರು. ಬಳಿಕ ಆಗಮಿಸಿದ ಆಯುಕ್ತ ಪ್ರಶಾಂತ ಮಿಶ್ರಾ ಅವರು, ಅಧಿಕಾರ ಹಸ್ತಾಂತರದ ಔಪಚಾರಿಕ ಪ್ರಕ್ರಿಯೆ ಪೂರೈಸಿದರು. ನಂತರ ಮಿಶ್ರಾ, ಸುರೇಶ ಅವರ ಕೈ ಕುಲುಕುವ ಮೂಲಕ ಶುಭಕೋರಿ ನಿರ್ಗಮಿಸಿದರು.
ತದನಂತರ ಮಾಧ್ಯಮದವರ ಜತೆ ಮಾತನಾಡಿದ ನೂತನ ಆಯುಕ್ತ ಸುರೇಶ ಇಟ್ನಾಳ್, 13 ವರ್ಷಗಳವರೆಗೆ ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದು, ಅಭಿವೃದ್ಧಿ ಮತ್ತು ನಾಗರಿಕ ಕೇಂದ್ರಿತ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಯು ಹೊಸ ಅನುಭವ. ಈ ತೆರನಾದ ಹುದ್ದೆಯಲ್ಲಿ ಸೇವೆ ಮಾಡಲು ಬಹುದಿನಗಳಿಂದ ಕಾಯ್ತಾ ಇದ್ದೆ. ಇದೀಗ ಅದು ಕೂಡಿ ಬಂದಿದೆ ಎಂದು ಭಾವಿಸಿದ್ದೇನೆ. ಹಾಗಾಗಿ ತುಂಬ ಸಂತಸದಿಂದ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾನಗರದ ನೈರ್ಮಲ್ಯವೇ ಮತ್ತು ನಾಗರಿಕರ ಕುಂದುಕೊರತೆಗಳ ಅಹವಾಲು ಆಲಿಸಲು ಮೊದಲ ಆದ್ಯತೆ ನೀಡುವುದಾಗಿ ತಿಳಿದ ಆಯುಕ್ತರು, ಅವಳಿ ನಗರವನ್ನು ಸುತ್ತಾಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಅರಿಯುತ್ತೇನೆ. ರಸ್ತೆ ಗುಂಡಿಗಳು, ಅತಿಕ್ರಮಣ ಸೇರಿದಂತೆ ಹಲವು ಸಮಸ್ಯೆಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನಾಗರಿಕ ಸ್ನೇಹಿ ಪಾಲಿಕೆಯನ್ನಾಗಿಸಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಾಲಿಕೆ ಆಯುಕ್ತರ ಕಚೇರಿಗೆ ಸಂಜೆ 5 ಗಂಟೆಗೆ ಆಗಮಿಸಿದ ಸುರೇಶ ಇಟ್ನಾಳ್ ಕೆಲ ಹೊತ್ತು ಕಾದು ಕುಳಿತಿದ್ದರು. ಬಳಿಕ ಆಗಮಿಸಿದ ಆಯುಕ್ತ ಪ್ರಶಾಂತ ಮಿಶ್ರಾ ಅವರು, ಅಧಿಕಾರ ಹಸ್ತಾಂತರದ ಔಪಚಾರಿಕ ಪ್ರಕ್ರಿಯೆ ಪೂರೈಸಿದರು. ನಂತರ ಮಿಶ್ರಾ, ಸುರೇಶ ಅವರ ಕೈ ಕುಲುಕುವ ಮೂಲಕ ಶುಭಕೋರಿ ನಿರ್ಗಮಿಸಿದರು.
ತದನಂತರ ಮಾಧ್ಯಮದವರ ಜತೆ ಮಾತನಾಡಿದ ನೂತನ ಆಯುಕ್ತ ಸುರೇಶ ಇಟ್ನಾಳ್, 13 ವರ್ಷಗಳವರೆಗೆ ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದು, ಅಭಿವೃದ್ಧಿ ಮತ್ತು ನಾಗರಿಕ ಕೇಂದ್ರಿತ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಯು ಹೊಸ ಅನುಭವ. ಈ ತೆರನಾದ ಹುದ್ದೆಯಲ್ಲಿ ಸೇವೆ ಮಾಡಲು ಬಹುದಿನಗಳಿಂದ ಕಾಯ್ತಾ ಇದ್ದೆ. ಇದೀಗ ಅದು ಕೂಡಿ ಬಂದಿದೆ ಎಂದು ಭಾವಿಸಿದ್ದೇನೆ. ಹಾಗಾಗಿ ತುಂಬ ಸಂತಸದಿಂದ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾನಗರದ ನೈರ್ಮಲ್ಯವೇ ಮತ್ತು ನಾಗರಿಕರ ಕುಂದುಕೊರತೆಗಳ ಅಹವಾಲು ಆಲಿಸಲು ಮೊದಲ ಆದ್ಯತೆ ನೀಡುವುದಾಗಿ ತಿಳಿದ ಆಯುಕ್ತರು, ಅವಳಿ ನಗರವನ್ನು ಸುತ್ತಾಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಅರಿಯುತ್ತೇನೆ. ರಸ್ತೆ ಗುಂಡಿಗಳು, ಅತಿಕ್ರಮಣ ಸೇರಿದಂತೆ ಹಲವು ಸಮಸ್ಯೆಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನಾಗರಿಕ ಸ್ನೇಹಿ ಪಾಲಿಕೆಯನ್ನಾಗಿಸಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.