ಆ್ಯಪ್ನಗರ

ಖಾಸನೀಸ್‌ ಸಹೋದರರ ಹುಬ್ಬಳ್ಳಿ ಆಸ್ತಿ ಜಪ್ತಿ

ಹುಬ್ಬಳ್ಳಿ : ಕೋಟ್ಯಂತರ ರೂ. ವಂಚನೆ ಆರೋಪ ಎದುರಿಸುತ್ತಿರುವ ಕಲಘಟಗಿಯ ಹರ್ಷಾ ಎಂಟರ್‌ಟೈನಮೆಂಟ್‌ ಮಾಲೀಕರಿಗೆ ಸಂಬಂಧಿಸಿದ ಹು-ಧಾ ಮಹಾನಗರ ಪಾಲಿಕೆ ಭೈರಿದೇವರಕೊಪ್ಪ ಖಾತೆ ಸಂಖ್ಯೆ 356 ಹಿಸ್ಸಾ/12ರ 1.08 ಆಣೆ ನಿವೇಶನವನ್ನು ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆದರು.

Vijaya Karnataka 20 Jul 2019, 5:00 am
ಹುಬ್ಬಳ್ಳಿ : ಕೋಟ್ಯಂತರ ರೂ. ವಂಚನೆ ಆರೋಪ ಎದುರಿಸುತ್ತಿರುವ ಕಲಘಟಗಿಯ ಹರ್ಷಾ ಎಂಟರ್‌ಟೈನಮೆಂಟ್‌ ಮಾಲೀಕರಿಗೆ ಸಂಬಂಧಿಸಿದ ಹು-ಧಾ ಮಹಾನಗರ ಪಾಲಿಕೆ ಭೈರಿದೇವರಕೊಪ್ಪ ಖಾತೆ ಸಂಖ್ಯೆ 356 ಹಿಸ್ಸಾ/12ರ 1.08 ಆಣೆ ನಿವೇಶನವನ್ನು ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆದರು.
Vijaya Karnataka Web the confiscation of the hubli property of the khasins brothers
ಖಾಸನೀಸ್‌ ಸಹೋದರರ ಹುಬ್ಬಳ್ಳಿ ಆಸ್ತಿ ಜಪ್ತಿ


ಈ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಹಾಗೂ ರಾಜ್ಯ ಸರಕಾರದ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ಮಹ್ಮದ ಜುಬೇರ್‌ ನೇತೃತ್ವದಲ್ಲಿ ನಿವೇಶನವನ್ನು ಜಪ್ತಿ ಮಾಡಲಾಯಿತು. ಪ್ರಕರಣದ ಆರೋಪಿಗಳಾದ ಸತ್ಯಬೋಧ ಖಾಸನೀಸ್‌, ಸಂಜೀವ ಖಾಸನೀಸ್‌ ಹಾಗೂ ಶ್ರೀಕಾಂತ ಖಾಸನೀಸ್‌ಗೆ ಸಂಬಂಧಿಸಿದ ಜಾಗೆ ಇದಾಗಿದ್ದು, ಒಟ್ಟು 1089 ಚದರಡಿ ವ್ಯಾಪ್ತಿ ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ್‌, ಖಾಸಗಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದವರ ರಕ್ಷ ಣೆಗಾಗಿ ರೂಪಿಸಲಾಗಿರುವ 2004ರ ಕಾಯ್ದೆ ಅನ್ವಯ ಹಾಗೂ ಸರಕಾರ ಆದೇಶದ ಮೇರೆಗೆ ಹರ್ಷಾ ಎಂಟರ್‌ಟೇನ್‌ಮೆಂಟ್‌ನ ಖಾಸನೀಸ್‌ ಕುಟುಂಬದವರ ಚರ ಹಾಗೂ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಸಿಐಡಿ ಪೊಲೀಸರು ನೀಡಿರುವ ಮಾಹಿತಿಯಂತೆ ಖಾಸನೀಸ್‌ ಕುಟುಂಬದ ಆಸ್ತಿ ವಿವರಗಳ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತನಿಖಾ ತಂಡ ನೀಡುವ ಮಾಹಿತಿ ಆಧಾರದ ಮೇಲೆ ಧಾರವಾಡ ಜಿಲ್ಲೆ ವ್ಯಾಪ್ತಿಯ ಕಲಘಟಗಿ, ಮಾಚಾಪುರ, ಹಿರೇಹೊನ್ನಿಹಳ್ಳಿ, ರಾಮನಾಳ ಗ್ರಾಮಗಳಲ್ಲಿನ ಒಟ್ಟು 16 ಎಕರೆ 7 ಗುಂಟೆ ಜಮೀನು, ಮಡಕಿಹೊನ್ನಹಳ್ಳಿಯಲ್ಲಿನ 2 ಮನೆ ಹಾಗೂ ಹುಬ್ಬಳ್ಳಿಯಲ್ಲಿನ 1 ನಿವೇಶನ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಳ್ಳಾರಿ ನಗರದಲ್ಲಿ ಇರುವ 1 ನಿವೇಶನವನ್ನು ಮುಟ್ಟುಗೋಲು ಹಾಕಿಕೊಂಡು ವರದಿ ನೀಡುವಂತೆ ಬಳ್ಳಾರಿ ತಹಸೀಲ್ದಾರರಿಗೆ ಪತ್ರ ಬರೆಯಲಾಗಿದೆ ಎಂದರು.

ಖಜಾನೆಯಲ್ಲಿ ಭದ್ರ
ಆರೋಪಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ್ದ ಒಟ್ಟು 8,20,73,328 ರೂ. ನಗದೀಕರಿಸಿಕೊಂಡು ಧಾರವಾಡ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ. ಸಿಐಡಿ ತನಿಖೆಯ ವೇಳೆ ಚಾಲ್ತಿ ಇರುವ ನೋಟುಗಳ 93,900 ರೂ. ಮತ್ತು 3,01,000 ರೂ. ಹಳೇ ನೋಟು ಜಪ್ತಿ ಮಾಡಲಾಗಿದೆ. ಇದರಲ್ಲದೆ, 85.17 ಗ್ರಾಂ ಚಿನ್ನ, ಸುಮಾರು 7 ಕೆ.ಜಿ.ಬೆಳ್ಳಿ ಜಪ್ತಿ ಮಾಡಿ ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿ ಇರಿಸಲಾಗಿದೆ ಎಂದು ತಿಳಿಸಿದರು.

ಅದರಂತೆ ಮಾರುತಿ ಇನ್ನೋವಾ ಹಾಗೂ ರಾಯಲ್‌ ಎನ್‌-ಫೀಲ್ಡ್‌ ಬೈಕ್‌ ವಶಪಡಿಸಿಕೊಂಡು ಉಪನಗರ ಪೊಲೀಸ್‌ ಠಾಣೆಯಲ್ಲಿ ಇಡಲಾಗಿದೆ. ಸಾರ್ವಜನಿಕರಿಂದ ಆರೋಪಿಗಳಿಗೆ ಸಂಬಂಧಿಸಿದ ಆಸ್ತಿಗಳ ವಿವರಗಳ ಮಾಹಿತಿ ಬಂದರೆ ಅವುಗಳನ್ನು ಪರಿಶೀಲಸಿ ವಶಕ್ಕೆ ಪಡೆಯಲು ನ್ಯಾಯಾಲಯ ಹಾಗೂ ಸರಕಾರಕ್ಕೆ ಪತ್ರ ಬರೆಯಲಾಗುವುದು. ಕಲಘಟಗಿ ತಹಸೀಲ್ದಾರಾರರ ಕಚೇರಿಯಲ್ಲಿ ಹೂಡಿಕೆದಾರರು ಹರ್ಷಾ ಎಂಟರ್‌ಟೈನ್‌ಮಂಟ್‌ನಲ್ಲಿ ಹೂಡಿಕೆ ಮಾಡಿರುವ ಮಾಹಿತಿ ಪಡೆದುಕೊಳ್ಳಲು 2 ಕೇಂದ್ರಗಳನ್ನು ತರೆಯಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ ನಗರ ತಹಸೀಲ್ದಾರ ಶಶಿಧರ ಮಾಡ್ಯಾಳ, ಗ್ರಾಮ ಲೆಕ್ಕಾಧಿಕಾರಿ ಶಿವಳ್ಳಿ ಮಠ, ಉಪವಿಭಾಗಾಧಿಕಾರಿ ಕಚೇರಿಯ ಸತೀಶ್‌ ಸೇರಿದಂತೆ ಇತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ