ಆ್ಯಪ್ನಗರ

ಮಹಾನಗರಕ್ಕೆ ತಂಪೆರೆದ ಮಳೆ

ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಬುಧವಾರ ಬೆಳಗ್ಗೆಯಿಂದಲೂ ತುಂತುರು ಮಳೆ ಆರಂಭವಾಗಿದೆ ದಿನವಿಡಿ ಮೋಡ ಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಮುಂಗಾರು ಅನುಭವ ನೀಡಿತು...

Vijaya Karnataka 13 Jun 2019, 5:00 am
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಬುಧವಾರ ಬೆಳಗ್ಗೆಯಿಂದಲೂ ತುಂತುರು ಮಳೆ ಆರಂಭವಾಗಿದೆ. ದಿನವಿಡಿ ಮೋಡ ಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಮುಂಗಾರು ಅನುಭವ ನೀಡಿತು.
Vijaya Karnataka Web DRW-RAIN IN DHARWAD (4)


ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನತೆಗೆ ಮಳೆ ತಂಪೆರೆಯಿತು. ಬೆಳಗ್ಗೆ ಆರಂಭವಾದ ಮಳೆ ಮಧ್ಯಾಹ್ನ ಸ್ವಲ್ಪ ಕಡಿಯಾದಂತೆ ಕಂಡು ಬಂದರೂ ಸಂಜೆಯಾಗುತ್ತಲೇ ಮತ್ತೆ ಕಪ್ಪು ಮೋಡಗಳಿಂದ ಸುರಿದ ಮಳೆ ಮುಂಗಾರು ಆರಂಭದ ಮುನ್ಸೂಚನೆ ನೀಡಿತು. ಆದರೆ, ತಾಲೂಕು ಪ್ರದೇಶಗಳಲ್ಲಿ ಆದ ಜಿಟಿಜಿಟಿ ಮಳೆ ನೋಡಿದರೆ ರೈತರ ಮನದಲ್ಲಿದ್ದ ದೊಡ್ಡ ಮಳೆ ನಿರೀಕ್ಷೆಯನ್ನು ಹುಸಿಗೊಳಿಸಿತು. ಮೇ ಕೊನೆ ವಾರದಲ್ಲಾಗಬೇಕಾದ ಮಳೆ ತಡವಾಗಿ ಆದರೂ ಜೂನ್‌ ಎರಡನೇ ವಾರದಲ್ಲಿ ಬಂತು. ಆದರೆ, ಬಿತ್ತನೆಗೆ ಇನ್ನು ಹೆಚ್ಚಿನ ಮಳೆ ಅವಶ್ಯಕತೆ ಇದೆ. ಮಳೆ ಬಿತ್ತನೆಗೆ ಕಾರ್ಯ ಸಿದ್ಧತೆಯನ್ನು ಚುರುಕುಗೊಳಿಸುವಂತೆ ಮಾಡಿತು. ಮಳೆಯಿಂದ ತಪ್ಪಿಸಿಕೊಳ್ಳಲು ಕೆಲವರು ಛತ್ರಿಯ ಮೊರೆ ಹೊದರೆ, ಇನ್ನು ಕೆಲವರು ರಸ್ತೆ ಪಕ್ಕದಲ್ಲಿರುವ ಮರಗಳ ಕೆಳಗೆ ನಿಂತರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ