ಆ್ಯಪ್ನಗರ

ಸಾಲಮನ್ನಾ ಪಂಚವಾರ್ಷಿಕ ಯೋಜನೆಯೇ?: ಭಾರತಿ ರೆಡ್ಡಿ

ಕುಂದಗೋಳ : ರಾಜ್ಯದ ಬೆರಳೆಣಿಕೆಯಷ್ಟು ರೈತರ ಸಾಲಮನ್ನಾ ಯೋಜನೆಗೊಳಪಡುವಂತೆ ರೂಪಿಸಿದ ರಾಜ್ಯ ಸರಕಾರದ ತಂತ್ರಗಾರಿಕೆ ರೈತರಿಗೆ ಅನ್ಯಾಯವೆಸಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಘಟಕಾಧ್ಯಕ್ಷೆ ಭಾರತಿ ರೆಡ್ಡಿ ಆರೋಪಿಸಿದರು.

Vijaya Karnataka 9 May 2019, 5:00 am
ಕುಂದಗೋಳ : ರಾಜ್ಯದ ಬೆರಳೆಣಿಕೆಯಷ್ಟು ರೈತರ ಸಾಲಮನ್ನಾ ಯೋಜನೆಗೊಳಪಡುವಂತೆ ರೂಪಿಸಿದ ರಾಜ್ಯ ಸರಕಾರದ ತಂತ್ರಗಾರಿಕೆ ರೈತರಿಗೆ ಅನ್ಯಾಯವೆಸಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಘಟಕಾಧ್ಯಕ್ಷೆ ಭಾರತಿ ರೆಡ್ಡಿ ಆರೋಪಿಸಿದರು.
Vijaya Karnataka Web DRW-8KND2A
ಕುಂದಗೋಳ ತಾಲೂಕು ಗುಡಗೇರಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಘಟಕಾಧ್ಯಕ್ಷೆ ಭಾರತಿ ರೆಡ್ಡಿ ಮಾತನಾಡಿದರು.


ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ರೈತರ ಸಾಲ ಮನ್ನಾ ಮಾಡದ ರಾಜ್ಯ ಸರಕಾರ ರೈತರ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡುತ್ತಿದೆ. ಹಂತ-ಹಂತವಾಗಿ ಸಾಲಮನ್ನಾ ಮಾಡಲು ಇದೇನು ಪಂಚವಾರ್ಷಿಕ ಯೋಜನೆಯೇ? ಎಂದು ಪ್ರಶ್ನಿಸಿದರು.

ದೇಶದ ಪ್ರತಿ ರೈತರಿಗೆ ಕೇಂದ್ರದಿಂದ ವರ್ಷಕ್ಕೆ 6 ಸಾವಿರ ರೂ. ಆರ್ಥಿಕ ಸಹಾಯಧನ ನೀಡುತ್ತಿದ್ದು, ಬಡ ಕುಟುಂಬದ ಸದಸ್ಯರಿಗೊಬ್ಬರಂತೆ 5ಲಕ್ಷ ರೂ. ವರೆಗೆ ಆಯುಷ್ಮಾನ ಕಾರ್ಡ್‌ ನೀಡಿದೆ. ಇದರಿಂದ ಲಕ್ಷಾಂತರ ಬಡ ಜನತೆಗೆ ಅನುಕೂಲವಾಗಲಿದೆ. ಇಂಥ ನೂರಾರು ಯೋಜನೆಗಳನ್ನು ಕೇಂದ್ರ ಹೊರತಂದಿದೆ ಎಂದರು.

ಇದೇ ಸಂಧರ್ಭದಲ್ಲಿ ಕಾಂಗ್ರೆಸ್‌ನ ವಾಗೇಶ ಶಿಂಗಣ್ಣವರ, ಮುಖಂಡ ಬಸುರಾಜ ಬೆಂಗೇರಿ, ರಮೇಶ ಕತ್ತಿ, ನಿಂಗಪ್ಪ ಬೆಂತೂರ, ಹನಮಂತ ಜಾಡರ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ್ರ ನೇತೃತ್ವದಲ್ಲಿ ಸೇರ್ಪಡೆಯಾದರು. ಮಾಜಿ ಶಾಸಕಿ ಸೀಮಾ ಮಸೂತಿ, ಮಲ್ಲಿಕಾರ್ಜುನ ಕಿರೇಸೂರ, ರುದ್ರಪ್ಪ ಗಾಣಿಗೇರ, ಮಂಜುನಾಥ ಅಣ್ಣಿಗೇರಿ, ಧರ್ಮರಾಜ ಕಬನೂರ, ಬಸುನಗೌಡ ಹರಕುಣಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ