ಆ್ಯಪ್ನಗರ

ಮೊಬೈಲ್‌ ಹಾವಳಿಯಿಂದ ಕ್ರೀಡಾ ಮನೋಭಾವ ಕ್ಷೀಣ

ಉಪ್ಪಿನ ಬೆಟಗೇರಿ: ಉಪ್ಪಿನಬೆಟಗೇರಿಯ ಎಂ.ಜಿ ಹಳವೂರ ಉರ್ದು ಪ್ರೌಢ ಶಾಲೆಯಲ್ಲಿಜರುಗಿದ ವಲಯ ಮಟ್ಟದ ಬಾಲಕಿಯರ ವಾಲಿಬಾಲ್‌ ಪಂದ್ಯದಲ್ಲಿಪ್ರಥಮ ಸ್ಥಾನ ಪಡೆದ ಕೊಟಬಾಗಿ ತಂಡಕ್ಕೆ ಮಂಜುನಾಥ ಸಂಕಣ್ಣವರ ಪ್ರಶಸ್ತಿ ಪತ್ರ ನೀಡಿದರು.

Vijaya Karnataka 25 Sep 2019, 5:00 am
ಉಪ್ಪಿನ ಬೆಟಗೇರಿ: ಉಪ್ಪಿನಬೆಟಗೇರಿಯ ಎಂ.ಜಿ ಹಳವೂರ ಉರ್ದು ಪ್ರೌಢ ಶಾಲೆಯಲ್ಲಿಜರುಗಿದ ವಲಯ ಮಟ್ಟದ ಬಾಲಕಿಯರ ವಾಲಿಬಾಲ್‌ ಪಂದ್ಯದಲ್ಲಿಪ್ರಥಮ ಸ್ಥಾನ ಪಡೆದ ಕೊಟಬಾಗಿ ತಂಡಕ್ಕೆ ಮಂಜುನಾಥ ಸಂಕಣ್ಣವರ ಪ್ರಶಸ್ತಿ ಪತ್ರ ನೀಡಿದರು.
Vijaya Karnataka Web the decline in sportsmanship from mobile affliction
ಮೊಬೈಲ್‌ ಹಾವಳಿಯಿಂದ ಕ್ರೀಡಾ ಮನೋಭಾವ ಕ್ಷೀಣ


ಇದಕ್ಕೂ ಮೊದಲು ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಸಧೃಢ ಶರೀರವನ್ನು ಹೊಂದಲು ಕ್ರೀಡೆಗಳು ಅವಶ್ಯ. ಇತ್ತೀಚಿನ ದಿನಗಳಲ್ಲಿಮೊಬೈಲ್‌ ಹಾವಳಿಯಿಂದ ಮಕ್ಕಳಲ್ಲಿಕ್ರೀಡಾ ಮನೋಭಾವ ಕಡಿಮೆಯಾಗುತ್ತಿರುವುದು ಖೇದಕರ ಸಂಗತಿ. ಪ್ರತಿಯೊಬ್ಬರು ಕ್ರೀಡೆಗಳಲ್ಲಿಭಾಗವಹಿಸಿದರೆ ವ್ಯಾಯಾಮದ ಜತೆಗೆ ಉತ್ತಮ ಆರೋಗ್ಯ ಹೊಂದಬಹುದು. ಯಾವುದೇ ಒತ್ತಡಗಳಿಗೆ ಮಣಿಯದೆ ನಿರ್ಣಾಯಕರು ಪಾರದರ್ಶಕ ನಿರ್ಣಯ ನೀಡಬೇಕು ಎಂದರು.

ಮುಖ್ಯೋಪಾಧ್ಯಾಯ ವೈ.ಎಚ್‌ ಜೋರಮ್ಮನವರ ಮಾತನಾಡಿ, ಶಿಕ್ಷಣ ಹಾಗೂ ಕ್ರೀಡೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮಕ್ಕಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳಲ್ಲಿಸಾಧನೆ ಮಾಡಿ ಶಾಲೆಗೆ ಹಾಗೂ ಕಲಿಸಿದಂತ ಶಿಕ್ಷಕರಿಗೆ ಮತ್ತು ಪಾಲಕರಿಗೆ ಹೆಸರು ತರಬೇಕು. ಆಟದಲ್ಲಿಸೋಲು ಗೆಲುವು ಮುಖ್ಯವಲ್ಲ. ಇಂಥಹ ಕ್ರೀಡೆಗಳಲ್ಲಿಭಾಗವಹಿಸುವ ಜತೆಗೆ ಗೆಲುವಿನ ಬಗ್ಗೆ ಆತ್ಮಸ್ಥೆತ್ರೖರ್ಯದಿಂದ ಆಡಿದರೆ ಗೆಲುವು ಸಾಧ್ಯ ಎಂದರು.

ವಾಲಿಬಾಲ್‌ ಪಂದ್ಯದಲ್ಲಿಉಪ್ಪಿನಬೆಟಗೇರಿ, ಕೊಟಬಾಗಿ, ಯಾದವಾಡ, ಕರಡಿಗುಡ್ಡ, ಕುರಬಗಟ್ಟಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕಿಯರ ವಿಭಾಗದದಲ್ಲಿಕೊಟಬಾಗಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಸ್ಥಾನ ಪಡೆದರು.

ಬಾಲಕರ ವಿಭಾಗದಲ್ಲಿಕೊಟಬಾಗಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಹಾಗೂ ಕುರುಗಟ್ಟಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.

ಐ.ಎ ಫಿರಜಾದೆ, ಅಬ್ದುಲ್‌ರಹಿಮಾನ ದೊಡವಾಡ, ಎ.ಎ ಕಿಲ್ಲೆದಾರ, ಪಾಂಡು ಅಂಕಲಿ, ಈಶ್ವರ ಆಯಟ್ಟಿ, ಶರಣು ಅಂಗಡಿ, ಲಕ್ಷಿತ್ರ್ಮೕ ಕೋಡಿಯಾ, ಸುನಿತಾ ಪಾಟೀಲ, ಎಂ.ಎ ಅಥಣಿ, ಮದಾರ ಹಾದಿಮನಿ, ಎಂ.ಎಂ ಕೊಹಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ