ಆ್ಯಪ್ನಗರ

ಶುಲ್ಕ ಹೆಚ್ಚಳ ಪ್ರಸ್ತ್ತಾಪ ಕೂಡಲೇ ಕೈಬಿಡಲು ಆಗ್ರಹ

ಧಾರವಾಡ : ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ (ಎನ್‌ಆರ್‌ಐ) ಆನಿವಾಸಿ ಭಾರತೀಯರ ಕೋಟಾ ಜಾರಿಗೆ ತರುವ ಹಾಗೂ ಸರಕಾರಿ ಕಾಲೇಜುಗಳ ವೈದ್ಯಕೀಯ- ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು 3,4 ಪಟ್ಟು ಹೆಚ್ಚಿಸುವ ರಾಜ್ಯ ಪ್ರಸ್ತಾಪವನ್ನು ಈ ಕೂಡಲೆ ಹಿಂಪಡೆಯಬೇಕು ಎಂದು ಎಐಡಿಎಸ್‌ಓ ಸಂಸ್ಥೆ ಜಿಲ್ಲಾ ಜಂಟಿಕಾರ್ಯದರ್ಶಿ ಮಹಾಂತೇಶ ಬಿಳೂರ ಆಗ್ರಹಿಸಿದ್ದಾರೆ.

Vijaya Karnataka 21 Dec 2018, 5:00 am
ಧಾರವಾಡ : ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ (ಎನ್‌ಆರ್‌ಐ) ಆನಿವಾಸಿ ಭಾರತೀಯರ ಕೋಟಾ ಜಾರಿಗೆ ತರುವ ಹಾಗೂ ಸರಕಾರಿ ಕಾಲೇಜುಗಳ ವೈದ್ಯಕೀಯ- ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು 3,4 ಪಟ್ಟು ಹೆಚ್ಚಿಸುವ ರಾಜ್ಯ ಪ್ರಸ್ತಾಪವನ್ನು ಈ ಕೂಡಲೆ ಹಿಂಪಡೆಯಬೇಕು ಎಂದು ಎಐಡಿಎಸ್‌ಓ ಸಂಸ್ಥೆ ಜಿಲ್ಲಾ ಜಂಟಿಕಾರ್ಯದರ್ಶಿ ಮಹಾಂತೇಶ ಬಿಳೂರ ಆಗ್ರಹಿಸಿದ್ದಾರೆ.
Vijaya Karnataka Web the demand for a fee increase is immediately dropped
ಶುಲ್ಕ ಹೆಚ್ಚಳ ಪ್ರಸ್ತ್ತಾಪ ಕೂಡಲೇ ಕೈಬಿಡಲು ಆಗ್ರಹ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಖಾಸಗಿ ಕಾಲೇಜುಗಳಲ್ಲೂ ಎನ್‌.ಆರ್‌.ಐ ಕೋಟಾ ಜಾರಿಗೆ ತರುವುದು ಸಂವಿಧಾನ ಬಾಹಿರ. ಈ ಮೂಲಕ ಹಣದ ಚೀಲ ತರುವ ಶ್ರೀಮಂತ ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷ ಣವನ್ನು ಮಾರಾಟ ಮಾಡಲು ಹೊರಟಂತಿದೆ. ಇದರ ಹಿಂದೆ ವೈದ್ಯಕೀಯ ಶಿಕ್ಷ ಣವನ್ನು ವ್ಯಾಪಾರೀಕರಣ ,ಖಾಸಗೀಕರಣಗೊಳಿಸುವ, ಜಾಗತಿಕ ಸರಕನ್ನಾಗಿಸುವ ಹುನ್ನಾರ ಇದೆ ಎಂದು ದೂರಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಸರಕಾರಿ ವೈದ್ಯಕೀಯ ಕಾಲೇಜುಗಳು ಆಸರೆ ಆಗಿವೆ. ಆರೋಗ್ಯ ಕ್ಷೇತ್ರವು ಇನ್ನಷ್ಟು ವ್ಯಾಪಾರಿಕರಣಗೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಎನ್‌.ಆರ್‌.ಐ ಕೋಟಾ ಹಾಗೂ ಶುಲ್ಕ ಹೆಚ್ಚಿಸುವ ಪ್ರಸ್ತಾಪವನ್ನು ರಾಜ್ಯ ಸರಕಾರ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ