ಧಾರವಾಡ : ನಗರದ ಬಸವ ಕೇಂದ್ರ ವತಿಯಿಂದ ಶ್ರಾವಣ ಮಾಸದ ನಿತ್ಯ ವಚನೋತ್ಸವ ಆ.1ರಿಂದ ಆರಂಭಗೊಳ್ಳಲಿದ್ದು, ಒಂದು ತಿಂಗಳ ವರೆಗೆ ಪ್ರತಿನಿತ್ಯ ನಗರದ 15 ಬಡಾವಣೆಯ 600 ಕ್ಕೂ ಹೆಚ್ಚು ಮನೆಗಳಲ್ಲಿ ಏಕಕಾಲಕ್ಕೆ ವಚನ ವಿಶ್ಲೇಷಣೆ ಹಾಗೂ ಪ್ರತಿ ಭಾನುವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಶೋಧಕ ಡಾ.ವೀರಣ್ಣ ರಾಜೂರ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಿಚಾರಧಾರೆ ಮನೆ ಮನ ತಲುಪಿಸುವ ನಿಟ್ಟಿನಲ್ಲಿ ಕಳೆದ 25 ವರ್ಷದಿಂದ ನಿರಂತರ ಶ್ರಾವಣ ಮಾಸದ ಅವಧಿಯಲ್ಲಿ ಎಲ್ಲಾ ಬಡಾವಣೆಗಳ ಮನೆಯಲ್ಲಿ ನಿತ್ಯ ವಚನೋತ್ಸವ ನಡೆಯುತ್ತಾ ಬಂದಿದೆ. ಈ ಬಾರಿ ವಿಶೇಷ ಸಮಾರಂಭ ಏರ್ಪಡಿಸುವ ಮೂಲಕ ಮಕ್ಕಳಿಗೆ, ಯುವ ಜನರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ ಎಂದರು.
ಆ.1ರಂದು ಸಂಜೆ 5ಕ್ಕೆ ಇಲ್ಲಿನ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಶ್ರಾವಣ ಮಾಸದ ನಿತ್ಯ ವಚನೋತ್ಸವ ಕಾರ್ಯಕ್ರಮದ ಉದ್ಘಾಟನೆ ಹಾಗೂ ವಚನ ಪರಿಮಳ ಭಾಗ -4 ಪುಸ್ತಕ ಬಿಡುಗಡೆಯಾಗಲಿದೆ. ಈ ವೇಳೆ ನೇಗಿನಹಾಳ ಶ್ರೀ ಜಗದ್ಗುರು ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಡಾ.ವೀರಣ್ಣ ರಾಜೂರ ಅಧ್ಯಕ್ಷ ತೆ ವಹಿಸುವರು ಎಂದು ತಿಳಿಸಿದರು.
ಆ. 2ರಂದು ಬೆಳಗ್ಗೆ 10ಕ್ಕೆ ಬಸವ ಪಂಚಮಿ ಹಾಲುಣಿಸುವ ಕಾರ್ಯಕ್ರಮ ಮುಮ್ಮಿಗಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ವಿದ್ಯಾರ್ಥಿಗಳಿಗೆ ಹಾಲು, ಉಂಡಿ ವಿತರಿಸಲಾಗುವುದು. ಆ. 4ರಂದು ಸಂಜೆ 4 ಕ್ಕೆ ಸಕ್ಕರೆ ಖಾಯಿಲೆ ನಿಯಂತ್ರಣ ಕುರಿತ ಆರೋಗ್ಯ ಅಂಗಳ ಕಾರ್ಯಕ್ರಮ ಡಿಸಿ ಕಂಪೌಂಡ ಬಳಿಯ ಅಕ್ಕನ ಬಳಗದಲ್ಲಿ ನಡೆಯಲಿದೆ. ಆ. 11ರಂದು ಬೆಳಗ್ಗೆ 10ಕ್ಕೆ ಇಲ್ಲಿನ ಆರ್ಎಲ್ಎಸ್ ಶಾಲೆಯಲ್ಲಿ 5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ, ಬರೆಯುವ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದ ಮಕ್ಕಳಿಗೆ ನಗದು ಪ್ರಮಾಣ ಪತ್ರ ನೀಡಲಾಗುವುದು. ಸಂಜೆ 6.30 ಕ್ಕೆ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಅರಿವಿನ ಅಂಗಳ ವಿಶೇಷ ಉಪನ್ಯಾಸ ನಡೆಯಲಿದೆ ಎಂದು ವಿವರಿಸಿದರು.
ಆ. 18ರಂದು ಬೆಳಗ್ಗೆ 10.30ಕ್ಕೆ ಪ್ರೊ. ಸುರೇಶ ವನಹಳ್ಳಿ ಮನೆಯಲ್ಲಿ ಮಹಾಮನೆ ಸಮಾರಂಭ ಜರುಗಲಿದೆ. ಆ. 25ರಂದು ಮಧ್ಯಾಹ್ನ 3.30 ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ 1ರಿಂದ 7ನೇ ತರಗತಿಯ ಮಕ್ಕಳಿಗೆ ಬಸವಾದಿ ಶರಣ ಶರಣೆಯರ ರೂಪಕ, ಛದ್ಮವೇಶ ಸ್ಪರ್ಧೆ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಮುಂಚಿತ ಹೆಸರು ನೋಂದಾಯಿಸಬೇಕು ಎಂದರು.
ಸೆ.1ರಂದು ಸಂಜೆ 4ಕ್ಕೆ ಇಲ್ಲಿನ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಚನೋತ್ಸವ ಸಮಾರೋಪ ಜರುಗಲಿದೆ. ಬಸವತತ್ವ ಚಿಂತಕ ಶರಣೆ ವಾಗ್ದೇವಿತಾಯಿ ಸಾನ್ನಿಧ್ಯ ವಹಿಸುವರು.
ಶಿವಶರಣ ಕಲಬಶೆಟ್ಟರ, ರಾಜು ಮರಳಪ್ಪನವರ, ಉಮೇಶ ಕಟಗಿ, ಸಿದ್ದರಾಮಣ್ಣ ನಡಕಟ್ಟಿ, ಮಲ್ಲಿಕಾರ್ಜುನ ಚೌದರಿ, ಫಕೀರಗೌಡ್ರ ನಾಗನಗೌಡ್ರ, ಡಾ. ರಾಜಶೇಖರ ಬಶೆಟ್ಟಿ ಇದ್ದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಿಚಾರಧಾರೆ ಮನೆ ಮನ ತಲುಪಿಸುವ ನಿಟ್ಟಿನಲ್ಲಿ ಕಳೆದ 25 ವರ್ಷದಿಂದ ನಿರಂತರ ಶ್ರಾವಣ ಮಾಸದ ಅವಧಿಯಲ್ಲಿ ಎಲ್ಲಾ ಬಡಾವಣೆಗಳ ಮನೆಯಲ್ಲಿ ನಿತ್ಯ ವಚನೋತ್ಸವ ನಡೆಯುತ್ತಾ ಬಂದಿದೆ. ಈ ಬಾರಿ ವಿಶೇಷ ಸಮಾರಂಭ ಏರ್ಪಡಿಸುವ ಮೂಲಕ ಮಕ್ಕಳಿಗೆ, ಯುವ ಜನರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ ಎಂದರು.
ಆ.1ರಂದು ಸಂಜೆ 5ಕ್ಕೆ ಇಲ್ಲಿನ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಶ್ರಾವಣ ಮಾಸದ ನಿತ್ಯ ವಚನೋತ್ಸವ ಕಾರ್ಯಕ್ರಮದ ಉದ್ಘಾಟನೆ ಹಾಗೂ ವಚನ ಪರಿಮಳ ಭಾಗ -4 ಪುಸ್ತಕ ಬಿಡುಗಡೆಯಾಗಲಿದೆ. ಈ ವೇಳೆ ನೇಗಿನಹಾಳ ಶ್ರೀ ಜಗದ್ಗುರು ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಡಾ.ವೀರಣ್ಣ ರಾಜೂರ ಅಧ್ಯಕ್ಷ ತೆ ವಹಿಸುವರು ಎಂದು ತಿಳಿಸಿದರು.
ಆ. 2ರಂದು ಬೆಳಗ್ಗೆ 10ಕ್ಕೆ ಬಸವ ಪಂಚಮಿ ಹಾಲುಣಿಸುವ ಕಾರ್ಯಕ್ರಮ ಮುಮ್ಮಿಗಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ವಿದ್ಯಾರ್ಥಿಗಳಿಗೆ ಹಾಲು, ಉಂಡಿ ವಿತರಿಸಲಾಗುವುದು. ಆ. 4ರಂದು ಸಂಜೆ 4 ಕ್ಕೆ ಸಕ್ಕರೆ ಖಾಯಿಲೆ ನಿಯಂತ್ರಣ ಕುರಿತ ಆರೋಗ್ಯ ಅಂಗಳ ಕಾರ್ಯಕ್ರಮ ಡಿಸಿ ಕಂಪೌಂಡ ಬಳಿಯ ಅಕ್ಕನ ಬಳಗದಲ್ಲಿ ನಡೆಯಲಿದೆ. ಆ. 11ರಂದು ಬೆಳಗ್ಗೆ 10ಕ್ಕೆ ಇಲ್ಲಿನ ಆರ್ಎಲ್ಎಸ್ ಶಾಲೆಯಲ್ಲಿ 5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ, ಬರೆಯುವ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದ ಮಕ್ಕಳಿಗೆ ನಗದು ಪ್ರಮಾಣ ಪತ್ರ ನೀಡಲಾಗುವುದು. ಸಂಜೆ 6.30 ಕ್ಕೆ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಅರಿವಿನ ಅಂಗಳ ವಿಶೇಷ ಉಪನ್ಯಾಸ ನಡೆಯಲಿದೆ ಎಂದು ವಿವರಿಸಿದರು.
ಆ. 18ರಂದು ಬೆಳಗ್ಗೆ 10.30ಕ್ಕೆ ಪ್ರೊ. ಸುರೇಶ ವನಹಳ್ಳಿ ಮನೆಯಲ್ಲಿ ಮಹಾಮನೆ ಸಮಾರಂಭ ಜರುಗಲಿದೆ. ಆ. 25ರಂದು ಮಧ್ಯಾಹ್ನ 3.30 ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ 1ರಿಂದ 7ನೇ ತರಗತಿಯ ಮಕ್ಕಳಿಗೆ ಬಸವಾದಿ ಶರಣ ಶರಣೆಯರ ರೂಪಕ, ಛದ್ಮವೇಶ ಸ್ಪರ್ಧೆ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಮುಂಚಿತ ಹೆಸರು ನೋಂದಾಯಿಸಬೇಕು ಎಂದರು.
ಸೆ.1ರಂದು ಸಂಜೆ 4ಕ್ಕೆ ಇಲ್ಲಿನ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಚನೋತ್ಸವ ಸಮಾರೋಪ ಜರುಗಲಿದೆ. ಬಸವತತ್ವ ಚಿಂತಕ ಶರಣೆ ವಾಗ್ದೇವಿತಾಯಿ ಸಾನ್ನಿಧ್ಯ ವಹಿಸುವರು.
ಶಿವಶರಣ ಕಲಬಶೆಟ್ಟರ, ರಾಜು ಮರಳಪ್ಪನವರ, ಉಮೇಶ ಕಟಗಿ, ಸಿದ್ದರಾಮಣ್ಣ ನಡಕಟ್ಟಿ, ಮಲ್ಲಿಕಾರ್ಜುನ ಚೌದರಿ, ಫಕೀರಗೌಡ್ರ ನಾಗನಗೌಡ್ರ, ಡಾ. ರಾಜಶೇಖರ ಬಶೆಟ್ಟಿ ಇದ್ದರು.