ಆ್ಯಪ್ನಗರ

ಮೊದಲ ದಿನವೇ ಗೊಂದಲ

ಹುಬ್ಬಳ್ಳಿ: ನಿರ್ಮಾಣಗೊಂಡು ಹಲವು ವರ್ಷಗಳ ಬಳಿಕ ಲೋಕಾರ್ಪಣೆಗೆ ಕಾಯುತ್ತಿದ್ದ ವಾಕರಸಾ ಸಂಸ್ಥೆಯ ಹೊಸೂರ ಪ್ರಾದೇಶಿಕ ಸಾರಿಗೆ ನಿಲ್ದಾಣದಲ್ಲಿಅಂತೂ ಇಂತೂ ಬಸ್‌ಗಳ ಕಾರ್ಯಾಚರಣೆ ಭಾನುವಾರ ಔಪಚಾರಿಕ ಚಾಲನೆ ಪಡೆಯಿತು. ಆದರೆ ಬಸ್‌ಗಳ ಓಡಾಟ

Vijaya Karnataka 2 Mar 2020, 5:28 pm
ಹುಬ್ಬಳ್ಳಿ: ನಿರ್ಮಾಣಗೊಂಡು ಹಲವು ವರ್ಷಗಳ ಬಳಿಕ ಲೋಕಾರ್ಪಣೆಗೆ ಕಾಯುತ್ತಿದ್ದ ವಾಕರಸಾ ಸಂಸ್ಥೆಯ ಹೊಸೂರ ಪ್ರಾದೇಶಿಕ ಸಾರಿಗೆ ನಿಲ್ದಾಣದಲ್ಲಿಅಂತೂ ಇಂತೂ ಬಸ್‌ಗಳ ಕಾರ್ಯಾಚರಣೆ ಭಾನುವಾರ ಔಪಚಾರಿಕ ಚಾಲನೆ ಪಡೆಯಿತು. ಆದರೆ ಬಸ್‌ಗಳ ಓಡಾಟ ಮಾ.2(ಸೋಮವಾರ)ರಿಂದ ಆರಂಭಗೊಳ್ಳಲಿದೆ.
Vijaya Karnataka Web 01 SANTOSH 4 C_21
ಹುಬ್ಬಳ್ಳಿ ಹೊಸೂರ ಪ್ರಾದೇಶಿಕ ಬಸ್‌ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆಗೆ ಉಸ್ತುವಾರಿ ಸಚಿವರ ಜಗದೀಶ ಶೆಟ್ಟರ್‌, ಎಂಎಲ್‌ಸಿ ಬಸವರಾಜ ಹೊರಟ್ಟಿ ಹಸಿರು ನಿಶಾನೆ ತೋರಿದರು.


ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಎಂಎಲ್‌ಸಿ ಬಸವರಾಜ ಹೊರಟ್ಟಿ ಹುಬ್ಬಳ್ಳಿ-ವಿಜಯಪುರ ಬಸ್‌ಗೆ ಹಸಿರು ನಿಶಾನೆ ತೋರುವ ಮೂಲಕ ಔಪಚಾರಿಕ ಚಾಲನೆ ನೀಡಿದರು.

ಪ್ರಯಾಣಿಕರು, ಸಾರಿಗೆ ಸಿಬ್ಬಂದಿಗೆ ಸೌಲಭ್ಯಗಳ ಕೊರತೆ ಇದೆ ಎಂಬ ದೂರುಗಳ ಮಧ್ಯೆಯೂ ನಿಲ್ದಾಣ ಆರಂಭ ಪಡೆದಿದೆ. ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ಭಾನುವಾರ ಸಂಜೆವರೆಗೆ ನಿರಂತರ ಪ್ರಯತ್ನ ಮುಂದುವರಿಸಿದ್ದರು. ಊಟ, ಉಪಹಾರ ವ್ಯವಸ್ಥೆಯನ್ನು ಎರಡು ತಿಂಗಳ ವರೆಗೆ ತಾತ್ಕಾಲಿಕವಾಗಿ ಕಲ್ಪಿಸಲು ಯೋಜನೆ ರೂಪಿಸಿದ್ದು, ಎರಡು ದಿನಗಳಲ್ಲಿಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರಿಗೆ ಗೊಂದಲ
ಅಧಿಕಾರಿಗಳು ಮತ್ತು ಸಿಟಿ ಬಸ್‌ಗಳ ಡ್ರೈವರ್‌ಗಳು, ಕಂಡಕ್ಟರ್‌ಗಳು ಮೊದಲ ದಿನವೇ ಪ್ರಯಾಣಿಕರ ದಿಕ್ಕು ತಪ್ಪಿಸಿದ ಪ್ರಸಂಗಗಳು ಭಾನುವಾರ ನಡೆದವು. ಹಳೆ ಬಸ್‌ ನಿಲ್ದಾಣ ಮತ್ತು ಧಾರವಾಡ ಕಡೆಗಳಿಂದ ಸಂಚರಿಸುವ ಸಿಟಿ ಬಸ್‌ಗಳ ಡ್ರೈವರ್‌ಗಳು, ಕಂಡಕ್ಟರ್‌ಗಳು ವಿಜಯಪುರ, ಬಾಗಲಕೋಟ, ಮುಧೋಳ, ಗದಗ, ಕೊಪ್ಪಳ , ಬದಾಮಿ, ಇಳಕಲ್ಲ, ತುಳಜಾಪುರ, ಔರಂಗಾಬಾದ್‌, ರೋಣ ಕಡೆಗೆ ಹೋಗುವ ಪ್ರಯಾಣಿಕರು ಹೊಸೂರ ಟರ್ಮಿನಲ್‌ಗೆ ಇಳಿದುಕೊಳ್ಳುವಂತೆ ಸೂಚಿಸುತ್ತಿದ್ದರು. ಇವರ ಮಾತು ನಂಬಿದ ಪ್ರಯಾಣಿಕರು ಹೊಸೂರ ಟರ್ಮಿನಲ್‌ ಒಳಹೊಕ್ಕು ನೋಡಿದರೆ ಯಾವೊಂದೂ ಬಸ್‌ಗಳು, ಸಿಬ್ಬಂದಿ ಇಲ್ಲದ್ದು ಕಂಡು ಕಂಗಾಲಾದರು. ಪ್ರಯಾಣಿಕರು ಡ್ರೈವರ್‌ಗಳು, ಕಂಡಕ್ಟರ್‌ಗಳನ್ನು ಶಪಿಸುತ್ತ ಮತ್ತೆ ಮುಖ್ಯ ರಸ್ತೆಗೆ ಬಂದು 6 ರೂ. ಬಸ್‌ ಚಾಜ್‌ರ್‍ ತೆತ್ತು ಹಳೆ ಬಸ್‌ನಿಲ್ದಾಣಕ್ಕೆ ಬಂದು ನಿಗದಿತ ಬಸ್‌ಗಳನ್ನು ಹತ್ತಿದ ಘಟನೆಗಳು ನಡೆದವು.

ಇನ್ನೊಂದೆಡೆ ಈ ಮೊದಲು ಸ್ಥಳಾಂತರಿಸಿ ಮತ್ತೆ ಹಳೆ ಬಸ್‌ ನಿಲ್ದಾಣಕ್ಕೆ ವಾಪಸ್ಸಾಗಿದ್ದ ಶಿರಸಿ, ಕಾರವಾರ, ಮಂಗಳೂರು ಕಡೆಯ ಬಸ್‌ಗಳನ್ನು ಮತ್ತೆ ಹೊಸ ನಿಲ್ದಾಣಕ್ಕೆ ಸ್ಥಳಾಂತರಿಸಲಾಯಿತು. ಈ ಭಾಗದ ಪ್ರಯಾಣಿಕರೂ ಹಳೆ ನಿಲ್ದಾಣದಲ್ಲಿಸರಿಯಾದ ಮಾಹಿತಿ ಸಿಗದೇ ಗೊಂದಲಕ್ಕೀಡಾದರು.

ನಿರಂತರ ಪ್ರಯತ್ನ
ಸುಸಜ್ಜಿತ ವಿಶಾಲವಾದ ಹೊಸೂರ ನಿಲ್ದಾಣವನ್ನು 60 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾಗಿದ್ದು, ಹೊರ ಹೋಗುವ ನಿಲ್ದಾಣ ಪ್ರವೇಶಕ್ಕೆ ಸೂಕ್ತ ಮಾರ್ಗದ ಸಮಸ್ಯೆಯಿಂದ ಉದ್ಘಾಟನೆ ಹಾಗೇ ಉಳಿದುಕೊಂಡಿತ್ತು. ವಾಕರಸಾ ಸಂಸ್ಥೆಯ ಎಂಡಿ ರಾಜೇಂದ್ರ ಚೋಳನ್‌, ಈ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆಗೆ ನಾಲ್ಕು ತಿಂಗಳವರೆಗೆ ನಿರಂತರ ಅಧ್ಯಯನ ನಡೆಸಿ, ಕಾಲಕಾಲಕ್ಕೆ ಅಧಿಕಾರಿಗಳ ಸಭೆ ನಡೆಸಿ ಸುದೀರ್ಘ ಚರ್ಚೆ ಬಳಿಕ ಮಹೂರ್ತ ನಿಗದಿ ಪಡಿಸಿದ್ದರು. ನಗರ ಹಾಗೂ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಮುಖ್ಯಸಂಚಾರ ವ್ಯವಸ್ಥಾಪಕ ನೇತೃತ್ವವದಲ್ಲಿಅಧ್ಯಯನ ತಂಡ ರಚಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ