ಆ್ಯಪ್ನಗರ

ಮಾನವ ಹಕ್ಕು ನಾಗರಿಕತೆಯ ಅಡಿಪಾಯ

ಧಾರವಾಡ : ಮಾನವ ಹಕ್ಕುಗಳು ನಾಗರಿಕತೆಯ ಅಡಿಪಾಯ. ಅವುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಧರ್ಮವಾಗಿದೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ ಈಶ್ವರ ಭಟ್‌ ಹೇಳಿದರು.

Vijaya Karnataka 24 Jan 2019, 5:00 am
ಧಾರವಾಡ : ಮಾನವ ಹಕ್ಕುಗಳು ನಾಗರಿಕತೆಯ ಅಡಿಪಾಯ. ಅವುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಧರ್ಮವಾಗಿದೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ ಈಶ್ವರ ಭಟ್‌ ಹೇಳಿದರು.
Vijaya Karnataka Web the foundation of human rights civilization
ಮಾನವ ಹಕ್ಕು ನಾಗರಿಕತೆಯ ಅಡಿಪಾಯ


ನಗರದ ಕೆಎಲ್‌ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ನಡೆದ ಮಾನವ ಹಕ್ಕುಗಳ ಪ್ರಚಾರ ಮತ್ತು ಸಂರಕ್ಷ ಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

12ನೇ ಶತಮಾನದಲ್ಲಿ ಶರಣಕ್ರಾಂತಿಯ ಫಲವಾಗಿ ಭಾರತದಲ್ಲಿ ಮಾನವ ಹಕ್ಕುಗಳ ಕುರಿತು ಜನತಾ ಆಂದೋಲನ ಆರಂಭವಾಗಿತ್ತು. ಈ ನಿಟ್ಟಿನಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಿದೆ.ವಸಾಹತು ಶಾಹಿ ಆಡಳಿತಗಾರರಿಂದ ನಾಗರಿಕರು ಹಕ್ಕುಗಳಿಂದ ವಂಚಿತರಾಗಿ ಮಾನವ ಹಕ್ಕುಗಳ ಉಲ್ಲಂಘನೆ ಲಿಂಗ ಬೇಧ ತಾರತಮ್ಯ ಪರಸ್ಪರ ಹಕ್ಕುಗಳ ಗೌರವ ಇತ್ಯಾದಿ ಕುರಿತು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಕುರಿತು ಕರಡನ್ನು ಜಾರಿಗೆ ತಂದಿತು ಎಂದರು.

ಅಧ್ಯಕ್ಷ ತೆ ವಹಿಸಿ ಮಾತನಾಡಿದ ಪ್ರೊ.ವಿ.ವಿ.ಪಾಟೀಲ, ಮಾನವ ಹಕ್ಕುಗಳು ಮೂಲ ಹಕ್ಕಾಗಿದ್ದು, ಇವುಗಳ ಉಲ್ಲಂಘನೆಯಾಗದೆ ಪರಸ್ಪರರು ಗೌರವದೊಂದಿಗೆ ನಡೆದುಕೊಂಡಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.

ನಂತರ ಜರುಗಿದ ತಾಂತ್ರಿಕ ಅಧಿವೇಶನದಲ್ಲಿ ಗೌಹಾತಿಯ(ಅಸ್ಸಾಂ) ಡಾ.ಲೋಹಿತ್‌ ಡಿ.ನಾಯ್ಕರ್‌, ಡಾ. ಎಸ್‌.ಎನ್‌.ಹುಲ್ಲಣ್ಣವರ, ಡಾ.ಎ.ಆರ್‌.ಜಗತಾಪ, ಡಾ.ಅರುಂಧತಿ ಕುಲಕರ್ಣಿ, ಡಾ.ವಿಜಯಕುಮಾರ ಬೆಟಗಾರ, ಡಾ. ಎಂ.ವಿಶ್ವನಾಥ, ಡಾ.ಎಂ.ಎಂ.ಜವಳಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಸಂರಕ್ಷ ಣೆ ಕುರಿತು ತರಬೇತಿ ನೀಡಿದರು.

ಡಾ.ನೀಲಕ್ಕ ಪಾಟೀಲ, ಡಾ. ತಾರಾ ಬಿ.ಎನ್‌, ಪ್ರೊ. ಎಸ್‌.ಎಸ್‌.ಸಂಗೊಳ್ಳಿ, ಡಾ.ಕಸ್ತೂರಿ ಬಿಕ್ಕಣ್ಣವರ, ಪ್ರೊ. ಎ.ಡಿ.ನಿಡವಣಿ ಪ್ರೊ. ವಿಶ್ವನಾಥ ಜಿ, ಆರ್‌.ಸಿ.ಉಮರಾಣಿ, ಪ್ರೊ.ಆನಂದ ಜಕ್ಕಣ್ಣನ್ನವರ. ಪ್ರೊ. ಬ.ಎ. ಬೆಣ್ಣಿ. ಪ್ರೊ. ಶಿಲ್ಪಾ ಕೊಂಗಿ, ಪ್ರೊ. ಶೈಲಜಾ ಪಟ್ಟಣಶೆಟ್ಟಿ, ಪ್ರೊ. ಸಂಜನಾ ಹೋಳಿಮಠ. ಪ್ರೊ. ಸೌಮ್ಯಾ ಕುಬೇರ ಪ್ರೊ. ವನಜಾ ನಾಯಕ ಮುಂತಾದವರು ಉಪಸ್ಥಿತರಿದ್ದರು.

ಚೈತ್ರಾ ಗೌಡರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ.ಕೆ.ಎಫ್‌.ಪವಾರ ಸ್ವಾಗತಿಸಿದರು. ಡಾ.ಎಂ.ಪಿ.ಅನುರಾಧಾ ಪರಿಚಯಿಸಿದರು.

ಪ್ರೊ.ಶಿಲ್ಪಾ ದಾನಪ್ಪನವರ ನಿರೂಪಿಸಿದರು. ಪ್ರೊ. ಶಶಾಂಕಾ ಹಾದಿಮನಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ