ಧಾರವಾಡ: ರಂಗಭೂಮಿಯನ್ನು ಉಳಿಸಿ-ಬೆಳೆಸಿ ಅದರ ಎಲ್ಲತಿರುಳನ್ನು ಪರಿಚಯಿಸುವ ಕೆಲಸವನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, 64ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಶಾಂತಾದೇವಿ ಮಾಳವಾಡ ವೇದಿಕೆಯಲ್ಲಿಆಯೋಜಿಸಿದ್ದ 3 ನೇ ದಿನದ ನಾಟಕ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ರಾಜ್ಯಕ್ಕೆ ರಾಜ್ಯಪಾಲರು ಹೇಗೆ ಮುಖ್ಯಸ್ಥರಾಗಿ ಕಾರ್ಯವನ್ನು ನಿರ್ವಹಿಸುತ್ತಾರೋ, ಪಾಟೀಲ ಪುಟ್ಟಪ್ಪನವರು ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಳ ಅದರಲ್ಲೂಕೂಡ ಕನ್ನಡ ಕಟ್ಟುವ ಕೆಲಸಕ್ಕೆ ರಾಜ್ಯಪಾಲರಂತೆ ಈ ಇಳಿವಯಸ್ಸಿನಲ್ಲಿಮುಂದಾಳತ್ವವನ್ನು ವಹಿಸಿಕೊಂಡು ಕಾರ್ಯ ಮಾಡುತ್ತಿರುವುದು ನಮಗೆಲ್ಲರಿಗೂ ಪ್ರೇರಣಾ ಶಕ್ತಿ ಎಂದರು.
ಬೇಂದ್ರೆಯಂಥವರನ್ನು ನೀಡಿದ ಧಾರವಾಡಕ್ಕೆ ರವೀಂದ್ರನಾಥ ಟ್ಯಾಗೋರ ಅವರನ್ನು ಕರೆಯಿಸಿ ಧಾರವಾಡದ ಕಂಪನ್ನು ಅಕ್ಷರ ರೂಪದಲ್ಲಿರಾಷ್ಟ್ರದಾದ್ಯಂತ ಪಸರಿಸುವಂತೆ ಮಾಡಿದ ಹಿರಿಮೆ ಬೇಂದ್ರೆಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ರಂಗ ಕಲಾವಿದೆ ಜಯಶ್ರೀ ಜಾತಿಕರ್ತ ಸಂಗೊಳ್ಳಿ ರಾಯಣ್ಣನ ತಾಯಿಯ ಪಾತ್ರದ ತುಣುಕನ್ನು ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು. ನಂತರ ಅವರಿಗೆ ರಂಗ ಕಲಾ ಸನ್ಮಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಮಾರ್ತಾಂಡಪ್ಪ ಕತ್ತಿ, ಸಂಘದ ಹಿರಿಯ ಸದಸ್ಯ ಆರ್.ಎಂ.ಕಲ್ಮಠ, ಈಶ್ವರ ಬಡಿಗೇರ, ಆರ್.ಜಿ.ಎಂ.ದೇಸಾಯಿ, ಬ್ಯಾಲ್ಯಾಳದ ಕಲ್ಲೂರೇಶ್ವರ ಚಿಕ್ಕಮಠ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಂಗಣ್ಣ ಕುಂಟಿ, ಶಿವಣ್ಣ ಬೆಲ್ಲದ, ಸತೀಶ ತುರಮರಿ, ಚೈತ್ರಾ ಮೋಹನ ನಾಗಮ್ಮನವರ, ಸೇತುರಾಮ ಹುನಗುಂದ, ಬಿ.ಎಲ್.ಪಾಟೀಲ, ಇಸಬೆಲ್ಲಾಝೇವಿಯರ್ ದಾಸ್, ಮೀನಾಕ್ಷಿ ವಗದಾಳೆ ದ್ದರು.
ಅಕ್ಕಮಹಾದೇವಿ ಮತ್ತು ಶಾಂತಾದೇವಿ ಮಾಳವಾಡ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಆರಂಭದಲ್ಲಿಧಾರವಾಡದ ಗೀತಾ ಭಜನಾ ಮಂಡಳದವರು ಪ್ರಾರ್ಥಿಸಿದರು. ಸದಾನಂದ ಶಿವಳ್ಳಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾ್ತವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, 64ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಶಾಂತಾದೇವಿ ಮಾಳವಾಡ ವೇದಿಕೆಯಲ್ಲಿಆಯೋಜಿಸಿದ್ದ 3 ನೇ ದಿನದ ನಾಟಕ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ರಾಜ್ಯಕ್ಕೆ ರಾಜ್ಯಪಾಲರು ಹೇಗೆ ಮುಖ್ಯಸ್ಥರಾಗಿ ಕಾರ್ಯವನ್ನು ನಿರ್ವಹಿಸುತ್ತಾರೋ, ಪಾಟೀಲ ಪುಟ್ಟಪ್ಪನವರು ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಳ ಅದರಲ್ಲೂಕೂಡ ಕನ್ನಡ ಕಟ್ಟುವ ಕೆಲಸಕ್ಕೆ ರಾಜ್ಯಪಾಲರಂತೆ ಈ ಇಳಿವಯಸ್ಸಿನಲ್ಲಿಮುಂದಾಳತ್ವವನ್ನು ವಹಿಸಿಕೊಂಡು ಕಾರ್ಯ ಮಾಡುತ್ತಿರುವುದು ನಮಗೆಲ್ಲರಿಗೂ ಪ್ರೇರಣಾ ಶಕ್ತಿ ಎಂದರು.
ಬೇಂದ್ರೆಯಂಥವರನ್ನು ನೀಡಿದ ಧಾರವಾಡಕ್ಕೆ ರವೀಂದ್ರನಾಥ ಟ್ಯಾಗೋರ ಅವರನ್ನು ಕರೆಯಿಸಿ ಧಾರವಾಡದ ಕಂಪನ್ನು ಅಕ್ಷರ ರೂಪದಲ್ಲಿರಾಷ್ಟ್ರದಾದ್ಯಂತ ಪಸರಿಸುವಂತೆ ಮಾಡಿದ ಹಿರಿಮೆ ಬೇಂದ್ರೆಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ರಂಗ ಕಲಾವಿದೆ ಜಯಶ್ರೀ ಜಾತಿಕರ್ತ ಸಂಗೊಳ್ಳಿ ರಾಯಣ್ಣನ ತಾಯಿಯ ಪಾತ್ರದ ತುಣುಕನ್ನು ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು. ನಂತರ ಅವರಿಗೆ ರಂಗ ಕಲಾ ಸನ್ಮಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಮಾರ್ತಾಂಡಪ್ಪ ಕತ್ತಿ, ಸಂಘದ ಹಿರಿಯ ಸದಸ್ಯ ಆರ್.ಎಂ.ಕಲ್ಮಠ, ಈಶ್ವರ ಬಡಿಗೇರ, ಆರ್.ಜಿ.ಎಂ.ದೇಸಾಯಿ, ಬ್ಯಾಲ್ಯಾಳದ ಕಲ್ಲೂರೇಶ್ವರ ಚಿಕ್ಕಮಠ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಂಗಣ್ಣ ಕುಂಟಿ, ಶಿವಣ್ಣ ಬೆಲ್ಲದ, ಸತೀಶ ತುರಮರಿ, ಚೈತ್ರಾ ಮೋಹನ ನಾಗಮ್ಮನವರ, ಸೇತುರಾಮ ಹುನಗುಂದ, ಬಿ.ಎಲ್.ಪಾಟೀಲ, ಇಸಬೆಲ್ಲಾಝೇವಿಯರ್ ದಾಸ್, ಮೀನಾಕ್ಷಿ ವಗದಾಳೆ ದ್ದರು.
ಅಕ್ಕಮಹಾದೇವಿ ಮತ್ತು ಶಾಂತಾದೇವಿ ಮಾಳವಾಡ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಆರಂಭದಲ್ಲಿಧಾರವಾಡದ ಗೀತಾ ಭಜನಾ ಮಂಡಳದವರು ಪ್ರಾರ್ಥಿಸಿದರು. ಸದಾನಂದ ಶಿವಳ್ಳಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾ್ತವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.