ಆ್ಯಪ್ನಗರ

ಯಾರೋ ಭವಿಷ್ಯ ಹೇಳಿದ್ರೆ ಸರಕಾರ ಪತನವಾಗಲ್ಲ: ದೇಶಪಾಂಡೆ

ಧಾರವಾಡ : ರಾಜ್ಯ ಸಮ್ಮಿಶ್ರ ಸರಕಾರ ಪತನವಾಗಲಿದೆ ಎಂದು ಕೆಲವರು ಕನಸು ಕಾಣುತ್ತಿದ್ದಾರೆ. ಅವರು ಹಾಗೆಯೇ ಕನಸು ಕಾಣಲಿ. ನಮ್ಮ ಸರಕಾರದ ಮೇಲೆ ಜನರ ಆಶೀರ್ವಾದವಿದ್ದು, ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Vijaya Karnataka 2 Jan 2019, 5:41 pm
ಧಾರವಾಡ : ರಾಜ್ಯ ಸಮ್ಮಿಶ್ರ ಸರಕಾರ ಪತನವಾಗಲಿದೆ ಎಂದು ಕೆಲವರು ಕನಸು ಕಾಣುತ್ತಿದ್ದಾರೆ. ಅವರು ಹಾಗೆಯೇ ಕನಸು ಕಾಣಲಿ. ನಮ್ಮ ಸರಕಾರದ ಮೇಲೆ ಜನರ ಆಶೀರ್ವಾದವಿದ್ದು, ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.
Vijaya Karnataka Web the government does not fall if someone predicts deshpande
ಯಾರೋ ಭವಿಷ್ಯ ಹೇಳಿದ್ರೆ ಸರಕಾರ ಪತನವಾಗಲ್ಲ: ದೇಶಪಾಂಡೆ


ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಯಾರೋ ಸರಕಾರದ ಬಗ್ಗೆ ಭವಿಷ್ಯ ಹೇಳುತ್ತಿದ್ದಾರೆ ಎಂದಾಕ್ಷಣ ಅದು ಸಾಕಾರಗೊಳ್ಳುವುದಿಲ್ಲ'' ಎಂದು ಬಿಜೆಪಿಯ ಉಮೇಶ ಕತ್ತಿ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.

''ಉಮೇಶ ಕತ್ತಿ ಒಂದು ಕಾಲದಲ್ಲಿ ನನ್ನ ಗರಡಿಯಲ್ಲಿಯೇ ತಯಾರಾದ ಹುಡುಗ. ಈಗ ನನ್ನ ಗರಡಿ ಮನೆ ಬಿಟ್ಟು ಹೋಗಿದ್ದಾನೆ. ಅದಕ್ಕೆ ಈ ರೀತಿಯಾಗಿ ಮಾತನಾಡುತ್ತಿದ್ದಾನೆ'' ಎಂದು ಟಾಂಗ್‌ ನೀಡಿದರು.

''ಶಾಸಕ ರಮೇಶ್‌ ಜಾರಕಿಹೊಳಿ ಎಲ್ಲಿಯೂ ಹೋಗಿಲ್ಲ. ಅವರ ಮನೆಯ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿರುವುದು ಅವರ ವೈಯಕ್ತಿಕ ವಿಚಾರ'' ಎಂದು ತಿಳಿಸಿದರು.

''ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗವನ್ನು ಕೇಂದ್ರ ಸರಕಾರ ತಿರಸ್ಕಾರ ಮಾಡಿದೆ. ಈ ಕುರಿತು ಕೇಂದ್ರ ಸರಕಾರದ ಜತೆಗೆ ಮತ್ತೊಮ್ಮೆ ಚರ್ಚೆ ನಡೆಸುತ್ತೇನೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ