ಆ್ಯಪ್ನಗರ

ಸರಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸಲಿ

ಹುಬ್ಬಳ್ಳಿ : ಶ್ರೀ ಮಹಾಬಳೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ವತಿಯಿಂದ ವೀರಾಪೂರ ಓಣಿಯ ಮಹಾಬಳೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಸನ್ಮಾನಿಸಲಾಯಿತು.

Vijaya Karnataka 24 Dec 2018, 5:00 am
ಹುಬ್ಬಳ್ಳಿ : ಶ್ರೀ ಮಹಾಬಳೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ವತಿಯಿಂದ ವೀರಾಪೂರ ಓಣಿಯ ಮಹಾಬಳೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಸನ್ಮಾನಿಸಲಾಯಿತು.
Vijaya Karnataka Web DRW-23MANJU11A
ಹುಬ್ಬಳ್ಳಿ ವೀರಾಪೂರ ಓಣಿಯ ಮಹಾಬಳೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಜ್ಞಾನಯೋಗಿ ಚನ್ನಬಸವ ದೇಶಿ ಕೇಂದ್ರ ಸ್ವಾಮಿಜಿ ಹಾಗೂ ಬೊಮ್ಮನಹಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ ಇದ್ದರು.


ಹುಬ್ಬಳ್ಳಿ ಚನ್ನಬಸವೇಶ್ವರ ಸಂಸ್ಥಾನಮಠದ ಜ್ಞಾನಯೋಗಿ ಚನ್ನಬಸವ ದೇಶಿ ಕೇಂದ್ರ ಸ್ವಾಮಿಜಿ ಹಾಗೂ ಬೊಮ್ಮನಹಳ್ಳಿಯ ಶಿವಯೋಗೀಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಿತು. ವೇದಿಕೆ ಎದುರು ರೈತನ ಸಾಧನವಾದ ಕೂರಿಗೆ ಹೂಡುವ ಮೂಲಕ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಈರಣ್ಣ ಶಿಂತ್ರಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರನ್ನು ನೆನೆಯುವ ನಿಟ್ಟಿನಲ್ಲಿ ರೈತ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ರೈತರ ಸಂಕಷ್ಟಗಳಿಗೆ ಸರಕಾರಗಳು ಸ್ಪಂದಿಸಿದಾಗ ಮಾತ್ರ ರೈತರ ಏಳ್ಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾಧಕ ರೈತರಿಗೆ, ಹಿರಿಯರಿಗೆ ಸನ್ಮಾನ

ಇದೇ ವೇಳೆ ರೈತರಾದ ಮಹಾದೇವಪ್ಪ ಶಿಂತ್ರಿ,ಮಹಾದೇವಪ್ಪ ಮುತ್ತಣ್ಣವರ, ಗಂಗಪ್ಪ ಮುತ್ತಣ್ಣವರ, ನಿಂಗಪ್ಪ ಮುತ್ತಣ್ಣವರ,ರಾಜಶೇಖರ ಇಂಗಳಗಿ, ಯಲ್ಲಪ್ಪಗೌಡ್ರ ಪಾಟೀಲ, ನಾಗಪ್ಪ ಮೆಣಸಿನಕಾಯಿ, ಬಸುರಾಜ ಕೊಂಗಿ, ಗಿರಜವ್ವ ಸಂಶಿ, ಗೌರವ್ವ ಮುತ್ತಣ್ಣವರ, ಯಲ್ಲಪ್ಪ ಶಿಂತ್ರಿ,ದ್ಯಾಮಣ್ಣ ಛಬ್ಬಿ, ಪರಮೇಶ್ವರಪ್ಪ ಪಾಯಣ್ಣವರ, ಈರಣ್ಣಾ ಶಿಂತ್ರಿ, ದಾನಪ್ಪ ಶಿಂತ್ರಿ, ಬಸಪ್ಪ ಮುತ್ತಣ್ಣವರ, ಮಹಾದೇವಪ್ಪ ಎಂ., ಚನ್ನಬಸಪ್ಪ ಮುತ್ತಣ್ಣವರ, ಮಲ್ಲಮ್ಮ ಮುತ್ತಣ್ಣವರ, ಅಣ್ಣಮ್ಮ ಚವ್ಹಾಣ ಅವರನ್ನು ಗಣ್ಯರು ಸನ್ಮಾನಿಸಿದರು.

ಮುಖ್ಯ ಅತಿಥಿಯಾಗಿ ಶಂಕ್ರಣ್ಣ ಬಿಜವಾಡ, ಶಿವಣ್ಣ ಹೆಬ್ಬಳ್ಳಿ,ಶಶಿಕಾಂತ ಬಿಜವಾಡ, ಶೇಖರಗೌಡ ಪಾಟೀಲ, ಸಿದ್ಧಪ್ಪ ಮುತ್ತಣ್ಣವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ