ಆ್ಯಪ್ನಗರ

ಕೃಷಿಕ ಭವನ ಉದ್ಘಾಟನೆ ನಾಳೆ

ಕುಂದಗೋಳ : ರಾಜ್ಯ ಪ್ರದೇಶ ಕೃಷಿಕ ಸಮಾಜ ವತಿಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕೃಷಿಕ ಭವನ ಉದ್ಘಾಟನೆ ಹಾಗೂ ಕೃಷಿ ವಿಚಾರ ಸಂಕಿರಣ ಜೂ.16 ರಂದು ಮಧ್ಯಾಹ್ನ 1 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ಅರವಿಂದ ಕಟಗಿ ಹೇಳಿದರು.

Vijaya Karnataka 15 Jun 2019, 5:00 am
ಕುಂದಗೋಳ : ರಾಜ್ಯ ಪ್ರದೇಶ ಕೃಷಿಕ ಸಮಾಜ ವತಿಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕೃಷಿಕ ಭವನ ಉದ್ಘಾಟನೆ ಹಾಗೂ ಕೃಷಿ ವಿಚಾರ ಸಂಕಿರಣ ಜೂ.16 ರಂದು ಮಧ್ಯಾಹ್ನ 1 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ಅರವಿಂದ ಕಟಗಿ ಹೇಳಿದರು.
Vijaya Karnataka Web the inauguration of the krishi bhavan is tomorrow
ಕೃಷಿಕ ಭವನ ಉದ್ಘಾಟನೆ ನಾಳೆ


ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಅನೇಕ ಕೆಲಸಗಳಿಗೆ ಕುಂದಗೋಳಕ್ಕೆ ಬಂದಾಗ ಈ ಭವನದಲ್ಲಿ ವಿಶ್ರಾಂತಿ ಹಾಗೂ ರೈತ ಪರ ಸಭೆ-ಸಮಾರಂಭ ಮಾಡಲು ಅನುಕೂಲವಾಗುತ್ತದೆ. ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಅವರು ಉದ್ಘಾಟಿಸುವರು. ಶಾಸಕಿ ಕುಸುಮಾವತಿ ಶಿವಳ್ಳಿ ಅಧ್ಯಕ್ಷ ತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಬಸನಗೌಡ ಮಾಲಿಪಾಟೀಲ, ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥಗೌಡ, ಡಿ.ಎಲ್‌.ನಾಗರಾಜ, ಬಾಳಪ್ಪ ಬೆಳಕೋಡ, ಬಸುರಾಜ ಕುಂದಗೋಳ, ಜ್ಯೋತಿ ಬೆಂತೂರ, ಎನ್‌.ಎನ್‌.ಪಾಟೀಲ, ಉಮೇಶ ಹೆಬಸೂರ, ಭರಮಪ್ಪ ಮುಗಳಿ, ರಾಧಿಕಾ ಮೈಸೂರ,

ಟಿ.ಎಸ್‌.ರುದ್ರೇಶೆಪ್ಪ, ಬೀರಪ್ಪ ಕುರುಬರ, ಎ.ಬಿ.ಉಪ್ಪಿನ, ಪಿ.ಎನ್‌.ಪಾಟೀಲ, ಸಿ.ಜಿ.ಮೈತ್ರಿ ಭಾಗವಹಿಸುವರು ಎಂದು ತಿಳಿಸಿದರು.

ಸೋಮರಾವ ದೇಸಾಯಿ, ಸಿದ್ದಣ್ಣ ಇಂಗಳಳ್ಳಿ, ನಾಗರಾಜ ದೇಶಪಾಂಡೆ, ಮಾರುದ್ರಪ್ಪ ಮೂಲಿನಿ, ಖಾದರಸಾಬ ಡಗಲಿ, ರಮೇಶ ಕೊಪ್ಪದ, ಎ.ಟಿ. ಹುಬ್ಬಳ್ಳಿ, ಬಾಬಾಜಾನ ಮಿಶ್ರೀಕೋಟಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ