ಕುಂದಗೋಳ : ಪಗಡಿ ಆಟವು ಕೇವಲ ಮೋಜು ಅಥವಾ ಜೂಜಾಟದ ಆಟವಾಗದೆ ಸಮಾಜದ ಸಾಮರಸ್ಯ ಹಾಗೂ ಪರಸ್ಪರ ಬಾಂಧವ್ಯ ಬೆಸೆಯುವಂಥ ಆಟವಾದಾಗ ಮಾತ್ರ ಪಗಡಿ ಆಟಕ್ಕೆ ನಿಜವಾದ ಅರ್ಥ ಸಿಕ್ಕಂತಾಗುತ್ತದೆ ಎಂದು ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಕಾಳಿದಾಸ ನಗರದ ಶ್ರೀ ಮಾರುತಿ ಪಗಡಿ ಸಂಘದವರು ಏರ್ಪಡಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪಗಡಿ ಸ್ಪರ್ಧೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಹಾಭಾರತದ ಕಾಲದಿಂದ ಪಗಡಿ ಆಟವನ್ನು ಜೂಜಿನ ಆಟವೆಂದು ಪರಿಗಣಿಸಲಾಗುತ್ತದೆ. ಆದರೆ ಇಂದು ಬದಲಾಗುತ್ತಿರುವ ಸನ್ನಿವೇಶದೊಂದಿಗೆ ಪಗಡಿ ಆಟದಲ್ಲಿಯೂ ಕೂಡಾ ಸಾಕಷ್ಟು ಬದಲಾವಣೆಯಾಗಿದೆ. ಇದು ಪುರಾತನ ಕಾಲದ ವಿಶಿಷ್ಟವಾದ ಬುದ್ಧಿವಂತಿಕೆ ಹೆಚ್ಚಿಸುವಂತಹ ಆಟವಾಗಿದೆ. ಆದರೆ ಇಂದು ಈ ಆಟವು ನಶಿಸಿಹೋಗುತ್ತಿದ್ದು, ಎಲ್ಲೋ ಈ ಆಟದ ಹಿರಿಯ ತಲೆಗಳು ಈ ಆಟವನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನ ಮಾಡುತ್ತಿದ್ದು ನಿಜವಾಗಿಯೂ ಸಂತೋಷದ ಸಂಗತಿ. ಆದ್ದರಿಂದ ಇಂದಿನ ಯುವಕರು ಈ ಆಟವನ್ನು ಕಲಿತರೆ ಬುದ್ಧಿವಂತಿಕೆಯೊಂದಿಗೆ ಚಾಣಕ್ಷ ತೆಯನ್ನು ಕಲಿಯಬಹುದಾಗಿದೆ ಎಂದು ಹೇಳಿದರು.
ಶಾಸಕ ಸಿ.ಎಸ್. ಶಿವಳ್ಳಿ ಉದ್ಘಾಟಿಸಿ ಮಾತನಾಡಿ, ಇಂದಿನ ಯುವಕರಲ್ಲಿ ಕ್ರೀಡಾ ಮನೋಭಾವನೆ ಕುಸಿತಗೊಂಡಿದ್ದು, ಯುವಕರು ದಿನದ 24 ಗಂಟೆ ಮೊಬೈಲ್, ವಾಟ್ಸಪ್, ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಗ್ರಾಮೀಣ ಯುವಕರು ನಶಿಸಿಹೋಗುತ್ತಿರುವ ಪಗಡಿ ಆಟವನ್ನು ಮತ್ತೇ ಸಮಾಜದ ಮುಂದೇ ತರುವ ಕೆಲಸ ಮಾಡುತ್ತಿರುವುದು ನಿಜವಾಗಿಯು ಹೆಮ್ಮಯ ವಿಷಯವಾಗಿದೆ. ಅದರಂತೆಯೇ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾದ ಕಬಡ್ಡಿಯನ್ನು ಆಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ವಿಕಾಸಗೊಳ್ಳುತ್ತಾರೆ. ಆದ್ದರಿಂದ ಇಂತಹ ಆಟಗಳನ್ನು ಕೂಡಾ ಉಳಿಸಿ ಬೆಳೆಸುವಲ್ಲಿ ಯುವಕರು ಮುಂದಾಗಬೇಕಾಗಿದೆ. ಇದಕ್ಕಾಗಿ ನನ್ನ ಸಹಾಯ, ಸಹಕಾರ ಇದೆ ಎಂದು ಹೇಳಿದರು.
ಪಟ್ಟಣದ ಪಗಡಿ ಹಿರಿಯ ಆಟಗಾರರಾದ ಶೆಟ್ಟೆಪ್ಪ ಸಿ.ಕುಮ್ಮಿ, ಮಹಾದೇವಪ್ಪ ಪೂಜಾರ, ರಾಮಪ್ಪ ಅಳಗೋಡಿ,ಬಸಪ್ಪ ಚ ಹಾಲಿ, ಗಂಗಪ್ಪ ಹೊಸಮನಿ ಇವರನ್ನು ಸನ್ಮಾನಿಸಲಾಯಿತು. ಸಂಶಿಯ ಸಿದ್ಧಾರೂಢಮಠದ ನಿರ್ಗುಣಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಪಪಂ ಉಪಾಧ್ಯಕ್ಷ ಬಸವರಾಜ ವಟವಟಿ, ಸದಸ್ಯರಾದ ಮಾಬೂಬಲಿ ನದಾಫ್, ಗಿರಿಜವ್ವ ತಳವಾರ, ಬಸವರಾಜ ದೊಡಮನಿ ಮತ್ತಿತರರು ಹಾಜರಿದ್ದರು.
ಅವರು ಪಟ್ಟಣದ ಕಾಳಿದಾಸ ನಗರದ ಶ್ರೀ ಮಾರುತಿ ಪಗಡಿ ಸಂಘದವರು ಏರ್ಪಡಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪಗಡಿ ಸ್ಪರ್ಧೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಹಾಭಾರತದ ಕಾಲದಿಂದ ಪಗಡಿ ಆಟವನ್ನು ಜೂಜಿನ ಆಟವೆಂದು ಪರಿಗಣಿಸಲಾಗುತ್ತದೆ. ಆದರೆ ಇಂದು ಬದಲಾಗುತ್ತಿರುವ ಸನ್ನಿವೇಶದೊಂದಿಗೆ ಪಗಡಿ ಆಟದಲ್ಲಿಯೂ ಕೂಡಾ ಸಾಕಷ್ಟು ಬದಲಾವಣೆಯಾಗಿದೆ. ಇದು ಪುರಾತನ ಕಾಲದ ವಿಶಿಷ್ಟವಾದ ಬುದ್ಧಿವಂತಿಕೆ ಹೆಚ್ಚಿಸುವಂತಹ ಆಟವಾಗಿದೆ. ಆದರೆ ಇಂದು ಈ ಆಟವು ನಶಿಸಿಹೋಗುತ್ತಿದ್ದು, ಎಲ್ಲೋ ಈ ಆಟದ ಹಿರಿಯ ತಲೆಗಳು ಈ ಆಟವನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನ ಮಾಡುತ್ತಿದ್ದು ನಿಜವಾಗಿಯೂ ಸಂತೋಷದ ಸಂಗತಿ. ಆದ್ದರಿಂದ ಇಂದಿನ ಯುವಕರು ಈ ಆಟವನ್ನು ಕಲಿತರೆ ಬುದ್ಧಿವಂತಿಕೆಯೊಂದಿಗೆ ಚಾಣಕ್ಷ ತೆಯನ್ನು ಕಲಿಯಬಹುದಾಗಿದೆ ಎಂದು ಹೇಳಿದರು.
ಶಾಸಕ ಸಿ.ಎಸ್. ಶಿವಳ್ಳಿ ಉದ್ಘಾಟಿಸಿ ಮಾತನಾಡಿ, ಇಂದಿನ ಯುವಕರಲ್ಲಿ ಕ್ರೀಡಾ ಮನೋಭಾವನೆ ಕುಸಿತಗೊಂಡಿದ್ದು, ಯುವಕರು ದಿನದ 24 ಗಂಟೆ ಮೊಬೈಲ್, ವಾಟ್ಸಪ್, ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಗ್ರಾಮೀಣ ಯುವಕರು ನಶಿಸಿಹೋಗುತ್ತಿರುವ ಪಗಡಿ ಆಟವನ್ನು ಮತ್ತೇ ಸಮಾಜದ ಮುಂದೇ ತರುವ ಕೆಲಸ ಮಾಡುತ್ತಿರುವುದು ನಿಜವಾಗಿಯು ಹೆಮ್ಮಯ ವಿಷಯವಾಗಿದೆ. ಅದರಂತೆಯೇ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾದ ಕಬಡ್ಡಿಯನ್ನು ಆಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ವಿಕಾಸಗೊಳ್ಳುತ್ತಾರೆ. ಆದ್ದರಿಂದ ಇಂತಹ ಆಟಗಳನ್ನು ಕೂಡಾ ಉಳಿಸಿ ಬೆಳೆಸುವಲ್ಲಿ ಯುವಕರು ಮುಂದಾಗಬೇಕಾಗಿದೆ. ಇದಕ್ಕಾಗಿ ನನ್ನ ಸಹಾಯ, ಸಹಕಾರ ಇದೆ ಎಂದು ಹೇಳಿದರು.
ಪಟ್ಟಣದ ಪಗಡಿ ಹಿರಿಯ ಆಟಗಾರರಾದ ಶೆಟ್ಟೆಪ್ಪ ಸಿ.ಕುಮ್ಮಿ, ಮಹಾದೇವಪ್ಪ ಪೂಜಾರ, ರಾಮಪ್ಪ ಅಳಗೋಡಿ,ಬಸಪ್ಪ ಚ ಹಾಲಿ, ಗಂಗಪ್ಪ ಹೊಸಮನಿ ಇವರನ್ನು ಸನ್ಮಾನಿಸಲಾಯಿತು. ಸಂಶಿಯ ಸಿದ್ಧಾರೂಢಮಠದ ನಿರ್ಗುಣಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಪಪಂ ಉಪಾಧ್ಯಕ್ಷ ಬಸವರಾಜ ವಟವಟಿ, ಸದಸ್ಯರಾದ ಮಾಬೂಬಲಿ ನದಾಫ್, ಗಿರಿಜವ್ವ ತಳವಾರ, ಬಸವರಾಜ ದೊಡಮನಿ ಮತ್ತಿತರರು ಹಾಜರಿದ್ದರು.