ಆ್ಯಪ್ನಗರ

ಸೋಂಕಿತ ವ್ಯಕ್ತಿ ಹಳೆಹುಬ್ಬಳ್ಳಿ, ಕೇಶ್ವಾಪುರ,ಯಲ್ಲಾಪುರದಲ್ಲಿ ಸಂಚಾರ

ಸೋಮವಾರ ಕಂಡು ಬಂದ ಕೊರೊನಾ ಸೋಂಕು ಪೀಡಿತ 236 ವ್ಯಕ್ತಿಯು ನಾನಾ ಕಡೆಗೆ ತಿರುಗಾಡಿದ್ದು, ಈತ ಸಂಚರಿಸಿದ ಕಡೆಗಳಲ್ಲಿಸಂಪರ್ಕ ಹೊಂದಿದವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ...

Vijaya Karnataka 14 Apr 2020, 5:00 am
ಹುಬ್ಬಳ್ಳಿ : ಸೋಮವಾರ ಕಂಡು ಬಂದ ಕೊರೊನಾ ಸೋಂಕು ಪೀಡಿತ 236 ವ್ಯಕ್ತಿಯು ನಾನಾ ಕಡೆಗೆ ತಿರುಗಾಡಿದ್ದು, ಈತ ಸಂಚರಿಸಿದ ಕಡೆಗಳಲ್ಲಿಸಂಪರ್ಕ ಹೊಂದಿದವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಕೋರಲಾಗಿದೆ. ಮಾಚ್‌ 24ರಿಂದ ಏಪ್ರಿಲ್‌ 9ರವರೆಗೆ ಹಳೆ ಹುಬ್ಬಳ್ಳಿ ಸರ್ಕಲ್‌, ದುರ್ಗದ ಬೈಲ್‌, ಇಂಡಿಪಂಪ್‌ ಸರ್ಕಲ್‌, ಕೇಶ್ವಾಪುರ ಸರ್ಕಲ್‌, ದುರ್ಗದ ಬೈಲ್‌ ಮಾರ್ಕೇಟ್‌ ಪ್ರದೇಶಗಳಲ್ಲಿಸಂಚರಿಸಿ ದಿನಸಿ, ಔಷಧ, ಹಣ್ಣುಗಳನ್ನು ಖರೀದಿಸಿದ್ದಾನೆ.
Vijaya Karnataka Web the infected person is traffic in old yellow hub keshwapur yellapur
ಸೋಂಕಿತ ವ್ಯಕ್ತಿ ಹಳೆಹುಬ್ಬಳ್ಳಿ, ಕೇಶ್ವಾಪುರ,ಯಲ್ಲಾಪುರದಲ್ಲಿ ಸಂಚಾರ


ಇದಕ್ಕೂ ಮುನ್ನ ಸೋಂಕಿತ ವ್ಯಕಿಯು ಮಾರ್ಚ್ 23ರಂದು ಯಲ್ಲಾಪುರಕ್ಕೆ ತೆರಳಿದ್ದನು.

ಅಂದು 23ರಂದು ಬೆಳಗ್ಗೆ 9.30ಕ್ಕೆ ನ್ಯಾನೊ ಕಾರು ಚಲಾಯಿಸಿಕೊಂಡು ಕಾರವಾರ ರಸ್ತೆ, ಅಲ್ಲಿಂದ ಅಂಡರ್‌ ಬ್ರಿಜ್‌ ಮೂಲಕ ಡ್ರೈವರ್‌ನನ್ನು ಕರೆದುಕೊಂಡು ಯಲ್ಲಾಪುರಕ್ಕೆ ತೆರಳಿದ್ದಾನೆ. ಅಲ್ಲಿ11.30ರಿಂದ ಮಧ್ಯಾಹ್ನ 3ಗಂಟೆವರೆಗೆ ಅಲ್ಲಿನ ನ್ಯೂ ಲಕ್ಕಿ ಫುಟ್‌ವೇರ್‌ ಅಂಗಡಿ ತೆರೆದ್ದಾನೆ. ಯಾವೊಬ್ಬ ಗ್ರಾಹಕ ಅಂಗಡಿಗೆ ಭೇಟಿ ನೀಡಿಲ್ಲ. ಅಲ್ಲಿಂದ ಮಧ್ಯಾಹ್ನ 3ಕ್ಕೆ ಯಲ್ಲಾಪುರದಲ್ಲಿನ ಎಲ್‌ಐಸಿ ಕಚೇರಿಗೆ ತೆರಳಿ ಪ್ರಿಮಿಯಂ ಪಾವತಿಸಿದ್ದಾನೆ. ಆದರೆ, ಗ್ರಾಹಕರಾರು ಇರಲಿಲ್ಲ. 3-4 ಜನ ಸಿಬ್ಬಂದಿ ಮಾತ್ರ ಇದ್ದರು. ಬಳಿಕ ರಾತ್ರಿ 8ಕ್ಕೆ ಅಂಡರ್‌ ಪಾಸ್‌ ಮೂಲಕ ಹುಬ್ಬಳ್ಳಿಗೆ ವಾಪಸ್ಸಾಗಿದ್ದಾರೆ. ಡ್ರೈವರ್‌ನನ್ನು ಮನೆಗೆ ಬಿಟ್ಟು ಕಾರು ಚಲಾಯಿಸಿಕೊಂಡು ಮನೆಗೆ ತೆರಳಿದ್ದಾನೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಪ್ರವಾಸದ ವಿವರ ಮಾಹಿತಿಯಲ್ಲಿಸ್ಪಷ್ಪಪಡಿಸಲಾಗಿದೆ.

ಬಾಗಲಕೋಟ ಸೋಂಕಿತ ವ್ಯಕ್ತಿ ಹುಬ್ಬಳ್ಳಿಯಲ್ಲಿ
ಹುಬ್ಬಳ್ಳಿ: ಬಾಗಲಕೋಟದಲ್ಲಿಕೊರೊನಾ ವೈರಸ್‌ ಸೋಂಕಿತ 162ರ ವ್ಯಕ್ತಿಯು ಮಾ.16ರಂದು ರಾತ್ರಿ ಹುಬ್ಬಳ್ಳಿಗೆ ಬಂದಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತ ಅಂದು 8.30ಕ್ಕೆ ವಿಜಯಪುರದಿಂದ ಹುಬ್ಬಳ್ಳಿವರೆಗೆ ಕೆ.ಎ 29-ಎಫ್‌ 1531 ಬಸ್‌ನಲ್ಲಿಸಂಚರಿಸಿದ್ದಾನೆ. ಈ ಬಸ್‌ನಲ್ಲಿಸಂಚರಿಸಿದವರು ಇದ್ದರೆ ಕೊರೊನಾ ಸಹಾಯವಾಣಿ 104 ಇಲ್ಲವೇ 1077ಕ್ಕೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ