ಹುಬ್ಬಳ್ಳಿ: ನವಲಗುಂದ, ಕುಂದಗೋಳ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ಭಾರಿ ಮಳೆಯಿಂದ ಜಮೀನಿನಲ್ಲಿ ಅವಾಂತರ ಸೃಷ್ಟಿಸಿದ್ದು ಭಾರಿ ಹಾನಿ ಸಂಭವಿಸಿದೆ. ಸಂಪರ್ಕ ರಸ್ತೆ, ಕೃಷಿಹೊಂಡ, ಬದುವು, ನಾಲೆ ಹಾಗೂ ಬೆಳೆಗಳು ನೀರಿನಲ್ಲಿಕೊಚ್ಚಿ ಹೋಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಬೆಣ್ಣೆಹಳ್ಳ ಮತ್ತೆ ತುಂಬಿ ಹರಿದಿದ್ದರಿಂದ ಹಳ್ಳದ ಅಕ್ಕ-ಪಕ್ಕದ ಜಮೀನುಗಳ ಬೆಳೆ ನೀರುಪಾಲು ಆಗಿದೆ. ಇನ್ನು ಕುಂದಗೋಳ ತಾಲೂಕಿನಲ್ಲಿಹರಿಯುವ ಬೆಣ್ಣೆಹಳ್ಳ, ಕಗ್ಗೊಡಿ ಹಳ್ಳ, ದೊಡ್ಡಹಳ್ಳ, ಸೊಟ್ಟಹಳ್ಳ ಸೇರಿದಂತೆ ಇತರೆ ಹಳ್ಳಗಳು ತಿರುವು ಪಡೆದುಕೊಂಡು ರೈತರ ಹೊಲಕ್ಕೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮಳೆ ರಭಸಕ್ಕೆ ಬೆಳೆಗಳು ನೀರಿನಲ್ಲಿನಿಂತಿವೆ. ಇದರಿಂದ ಕೃಷಿ ಚಟುವಟಿಕೆ ಸಂಪೂರ್ಣ ಬಂದ್ ಆಗಿದ್ದು, ಜಮೀನುಗಳಿಗೆ ಹೋಗಲು ರಸ್ತೆಯಿಲ್ಲದೇ ರೈತರು ಪರದಾಡುವಂತಾಗಿದೆ. ಅಲ್ಪಸ್ವಲ್ಪ ಉಳಿದ ಶೇಂಗಾ ಬೆಳೆ ಕೂಡಾ ಕೈತಪ್ಪುವ ಆತಂಕ ಉಂಟಾಗಿದೆ. ಇನ್ನು ಬಿಟಿ ಹತ್ತಿ, ಮೆಣಸಿನಕಾಯಿ, ಹೆಸರು, ಅಲಸಂದಿ, ನವಣೆ, ಜೋಳ ಸೇರಿದಂತೆ ಇತರೆ ಬೆಳೆಗಳು ಅತಿಯಾದ ಮಳೆಯಿಂದ ಕುಂಠಿತಗೊಳ್ಳುತ್ತಿವೆ.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಮಳೆ ಅವಾಂತರ ಸೃಷ್ಟಿಸುತ್ತಿದೆ. ರಸ್ತೆ, ಗಟಾರುಗಳು ತುಂಬಿ ಹರಿಯುತ್ತಿದ್ದು, ಮನೆ ಸೋರುತ್ತಿವೆ. ಇದರಿಂದ ಸಾರ್ವಜನಿಕರು ಮನೆ ಬಿಟ್ಟು ಹೊರ ಬರುವುದು ಕಷ್ಟವಾಗಿದೆ.
ಬೆಣ್ಣೆಹಳ್ಳ ಮತ್ತೆ ತುಂಬಿ ಹರಿದಿದ್ದರಿಂದ ಹಳ್ಳದ ಅಕ್ಕ-ಪಕ್ಕದ ಜಮೀನುಗಳ ಬೆಳೆ ನೀರುಪಾಲು ಆಗಿದೆ. ಇನ್ನು ಕುಂದಗೋಳ ತಾಲೂಕಿನಲ್ಲಿಹರಿಯುವ ಬೆಣ್ಣೆಹಳ್ಳ, ಕಗ್ಗೊಡಿ ಹಳ್ಳ, ದೊಡ್ಡಹಳ್ಳ, ಸೊಟ್ಟಹಳ್ಳ ಸೇರಿದಂತೆ ಇತರೆ ಹಳ್ಳಗಳು ತಿರುವು ಪಡೆದುಕೊಂಡು ರೈತರ ಹೊಲಕ್ಕೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮಳೆ ರಭಸಕ್ಕೆ ಬೆಳೆಗಳು ನೀರಿನಲ್ಲಿನಿಂತಿವೆ. ಇದರಿಂದ ಕೃಷಿ ಚಟುವಟಿಕೆ ಸಂಪೂರ್ಣ ಬಂದ್ ಆಗಿದ್ದು, ಜಮೀನುಗಳಿಗೆ ಹೋಗಲು ರಸ್ತೆಯಿಲ್ಲದೇ ರೈತರು ಪರದಾಡುವಂತಾಗಿದೆ. ಅಲ್ಪಸ್ವಲ್ಪ ಉಳಿದ ಶೇಂಗಾ ಬೆಳೆ ಕೂಡಾ ಕೈತಪ್ಪುವ ಆತಂಕ ಉಂಟಾಗಿದೆ. ಇನ್ನು ಬಿಟಿ ಹತ್ತಿ, ಮೆಣಸಿನಕಾಯಿ, ಹೆಸರು, ಅಲಸಂದಿ, ನವಣೆ, ಜೋಳ ಸೇರಿದಂತೆ ಇತರೆ ಬೆಳೆಗಳು ಅತಿಯಾದ ಮಳೆಯಿಂದ ಕುಂಠಿತಗೊಳ್ಳುತ್ತಿವೆ.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಮಳೆ ಅವಾಂತರ ಸೃಷ್ಟಿಸುತ್ತಿದೆ. ರಸ್ತೆ, ಗಟಾರುಗಳು ತುಂಬಿ ಹರಿಯುತ್ತಿದ್ದು, ಮನೆ ಸೋರುತ್ತಿವೆ. ಇದರಿಂದ ಸಾರ್ವಜನಿಕರು ಮನೆ ಬಿಟ್ಟು ಹೊರ ಬರುವುದು ಕಷ್ಟವಾಗಿದೆ.