ಆ್ಯಪ್ನಗರ

ಕೌಶಲಯುತ ಸಿಬ್ಬಂದಿ ಸಂಸ್ಥೆಯ ಜೀವಾಳ

ಧಾರವಾಡ : ಆಡಳಿತಾತ್ಮಕ ವಿಷಯದಲ್ಲಿ ಕೌಶಲ ಹೊಂದಿರುವ ಸಿಬ್ಬಂದಿ ಸಂಸ್ಥೆಗಳ ಜೀವಾಳ ಎಂದು ಬೆಂಗಳೂರು ನ್ಯಾಕ್‌ ಸಂಸ್ಥೆಯ ಮೌಲ್ಯಮಾಪಕ ಡಾ.ವಿ.ಬಿ.ಹಿರೇಮಠ ಹೇಳಿದರು.

Vijaya Karnataka 29 Aug 2019, 5:00 am
ಧಾರವಾಡ : ಆಡಳಿತಾತ್ಮಕ ವಿಷಯದಲ್ಲಿ ಕೌಶಲ ಹೊಂದಿರುವ ಸಿಬ್ಬಂದಿ ಸಂಸ್ಥೆಗಳ ಜೀವಾಳ ಎಂದು ಬೆಂಗಳೂರು ನ್ಯಾಕ್‌ ಸಂಸ್ಥೆಯ ಮೌಲ್ಯಮಾಪಕ ಡಾ.ವಿ.ಬಿ.ಹಿರೇಮಠ ಹೇಳಿದರು.
Vijaya Karnataka Web the lifeblood of a talented staffing firm
ಕೌಶಲಯುತ ಸಿಬ್ಬಂದಿ ಸಂಸ್ಥೆಯ ಜೀವಾಳ


ನಗರದ ಕೆಎಲ್‌ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ, ಮಹಾವಿದ್ಯಾಲಯ ಮತ್ತು ಸ್ನಾತ್ತಕೋತ್ತರ ವಾಣಿಜ್ಯ ಕೇಂದ್ರದಲ್ಲಿ ನ್ಯಾಕ್‌ ಪ್ರಾಯೋಜಿತದಲ್ಲಿ ಹಮ್ಮಿಕೊಂಡ ಆಡಳಿತಾತ್ಮಕ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ವಿಷಯದ ಕುರಿತು ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಸಿಬ್ಬಂದಿ ವರ್ಗದ ಪಾತ್ರ ಅಪಾರವಾಗಿದೆ. ಇಂದಿನ ಡಿಜಿಟಲ್‌ ಯುಗದ ವೇಗಕ್ಕೆ ತಕ್ಕಂತೆ, ಆಡಳಿತ ಕೌಶಲಗಳನ್ನು ಅಳವಡಿಸಿಕೊಂಡಾಗ ಪಾರದರ್ಶಕತೆ ತರಲು ಸಾಧ್ಯ ಎಂದರು.

ಕೊಪ್ಪಳ ತರಬೇತಿ ಸಂಸ್ಥೆ ನಿರ್ದೇಶನಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಕೃಷ್ಣಮೂರ್ತಿ ಮಾತನಾಡಿ, ಸಿಬ್ಬಂದಿವರ್ಗವು ರಾಜ್ಯದ ಸಿಬ್ಬಂದಿ ಸೇವಾ ನಿಯಮಗಳ ಕುರಿತು ಅಪಾರವಾದ ತಿಳಿವಳಿಕೆಯನ್ನು ಹೊಂದಬೇಕು. ಸಂವಹನ ಕೌಶಲ್ಯ, ಲೇಖನ ಕೌಶಲ್ಯ, ರಚನಾ ಕೌಶಲ್ಯ, ಅಥೈರ್‍ಸುವಿಕೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದರು.

ಹೊಸತನ ಕಂಡುಕೊಳ್ಳಲಿ
ಅಧ್ಯಕ್ಷ ತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ವಿ.ವಿ.ಪಾಟೀಲ ಮಾತನಾಡಿ, ಆಡಳಿತದಲ್ಲಿ ಸಿಬ್ಬಂದಿ ವರ್ಗವೂ ಇಲಾಖೆಯ ಬೆನ್ನಲು ಇದ್ದಂತೆ. ಆಧುನಿಕತೆಯ ಬದಲಾವಣೆಗೆ ತಕ್ಕಂತೆ ಬದಲಾಗುವ ಮೂಲಕ ಸಿಬ್ಬಂದಿಗಳು ಹೊಸತನ ಕಂಡುಕೊಳ್ಳಬೇಕು ಎಂದರು.

ಇದೇ ವೇಳೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೊಪ್ಪಳದ ತರಬೇತಿ ಸಂಸ್ಥೆ ನಿರ್ದೇಶನಾಲಯದ ವಿಶ್ರಾಂತ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಖ್ಯಾತ ಲೆಕ್ಕಪರಿಶೋಧಕ ಕಪಿಲ್‌ ಭಂಡಾರಕರ್‌ ಅವರು ತೆರಿಗೆ, ವೇತನದ ಬಟವಾಡೆ ಹಾಗೂ ಕೌಶಲಾಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.

ಪ್ರೊ.ಕೆ.ಎಫ್‌.ಪವಾರ, ಡಾ.ತಾರಾ ಬಿ.ಎನ್‌, ಪ್ರೊ.ರೆಹಮಾನ ಗೊರಜನಾಳ, ಆರ್‌.ಸಿ.ಉಮರಾಣಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು 170 ಜನ ಆಡಳಿತಾತ್ಮಕ ಸಿಬ್ಬಂದಿ ಇದ್ದರು. ಸುಷ್ಮಾ ಮತ್ತು ಅಶ್ವಿನಿ ಪ್ರಾರ್ಥಿಸಿದರು. ಡಾ.ಎಂ.ಪಿ ಅನುರಾಧಾ ಸ್ವಾಗತಿಸಿದರು. ಪ್ರೊ.ಎಸ್‌.ಎಸ್‌.ಸಂಗೋಳ್ಳಿ ಪರಿಚಯಿಸಿದರು. ಪ್ರೊ ಸೌಮ್ಯ ಕುಬೇರ ನಿರೂಪಿಸಿದರು. ಡಾ.ಎನ್‌.ಸಿ.ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ