ಆ್ಯಪ್ನಗರ

ಎಲ್‌ಪಿಜಿ ಬಳಕೆದಾರರ ಸಂಖ್ಯೆ ಶೇ.21ರಷ್ಟು ಹೆಚ್ಚಳ

ಹುಬ್ಬಳ್ಳಿ : ಕೇಂದ್ರ ಸರಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಯಾದ ನಂತರ ಧಾರವಾಡ ಜಿಲ್ಲೆಯಲ್ಲಿ ಎಲ್‌ಪಿಜಿ ಬಳಸುವವರ ಸಂಖ್ಯೆ ಶೇ.98.45ಕ್ಕೆ ಏರಿಕೆ ಆಗಿರುವುದು ಸಂತಸದ ಸಂಗತಿ ಎಂದು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಜಿಲ್ಲಾ ನೋಡಲ್‌ ಅಧಿಕಾರಿ ಪಿವಿಆರ್‌ ಭಾರ್ಗವ್‌ ಹೇಳಿದರು.

Vijaya Karnataka 3 Jan 2019, 5:00 am
ಹುಬ್ಬಳ್ಳಿ : ಕೇಂದ್ರ ಸರಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಯಾದ ನಂತರ ಧಾರವಾಡ ಜಿಲ್ಲೆಯಲ್ಲಿ ಎಲ್‌ಪಿಜಿ ಬಳಸುವವರ ಸಂಖ್ಯೆ ಶೇ.98.45ಕ್ಕೆ ಏರಿಕೆ ಆಗಿರುವುದು ಸಂತಸದ ಸಂಗತಿ ಎಂದು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಜಿಲ್ಲಾ ನೋಡಲ್‌ ಅಧಿಕಾರಿ ಪಿವಿಆರ್‌ ಭಾರ್ಗವ್‌ ಹೇಳಿದರು.
Vijaya Karnataka Web the number of lpg users increased by 21 per cent
ಎಲ್‌ಪಿಜಿ ಬಳಕೆದಾರರ ಸಂಖ್ಯೆ ಶೇ.21ರಷ್ಟು ಹೆಚ್ಚಳ


ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಸರ್ವೇ ಪ್ರಕಾರ ಜಿಲ್ಲೆಯಲ್ಲಿ ಶೇ. 77ರಷ್ಟು ಜನರು ಮಾತ್ರ ಎಲ್‌ಪಿಜಿ ಬಳಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಶೇ. 21ರಷ್ಟು ಎಲ್‌ಪಿಜಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಯಾದ ಒಂದೂವರೆ ವರ್ಷದಲ್ಲಿ 34,700 ಮನೆಗಳಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಅದರಲ್ಲಿ ಶೇ.87ರಷ್ಟು ಜನರು ಸಿಲಿಂಡರ್‌ ಮರುಪೂರ್ಣಕ್ಕೆ ಆಗಮಿಸುತ್ತಿದ್ದಾರೆ. ಶೇ. 96.1 ರಷ್ಟು ಜನರು ಒಎಂಸಿಯಿಂದ ಸಾಲ ಸೌಲಭ್ಯ ಪಡೆದು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.

ಭವಿಷ್ಯದಲ್ಲಿ ಜಿಲ್ಲೆಯ ಎಲ್ಲ ಜನರಿಗೂ ಎಲ್‌ಪಿಜಿ ಸಂಪರ್ಕ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಫಲಾನುಭವಿಗಳು ಬಿಪಿಎಲ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ನೀಡಿದಲ್ಲಿ ನೂತನ ಸಂಪರ್ಕ ಕಲ್ಪಿಸಲಾಗುವುದು. ಯೋಜನೆಯಡಿ ಗ್ಯಾಸ್‌ ಪಡೆದವರಿಗೆ ಮೊದಲ ಬಾರಿಗೆ ಉಚಿತವಾಗಿ ಅನಿಲ ತುಂಬಿ ಕೊಡಲಾಗುವುದು. ಅಲ್ಲದೆ ಠೇವಣಿ ಸಹ ಇರುವುದಿಲ್ಲ. ಆಸಕ್ತರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಜಿಲ್ಲಾ ನೋಡಲ್‌ ಸಹಾಯಕ ಅಧಿಕಾರಿ ಶಬ್ಬೀರ್‌ ಮತ್ತು ಹಂಚಿಕೆದಾರ ಅನೂಪ್‌ ರೇವಣಕರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ