ಆ್ಯಪ್ನಗರ

ಇಂದಿನಿಂದ ಪಂಚರಾತ್ರೋತ್ಸವ

ಹುಬ್ಬಳ್ಳಿ: ಇಲ್ಲಿನ ಕುಸುಗಲ್ಲ ರಸ್ತೆ ಕುಬೇರಪುರಂ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.15 ರಿಂದ 19ರ ವರೆಗೆ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 348ನೇ ಆರಾಧನಾ ಪಂಚರಾತ್ರೋತ್ಸವ ನಡೆಯಲಿದೆ.

Vijaya Karnataka 15 Aug 2019, 5:00 am
ಹುಬ್ಬಳ್ಳಿ: ಇಲ್ಲಿನ ಕುಸುಗಲ್ಲ ರಸ್ತೆ ಕುಬೇರಪುರಂ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.15 ರಿಂದ 19ರ ವರೆಗೆ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 348ನೇ ಆರಾಧನಾ ಪಂಚರಾತ್ರೋತ್ಸವ ನಡೆಯಲಿದೆ.
Vijaya Karnataka Web the pancharatravatsa from today
ಇಂದಿನಿಂದ ಪಂಚರಾತ್ರೋತ್ಸವ


ಆ.15 ರಂದು ಬೆಳಗ್ಗೆ 7ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಪಲ್ಲಕ್ಕಿ, ರಥೋತ್ಸವ, ಧ್ವಜಾರೋಹಣ, ಗೋಪೂಜೆ, ಧಾನ್ಯಪೂಜೆ, ಮಂಗಳಾರತಿ ನಡೆಯಲಿದೆ. ಆ.16 ರಂದು ಬೆಳಗ್ಗೆ 7.30 ರಿಂದ ಸಂಜೆ 7 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಮಧ್ಯಾರಾಧನೆ ಆ.17 ರಂದು ಬೆಳಗ್ಗೆ 8ಕ್ಕೆ ಗುರುಸಾರ್ವಭೌಮರಿಗೆ 108 ಕಲಶದಿಂದ ಕ್ಷೀರಾಭಿಷೇಕ ನಡೆಯಲಿದೆ. ಉತ್ತರಾರಾಧನೆ ಆ.18 ರಂದು ಬೆಳಗ್ಗೆ 8ಕ್ಕೆ ರಥಾಂಗ ಹೋಮ, ಅಷ್ಟಾಕ್ಷರ ಹೋಮ, 11ಕ್ಕೆ ಕುಬೇರಪುರಂ ಬಡಾವಣೆಯಲ್ಲಿ ರಥೋತ್ಸವ ನಡೆಯಲಿದೆ. ಆ.19 ರಂದು ಬೆಳಗ್ಗೆ 9ಕ್ಕೆ ವಾರ್ಷಿಕ ಸಂಕಷ್ಟಿ ನಿಮಿತ್ತ ಗಣಹೋಮ ನಡೆಯಲಿದೆ. ಮಾಹಿತಿಗೆ ಸೀತಾ ಪುರಾಣಿಕ 9481751796 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ