ಆ್ಯಪ್ನಗರ

ಮಸೀದಿ ಮುಂದೆ ಹಂದಿ: ಪೊಲೀಸರ ಭೇಟಿ

ಧಾರವಾಡ : ತಾಲೂಕಿನ ಬಾಡ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಮಸೀದಿ ಎದುರು ಹಂದಿ ಕಟ್ಟಿ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನದ ಹಿಂದೆ ರಾತ್ರಿ ಕಿಡಿಗೇಡಿಗಳು ಬಾಡ ಗ್ರಾಮದ ಮಧ್ಯದಲ್ಲಿರುವ ಮತ್ತು ಹೊರಭಾಗದಲ್ಲಿರುವ ಮಸೀದಿ ಎದುರು ಹಂದಿ ಕಟ್ಟಿ ಹೋಗಿದ್ದು, ಎಂದಿನಂತೆ ಸಮಾಜದವರು ಮಸೀದಿ ಸ್ವಚ್ಛಗೊಳಿಸಲು ಬೆಳಗಿನಜಾವ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.

Vijaya Karnataka 8 Jul 2019, 5:00 am
ಧಾರವಾಡ : ತಾಲೂಕಿನ ಬಾಡ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಮಸೀದಿ ಎದುರು ಹಂದಿ ಕಟ್ಟಿ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web the pig in front of the mosque a visit to the police
ಮಸೀದಿ ಮುಂದೆ ಹಂದಿ: ಪೊಲೀಸರ ಭೇಟಿ

ಎರಡು ದಿನದ ಹಿಂದೆ ರಾತ್ರಿ ಕಿಡಿಗೇಡಿಗಳು ಬಾಡ ಗ್ರಾಮದ ಮಧ್ಯದಲ್ಲಿರುವ ಮತ್ತು ಹೊರಭಾಗದಲ್ಲಿರುವ ಮಸೀದಿ ಎದುರು ಹಂದಿ ಕಟ್ಟಿ ಹೋಗಿದ್ದು, ಎಂದಿನಂತೆ ಸಮಾಜದವರು ಮಸೀದಿ ಸ್ವಚ್ಛಗೊಳಿಸಲು ಬೆಳಗಿನಜಾವ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಗ್ರಾಮದಲ್ಲಿನ ಮುಖಂಡರು ಘಟನೆ ವಿರೋಧಿಸಿ ಗ್ರಾಮೀಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಅಲ್ಲದೆ ಭಾನುವಾರ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ರೀತಿ ಕೃತ್ಯ ನಡೆಸಿದ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಘಟನೆ ನಡೆದ ಸ್ಥಳದಲ್ಲಿಯೇ ಪೊಲೀಸರು ಮೊಕ್ಕಾಮ ಹೂಡಿದ್ದು, ಪರಿಸ್ಥಿತಿ ಬಿಗಡಾಯಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ