ಆ್ಯಪ್ನಗರ

ಹೊರಟ್ಟಿ ವಿರುದ್ಧದ ಪತ್ರಿಕಾ ಹೇಳಿಕೆ ಸುಳ್ಳು

ಧಾರವಾಡ: ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ 2003ರಿಂದ ಬಸವರಾಜ ಹೊರಟ್ಟಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ನಮ್ಮ ಟ್ರಸ್ಟಗೆ ಅವರು ಯಾವುದೇ ರೀತಿ ಸಂಬಂಧ ಇರದೇ ಇರುವ ಎಂ. ಭರತ ಎಂಬ ವ್ಯಕ್ತಿ ಪ್ರತಿ ವರ್ಷ ವಿಧಾನ ಪರಿಷತ್‌ ಹಿರಿಯ ಸದಸ್ಯ ಹೊರಟ್ಟಿ ಅವರ ವಿರುದ್ಧ ಸುಳ್ಳು ಪತ್ರಿಕಾ ಹೇಳಿಕೆ

Vijaya Karnataka 10 Dec 2019, 5:00 am
ಧಾರವಾಡ: ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ 2003ರಿಂದ ಬಸವರಾಜ ಹೊರಟ್ಟಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ನಮ್ಮ ಟ್ರಸ್ಟಗೆ ಅವರು ಯಾವುದೇ ರೀತಿ ಸಂಬಂಧ ಇರದೇ ಇರುವ ಎಂ. ಭರತ ಎಂಬ ವ್ಯಕ್ತಿ ಪ್ರತಿ ವರ್ಷ ವಿಧಾನ ಪರಿಷತ್‌ ಹಿರಿಯ ಸದಸ್ಯ ಹೊರಟ್ಟಿ ಅವರ ವಿರುದ್ಧ ಸುಳ್ಳು ಪತ್ರಿಕಾ ಹೇಳಿಕೆ ನೀಡುತ್ತ ಬಂದಿದ್ದಾರೆ ಎಂದು ಆಲೂರ ವೆಂಕಟರಾವ್‌ ಪದವಿ ಪೂರ್ವ ಕಾಲೇಜನ ಪ್ರಾಚಾರ್ಯೆ ಸಿ.ಆರ್‌. ತಲವಾಯಿ ತಿಳಿಸಿದ್ದಾರೆ.
Vijaya Karnataka Web the press statement against horatti is false
ಹೊರಟ್ಟಿ ವಿರುದ್ಧದ ಪತ್ರಿಕಾ ಹೇಳಿಕೆ ಸುಳ್ಳು


ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಲೂರು ವೆಂಕಟರಾವ್‌ ಕಾಲೇಜ ಸಾಧನಕೇರಿಯಿಂದ ಸರಕಾರದ ಆದೇಶದ ಪ್ರಕಾರ ಮುಗದ ಗ್ರಾಮದ ಹನಮಂತಪ್ಪ ಮಾವಳೇರ ಪ್ರೌಢಶಾಲಾ ಆವರಣಕ್ಕೆ ಸ್ಥಳಾಂತರ ಆಗಿದೆ. ಎಂ.ಭರತ ಅವರು ಆರೋಪಿಸಿದಂತೆ, ಕಾಲೇಜಿನ ಯಾವುದೇ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವುದಾಗಲಿ, ವಿದ್ಯಾರ್ಥಿಗಳಿಗೆ ಹಣದ ಆಮಿಷ ನೀಡುವುದಾಗಲಿ ಮಾಡದೇ ಮುಕ್ತ ವಾತಾವರಣ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಹರದಲ್ಲಿಹೆಚ್ಚಿನ ಸ್ಪರ್ಧಾತ್ಮಕ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿ ಕಡಿಮೆ ಆದ ಪರಿಣಾಮ, ಮುಗದ ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರ ಮನವಿಯ ಮೆರೆಗೆ ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರಕಾರದ ಆದೇಶದ ಪ್ರಕಾರ ಮುಗದ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಬೇರೆ ಯಾವುದೇ ದುರುದ್ದೇಶ ಇರುವುದಿಲ್ಲ. ಮುಗದ ಗ್ರಾಮದ ಸುತ್ತಮುತ್ತಲು ಸಾಕಷ್ಟು ಪ್ರೌಢಶಾಲೆಗಳಿದ್ದು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಹಾಜರಾತಿಯನ್ನು ಹೆಚ್ಚಿಸಬಹುದೆಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.

ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿರುವ ಸರ್ವೋದಯ ಶಿಕ್ಷಣ ಟ್ರಸ್ಟ್‌ನ ಅಡಿಯಲ್ಲಿನಾವೆಲ್ಲಕಾರ್ಯನಿರ್ವಹಿಸುತ್ತಾ ಬಂದಿರುತ್ತೇವೆ. ಈ ರೀತಿ ಸುಳ್ಳು ಹೇಳಿಕೆ ನೀಡುತ್ತಿರುವ ವ್ಯಕ್ತಿಯ ಹೇಳಿಕೆಯನ್ನು ಯಾರು ನಂಬಬಾರದು ಎಂದು ಸಾರ್ವಜನಿಕರಿಗೆ ತಿಳಿಯಬಯಸುತ್ತೇವೆ ಎಂದು ತಿಳಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ