ಹುಬ್ಬಳ್ಳಿ : ಪ್ರತಿಯೊಬ್ಬ ವಿದ್ಯಾರ್ಥಿಯೂ ಭಗವಾನ ಮಹಾವೀರರ ಅಹಿಂಸಾ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಸತ್ಯವನ್ನು ನುಡಿಯುತ್ತ ಸನ್ಮಾರ್ಗದಲ್ಲಿ ನಡೆಯಬೇಕೆಂದು ಮುಖ್ಯಅತಿಥಿ ಡಿಸಿಪಿ ಜಿನೇಂದ್ರ ಕಣಗಾವಿ ಹೇಳಿದರು.
ಬೈಲಪ್ಪನವರ ನಗರದ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ.ಜೆ.ಛೆಡಾ ಐಟಿಐನಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಆದಪ್ಪನವರ ಮಾತನಾಡಿ ಸತ್ಯ,ತಪ, ಅಪರಿಗ್ರಹ, ಬ್ರಹ್ಮಚರ್ಯ ಹಾಗೂ ಸಮ್ಯಕ್ದರ್ಶನ, ಸಮ್ಯಕ್ಜ್ಞಾನ, ಸಮ್ಯಕ್ಚಾರಿತ್ರ್ಯಗಳ ಕುರಿತು ತಿಳಿಸಿ, ಭಗವಾನ ಮಹಾವೀರರ ಜೀವನ ಚರಿತ್ರೆ, ತತ್ವಗಳನ್ನು ವಿವರಿಸಿ. ವೃಷಭ ತೀರ್ಥಂಕರರ ಮಗ ಭರತ ಚಕ್ರವರ್ತಿ ಈ ದೇಶವನ್ನು ಆಳಿದ್ದರಿಂದ ಈ ದೇಶಕ್ಕೆ ಭಾರತ ಎಂಬುದಾಗಿ ಹೆಸರು ಬಂದಿರುವುದನ್ನು ತಿಳಸಿದರು.
ಪಿ.ಎಸ್.ಧರಣೆಪ್ಪನವರ, ಆರ್.ಟಿ.ಅಣ್ಣಿಗೇರಿ, ಆರ್.ಟಿ.ತವನಪ್ಪನವರ, ಎ.ಎಂ.ಶೆಟ್ಟೆಪ್ಪನವರ, ಬಿ.ಟಿ.ರಾಜಮಾನೆ, ಎಸ್.ಎಸ್.ವಂದಕುದರಿ, ಬಿ.ಎ.ರೋಖಡೆ ಉಪಸ್ಥಿತರಿದ್ದರು.