ಆ್ಯಪ್ನಗರ

ಸಾರ್ವಜನಿಕರಿಗೆ ಕಾನೂನು ತಿಳಿವಳಿಕೆ ಅವಶ್ಯ

ಧಾರವಾಡ : ರಾಷ್ಟ್ರೀಯ ಲೋಕ ಅದಾಲತ್‌ಗೆ ರಾಜಿ ಆಗುವ ಪ್ರಕರಣ ಉಭಯ ಕಕ್ಷಿದಾರರಿಗೆ ತಿಳಿವಳಿಕೆ ನೀಡುವ ಮೂಲಕ ಶಿಫಾರಸ್ಸು ಮಾಡಿ ನ್ಯಾಯ ಕೊಡಿಸುವ ಮೂಲಕ ಸಮಾಜದ ಋುಣ ತೀರಿಸಬಹುದು. ರಾಷ್ಟ್ರೀಯ ಲೋಕಅದಾಲತ್‌ ಮೂಲಕ ಸಮಾಜಮುಖಿ ಕಾರ್ಯ ಮಾಡಬೇಕು ಎಂದು ನ್ಯಾಯಮೂರ್ತಿ ಅರವಿಂದಕುಮಾರ ಹೇಳಿದರು.

Vijaya Karnataka 7 Jul 2019, 5:00 am
ಧಾರವಾಡ : ರಾಷ್ಟ್ರೀಯ ಲೋಕ ಅದಾಲತ್‌ಗೆ ರಾಜಿ ಆಗುವ ಪ್ರಕರಣ ಉಭಯ ಕಕ್ಷಿದಾರರಿಗೆ ತಿಳಿವಳಿಕೆ ನೀಡುವ ಮೂಲಕ ಶಿಫಾರಸ್ಸು ಮಾಡಿ ನ್ಯಾಯ ಕೊಡಿಸುವ ಮೂಲಕ ಸಮಾಜದ ಋುಣ ತೀರಿಸಬಹುದು. ರಾಷ್ಟ್ರೀಯ ಲೋಕಅದಾಲತ್‌ ಮೂಲಕ ಸಮಾಜಮುಖಿ ಕಾರ್ಯ ಮಾಡಬೇಕು ಎಂದು ನ್ಯಾಯಮೂರ್ತಿ ಅರವಿಂದಕುಮಾರ ಹೇಳಿದರು.
Vijaya Karnataka Web the public needs to know the law
ಸಾರ್ವಜನಿಕರಿಗೆ ಕಾನೂನು ತಿಳಿವಳಿಕೆ ಅವಶ್ಯ


ಧಾರವಾಡ ವಕೀಲರ ಸಂಘದ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ದಲ್ಲಿ ಎಲ್ಲ ನ್ಯಾಯವಾದಿಗಳು ಸಕ್ರೀಯವಾಗಿ ಪಾಲ್ಗೊಳ್ಳುವ ಕುರಿತು ಪೂರ್ವಭಾವಿ ಸಭೆಯಲ್ಲಿ ಅತಿಥಿಯಾಗಿ ಮಾತನಾಡಿದರು.

ನ್ಯಾಯಾಧೀಶರು, ನಾಯಾವಾದಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೂ ಸಾಮಾಜಿಕ ಜವಾಬ್ದಾರಿ ಇದೆ. ನ್ಯಾಯವಾದಿಗಳು ವೃತ್ತಿಯೊಂದಿಗೆ ಸಮಾಜದ ಹಿತ ಕಾಯುವಂತ ಕಾರ್ಯ ಮಾಡಬೇಕು. ತಿಂಗಳಲ್ಲಿ ಒಂದು ದಿನ ಕನಿಷ್ಟ 10 ಜನ ನ್ಯಾಯವಾದಿಗಳು ಸೇರಿ ಕಾನೂನು ಸಾಕ್ಷ ರತಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಕಾನೂನು ತಿಳುವಳಿಕೆ ನೀಡಬೇಕು ಎಂದರು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ.ಕೆ.ಭೂತೆ ಮಾತನಾಡಿ, ಜಿಲ್ಲೆಯಲ್ಲಿ ಜು.13ರಂದು ರಾಷ್ಟ್ರೀಯ ಲೋಕ ಅದಾಲತ್‌ ಜಿಲ್ಲಾ ಹಾಗೂ ಎಲ್ಲ ಅಧಿನ ನ್ಯಾಯಾಲಯಗಳಲ್ಲಿ ನಡೆಸಲಾಗುತ್ತಿದೆ ಎಂದರು.

ನ್ಯಾಯಾಧೀಶ ಚಿಣ್ಣನ್ನವರ.ಆರ್‌.ಎಸ್‌. ಮಾತನಾಡಿ, ಕಳೆದ ಲೋಕ ಅದಾಲತ್‌ದಲ್ಲಿ ಅತಿ ಹೆಚ್ಚು ಪ್ರಕರಣ ರಾಜಿ ಮಾಡಿಸುವ ಮೂಲಕ ಸಾಧನೆ ಮಾಡಲಾಗಿದೆ ಎಂದರು.

ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್‌.ಯು.ಬೆಳ್ಳಕ್ಕಿ ಅಧ್ಯಕ್ಷ ತೆ ವಹಿಸಿದ್ದರು. ನ್ಯಾಯವಾದಿ ವಿ.ಡಿ.ಕಾಮರಡ್ಡಿ, ಎಸ್‌.ಎಂ.ಜಾಲವಾದಿ ಪ್ರಕಾಶ ಉಡಕೇರಿ ಇದ್ದರು. ಆರ್‌.ಎಸ್‌.ಚಿಣ್ಣನ್ನವರ ಸ್ವಾಗತಿಸಿದರು. ಹೇಮಂತ ಕಣಕಿಕೊಪ್ಪ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ