ಆ್ಯಪ್ನಗರ

ರೇವಣಸಿದ್ದೇಶ್ವರ ವಿರಕ್ತಮಠದ ಜಾತ್ರೆ ಇಂದಿನಿಂದ

ಹುಬ್ಬಳ್ಳಿ : ತಾಲೂಕಿನ ರಾಯನಾಳ ಗ್ರಾಮದ ರೇವಣಸಿದ್ದೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಮೇ 6 ರಿಂದ 13ರ ವರೆಗೆ ನಡೆಯಲಿದೆ. ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ಹಾಗೂ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಸವಶಾಸ್ತ್ರೀಗಳು

Vijaya Karnataka 6 May 2019, 5:00 am
ಹುಬ್ಬಳ್ಳಿ : ತಾಲೂಕಿನ ರಾಯನಾಳ ಗ್ರಾಮದ ರೇವಣಸಿದ್ದೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಮೇ 6 ರಿಂದ 13ರ ವರೆಗೆ ನಡೆಯಲಿದೆ.
Vijaya Karnataka Web the ravana siddheshwar viraktatra fair is from today
ರೇವಣಸಿದ್ದೇಶ್ವರ ವಿರಕ್ತಮಠದ ಜಾತ್ರೆ ಇಂದಿನಿಂದ

ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ಹಾಗೂ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಸವಶಾಸ್ತ್ರೀಗಳು ಶರಣರ ಪ್ರವಚನ ನೀಡುವರು. ಮೇ 12ರಂದು ಬೆಳಗ್ಗೆ 7ಕ್ಕೆ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಯಿಂದ ಭಕ್ತರಿಗೆ ಲಿಂಗದೀಕ್ಷೆ ಮಹಾಮಂತ್ರೋಪದೇಶ ನಡೆಯಲಿದೆ. ಮೇ 13ರಂದು ಬೆಳಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಗಣಾರಾಧನೆ ಹಾಗೂ ಸಂಜೆ 5ಕ್ಕೆ ರೇವಣಸಿದ್ದೇಶ್ವರ ಮಹಾ ರಥೋತ್ಸವ ನಡೆಯಲಿದೆ. ರಾತ್ರಿ 10ಕ್ಕೆ ರೇವಣಸಿದ್ದೇಶ್ವರ ನವ ತರುಣ ನಾಟಕ ಮಂಡಳಿಯಿಂದ ನಾಟಕ ಪ್ರದರ್ಶನ ನಡೆಯಲಿದೆ.

ಮೇ 14ರಂದು ಪಲ್ಲಕ್ಕಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ ರಸಮಂಜರಿ ನಡೆಯಲಿದೆ. ಮೇ 15ರಂದು ಸಂಜೆ 4ಕ್ಕೆ ರೇವಡಿಹಾಳ ಗ್ರಾಮದೇವತೆಯ ಬೀಳ್ಕೊಡುಗೆ ಹಾಗೂ ಕಡುಬಿನ ಕಾಳಗ ನಂತರ ಬಯಲು ಕುಸ್ತಿ ನಡೆಯಲಿದೆ. ಮೇ 17ರಂದು ಸಂಜೆ 4ಕ್ಕೆ ಕಡೆ ಕುಸ್ತಿಕಣ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ